ಗುಜರಾತಿನ ಗಿರ್ ಅಭಯಾರಣ್ಯವನ್ನು ಹೊರತು ಪಡಿಸಿದರೆ ಏಷಿಯಾ ಸಿಂಹಗಳ ಸಂತತಿ ಇಡೀ ಪ್ರಪಂಚದಲ್ಲೀ ಮತ್ತೆಲ್ಲೂ ಸಿಗವು. ಒಂದು ಕಾಲಕ್ಕೆ ಅವುಗಳ ಸಂಖ್ಯೆ ಕೇವಲ 13 ಆಗಿತ್ತು. ಆಗ ಜುನಾಗಢ್ ದ ನವಾಬನು ಅವುಗಳ ರಕ್ಷಣೆಯ ಹೊಣೆ ಹೊತ್ತನೆಂಬ ನಂಬಿಕೆ ಇದೆ. ಆದರೆ ಅವುಗಳ ಸಂಖ್ಯೆಯ ಕುರಿತು ನಂತರ ಲಭಿಸಿದ ದಾಖಲೆಗಳ ಪ್ರಕಾರ ಕೆಲವು ವಿರೋಧ ವಾದಗಳೂ ಕ್ಏಳಿ ಬರುತ್ತವೆ. ಅದೇನೆ ಇರಲಿ, ಗಿರ್ ಅರಣ್ಯದ ವಸತಿ ಕಾರ್ಯಗಳು ಹಾಗು ಇಲ್ಲಿನ ಪರಿಸರಏಷಿಯಾ ಸಿಂಹಗಳಿಗೆ ರಕ್ಷಣೆ ಒದಗಿಸತ್ತಿರುವುದಂತೂ ನಿಜ.
ಜನಸಂಖ್ಯೆ ಹೆಚ್ಚಿದಂತೆ ಈ ಭಾರತದ ಕಾಡಿನ ರಾಜನ ಸಂತತಿ ನಶಿಸುತ್ತಾ ಹೋಗುತ್ತಿತ್ತು. ಮನುಷ್ಯ ಇವುಗಳಿದ್ದ ಕಾಡುಗಳನ್ನು ಕೃಷಿ ಭೂಮಿ, ವಸತಿ ಹೀಗೆ ತನ್ನ ಅವಶ್ಯತೆಗಳನ್ನು ನೀಗಿಸಲು ಬಳಸಿಕೊಂಡ. ಪರಿಣಾಮ ಕಾಡಿನ ರಾಜನ ರಕ್ಷಣೆಗಾಗಿ ಒಂದು ಪ್ರತ್ಯೇಕ ವನ ನಿರ್ಮಿಸಿ, ಪ್ರಾಣಿ ಪ್ರೀಯರೆನಿಸಿ ಕೊಂಡ ಮಾನವರನ್ನು ಆ ವನಕ್ಕೆ ಕರೆದೊಯ್ದು, ಅಳಿವಿನ ಅಂಚಿನಲ್ಲಿರುವ ರಾಜನ ದರ್ಶನ ಮಾಡಿಸುವ ಪರಿಸ್ಥಿತಿ ಬಂದಿದೆ. ನಮ್ಮ ಈ ಅರಸನನ್ನು ರಕ್ಷಿಸುತ್ತಿರುವ ಕ್ರೆಡಿಟ್ ಗಿರ್ ರಾಷ್ಟ್ರೀಯ ಉದ್ಯಾನವನದ್ದು.