ಮಲ್ಗುಂಡ್ - ಗಣಪತಿಪುಲೆಯಿಂದ ಕೇವಲ ಒಂದು ಕಿ.ಮೀ ದೂರದಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ. ಪ್ರಖ್ಯಾತ ಮರಾಠಿ ಕವಿಯಾದ ಕವಿ ಕೇಶವಸುತ್ ಈ ಊರಿಗೆ ಸೇರಿದವರು. ಈಗ ಅವರ ಮನೆಯನ್ನು ವಿದ್ಯಾರ್ಥಿ ನಿಲಯವನ್ನಾಗಿ ಮಾರ್ಪಡಿಸಲಾಗಿದೆ.
ಇಲ್ಲಿಗೆ ಸಮೀಪದಲ್ಲಿ ಈ ಕವಿಯ ಸ್ಮರಣಾರ್ಥ ಮರಾಠಿ ಸಾಹಿತ್ಯ ಪರಿಷತ್ತಿನವರು ನಿರ್ಮಿಸಿರುವ ಸ್ಮಾರಕವನ್ನು ಕಾಣಬಹುದು. ಇದನ್ನು ಕೇಶವಸುತ್ ಸ್ಮಾರಕವೆಂದು ಕರೆಯುತ್ತಾರೆ. ಇದರ ಜೊತೆಗೆ ಮರಾಠಿ ಸಾಹಿತ್ಯಕ್ಕೆ ಸಂಬಂಧಿಸಿದ ಒಂದು ವಸ್ತುಸಂಗ್ರಹಾಲಯವಿದ್ದು, ನೋಡಬಹುದಾದ ಸ್ಥಳವಾಗಿದೆ.
ಮಲ್ಗುಂಡ್ ಗೆ ಮಹಾರಾಷ್ಟ್ರ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಅಥವಾ ಸ್ಥಳೀಯ ಆಟೋಗಳಲ್ಲಿ ಸುಲಭವಾಗಿ ತಲುಪಬಹುದು.


Click it and Unblock the Notifications