ಈ ದೇವಸ್ಥಾನ ಶ್ರೀ ಅಚಲ ಸಾಹಿಬ್ ಗುರುದ್ವಾರದ ಎದುರು ಬದಿಯಲ್ಲಿದೆ. ಇಲ್ಲಿನ ದೇವರು ಕಾರ್ತಿಕ. ಈ ಶಬ್ದ ಕಾರ್ತಿಕೇಯ ಎಂಬ ಶಬ್ದದಿಂದ ಬಂದಿರುವುದು. ಇದರರ್ಥ ಸಂತೋಷ ಮತ್ತು ಶಕ್ತಿಯನ್ನು ಕೊಡುವವನು ಎಂದು. ಇವನು ಶಿವ ಮತ್ತು ಪಾರ್ವತಿಯ ಮಗ. ಇವನನ್ನು ದಕ್ಷಿಣದಲ್ಲಿ ಮುರುಗನ್ ಎಂದು ಕರೆಯುವರು. ಈ ದೇವಸ್ಥಾನದಲ್ಲಿರುವ ಒಂದು ಫಲಕದ ಪ್ರಕಾರ ಈ ಮಂದಿರವು ಸತ್ಯ ಯುಗಕ್ಕೆ ಸೇರಿರುವುದು ಎಂದು ತಿಳಿಯುತ್ತದೆ. ಇಲ್ಲಿಗೆ ವರ್ಷಪೂರ್ತಿ ಸಾವಿರಾರು ಭಕ್ತರು ಭೇಟಿಕೊಡುತ್ತಾರೆ. ಇಲ್ಲಿನ ಪ್ರಶಾಂತ ವಾತಾವರಣ ಎಲ್ಲರನ್ನು ಆಕರ್ಷಿಸುತ್ತದೆ.