ಪೃಥ್ವಿರಾಜ್ ಕಾ ಕಿಲಾ ಎಂದೂ ಕರೆಯಲಾಗುವ ಈ ಕೋಟೆ ಹಿಸಾರ್ ಜಿಲ್ಲೆಯ ಹಂಸಿ ನಗರದಲ್ಲಿದೆ. ಇದನ್ನು 12ನೇ ಶತಮಾನದಲ್ಲಿ, ಹೆಸರೇ ಸೂಚಿಸುವಂತೆ ಆಗಿನ ಕಾಲದ ಪ್ರಸಿದ್ಧ ದೊರೆ ಪೃಥ್ವಿರಾಜ ಕಟ್ಟಿಸಿದ. ಹಿಸಾರ್ ಮತ್ತು ರೋಹ್ಟಕ್ ಒಳಗೊಂಡಿದ್ದ ಪ್ರದೇಶದ ರಾಜ್ಯಭಾರ ನಡೆಸುತ್ತಿದ್ದ ಬ್ರಿಟಿಷ್ ಆಡಳಿತಗಾರ ಜಾರ್ಜ್ ಥಾಮಸ್ ಇದನ್ನು...
ಹಿಸಾರ್ ನಗರದಲ್ಲಿರುವ ಫಿರೋಜ್ ಷಾ ಅರಮನೆ ಕಾಂಪ್ಲೆಕ್ಸನ್ನು ಕ್ರಿ.ಶ. 1354ರಲ್ಲಿ ಫಿರೂಜ್ ಷಾ ತುಘಲಕ್ ಕಟ್ಟಿಸಿದ. ಅರಮನೆ ಆವರಣದಲ್ಲಿ ಲಾತ್ ಕಿ ಮಸ್ಜಿದ್ ಎಂಬ ಮಸೀದಿಯಿದೆ. ಇಲ್ಲಿ 20 ಅಡಿ ಎತ್ತರದ ಮರಳಿನ ಕಂಬವನ್ನು ನಿರ್ಮಿಸಲಾಗಿದೆ.
ಕಾಂಪ್ಲೆಕ್ಸ್ ನ ಕೆಳ ಅಂತಸ್ತಿನಲ್ಲಿ ಅಪಾರ್ಟ್ ಮೆಂಟ್ ಮತ್ತು ದಿವಾನ್-ಇ-ಆಲಂ...
ಹಿಸಾರ್ ಜಿಲ್ಲೆಯ ಆಗ್ರೋಹ ಎಂಬಲ್ಲಿ ಅಗ್ರೋಹ ಧಾಮ ಅಥವಾ ಅಗ್ರೋಹ ಮಂದಿರ ಉಪಸ್ಥಿತವಿದೆ. ಇದರ ನಿರ್ಮಾಣ 1976ರಲ್ಲಿ ಆರಂಭವಾಗಿ 1984ರಲ್ಲಿ ಮುಕ್ತಾಯವಾಯಿತು. ದೇವಸ್ಥಾನದ ಆವರಣವನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಮಧ್ಯಭಾಗದಲ್ಲಿ ಮುಖ್ಯ ದೇವತೆಯಾಗಿರುವ ಮಹಾಲಕ್ಷ್ಮೀಗೆ ಮೀಸಲಾಗಿದ್ದರೆ, ಪಶ್ಚಿಮ ಮತ್ತು ಪೂರ್ವ ಭಾಗ...
ಹರ್ಯಾಣಾದ ಹಿಸಾರ್ ನಗರದ ರಾಷ್ಟ್ರೀಯ ಹೆದ್ದಾರಿ ನಂ.10ರಲ್ಲಿ ಈ ಸೇಂಟ್ ಥಾಮಸ್ ಚರ್ಚ್ ಉಪಸ್ಥಿತವಿದೆ. ಈ ಚರ್ಚ್ ನಿರ್ಮಾಣದ ಕೆಲಸ ಡಿಸೆಂಬರ್ 1860ರಲ್ಲಿ ಶುರುವಾಗಿ 1864ರ ಮೇ ತಿಂಗಳಲ್ಲಿ ಮುಕ್ತಾಯವಾಯಿತು. ಏಸು ಕ್ರಿಸ್ತನ 12 ಶಿಸ್ತುವಾದಿಗಳಲ್ಲಿ ಒಬ್ಬರಾದ ಸೇಂಟ್ ಥಾಮಸ್ ಗೆ ಇದನ್ನು ಸಮರ್ಪಿಸಲಾಗಿದೆ. ಆಗಿನ ಕಾಲದಲ್ಲಿ...
ಲೋಹರಿ ರಾಘೋ ಎಂಬ ಐತಿಹಾಸಿಕ ಹಳ್ಳಿ ಹಿಸಾರ್ ನ ಪೂರ್ವ ದಿಕ್ಕಿನಲ್ಲಿ 31 ಕಿ.ಮೀ. ದೂರದಲ್ಲಿ ಉಪಸ್ಥಿತವಿದೆ. ಸೋಥಿ-ಸಿಸ್ವಾಲ್ ಕಾಲಕ್ಕೆ ಸೇರಿದ ಮೂರು ಬೃಹತ್ ಐತಿಹಾಸಿಕ ದಿಬ್ಬಗಳಿಗೆ ಈ ಹಳ್ಳಿ ಮನೆಯಾಗಿದೆ. ಇವುಗಳನ್ನು 1980ರಲ್ಲಿ ಹರ್ಯಾಣಾದ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ಇಲಾಖೆಯ ಅಧಿಕಾರಿಗಳಾಗಿದ್ದ ಧೂಪ್ ಸಿಂಗ್ ಮತ್ತು...
ಕ್ರಿ.ಶ. 14 ಶತಮಾನದಲ್ಲಿ ಜೀವಿಸಿದ್ದ ಬಾಬಾ ಪನ್ನೀರ್ ಬಾದಷಾ ಎಂಬ ಆಧ್ಯಾತ್ಮಿಕ ಗುರುವಿನ ಗೋರಿಯೇ ಈ ಪ್ರಾಚೀನ ಗುಮ್ಮಟ. ಆತನ ಶಿಷ್ಯಂದಿರಲ್ಲಿ ಒಬ್ಬನಾಗಿದ್ದ ಶೇರ್ ಬರೋಲ್ (ದಾನಾ ಶೇರ್ ಎಂದೂ ಕರೆಯಲಾಗುತ್ತಿತ್ತು) ಕೂಡ ಒಬ್ಬ ಜನಪ್ರಿಯ ಸಂತನಾಗಿದ್ದ. ಆತ ಗಯಾಸ್-ಉದ್-ದಿನ್ ತುಘಲಕ್ ದೆಹಲಿಯ ರಾಜನಾಗುತ್ತಾನೆ ಎಂದು ಭವಿಷ್ಯ...
ಸ್ಥಳೀಯವಾಗಿ ಥೇರ್ ಎಂದೂ ಕರೆಯಲಾಗುವ ಅಗ್ರೋಹ ದಿಬ್ಬ ಪ್ರಾಚ್ಯವಸ್ತು ಸಂಶೋಧನಾಧ್ಯಯನ ಸ್ಥಳ. 1.5 ಕಿ.ಮೀ. ದೂರದಲ್ಲಿರುವ ಊರು ಅಗ್ರೋಹದಿಂದಾಗಿ ಇದಕ್ಕೂ ಅಗ್ರೋಹ ದಿಬ್ಬ ಎಂದು ಕರೆಯಲಾಗುತ್ತದೆ.
ಇವುಗಳ ಉತ್ಖನನದ ಶ್ರೇಯಸ್ಸು 1888-89ರಲ್ಲಿ ಉತ್ಖನ ಕೆಲಸ ಆರಂಭಿಸಿದ ಪ್ರಾಚ್ಯವಸ್ತು ಶಾಸ್ತ್ರಜ್ಞ ಸಿ.ಟಿ. ರೋಜರ್ ಅವರಿಗೆ...
ಈ ಬರ್ಸಿ ಗೇಟ್ ಹಿಸಾರ್ ನ ಪೂರ್ವ ಭಾಗದಲ್ಲಿ 26 ಕಿ.ಮೀ. ದೂರದಲ್ಲಿ ಉಪಸ್ಥಿತವಿದೆ. ನಗರದಲ್ಲಿರುವ ಐದು ಪ್ರಮುಖ ಪ್ರವೇಶ ದ್ವಾರದಲ್ಲಿ ಬಾರ್ಸಿ ಗೇಟ್ ಇದೆ. ನಗರದಲ್ಲಿರುವ ಪ್ರವೇಶ ದ್ವಾರಗಳಲ್ಲೊಂದು. ಉಳಿದ ದ್ವಾರಗಳು ದೆಹಲಿ ಗೇಟ್, ಹಿಸಾರ್ ಗೇಟ್, ಗೋಸಿಯನ್ ಗೇಟ್ ಮತ್ತು ಉಮ್ರಾ ಗೇಟ್.
ನಗರದ ಅತ್ಯಂತ ಜನನಿಬಿಡ...
ರಾಖಿ ಶಹಪುರ ಅಥವಾ ರಾಖಿ ಖಾಸ್ ಎಂದೂ ಕರೆಯಲಾಗುವ ರಾಖಿಗರಹಿ ಹಳ್ಳಿ ಹಿಸಾರ್ ಜಿಲ್ಲೆಯಲ್ಲಿದೆ. ಸರ್ವೇ ಆಫ್ ಇಂಡಿಯಾ ಮೊದಲು 1963ರಲ್ಲಿ ನಂತರ 1997ರಲ್ಲಿ ನಡೆಸಿದ ಉತ್ಖನನದಿಂದಾಗಿ ಈ ಸ್ಥಳದ ಐತಿಹಾಸಿಕ ಮಹತ್ವ ತಿಳಿದುಬಂದಿತು.
ಸುಮಾರು ಕ್ರಿ.ಪೂ. 2000 ವರ್ಷಗಳ ಹಿಂದೆ ಇದ್ದಿತೆನ್ನಲಾದ ಮತ್ತು ಒಣಗಿಹೋಗಿರುವ ಸರಸ್ವತಿ...
ನಾಲ್ವರು ಖ್ಯಾತ ಸೂಫಿ ಸಂತರ ಗೋರಿಗಳಿರುವ ಕಟ್ಟಡವಾಗಿರುವ ದರ್ಗಾ ಚಾರ್ ಕುತಬ್ ಹಿಸಾರ್ ಬಳಿ ಹಂಸಿ ನಗರದಲ್ಲಿದೆ. ಕುತಬ್ ಎಂದರೆ ಜನರಿಗೆ ಆದರ್ಶವಾಗಿರುವ ಸಂತ ಎಂದು ಅರ್ಥ. ಇಲ್ಲಿ ಸಮಾಧಿಗೊಳಗಾಗಿರುವ ಪ್ರಸಿದ್ಧ ಸೂಫಿ ಸಂತರೆಂದರೆ ಜಮಾಲ್-ಉದ್-ದಿನ್ ಹಂಸಿ, ಬುರ್ಹಾನ್-ಉದ್-ದಿನ್, ಕುತಬ್-ಉದ್-ದಿನ್ ಮನುವಾರ್ ಮತ್ತು...