ಸಾಧನ ಕಸಾಯಿಯ ಮಸೀದಿಯನ್ನು ಭಾರತೀಯ ಪುರಾತತ್ವ ಇಲಾಖೆಯವರು ಐತಿಹಾಸಿಕ ಸ್ಮಾರಕವೆಂದು ಘೋಷಿಸಿದ್ದಾರೆ. ಈ ಮಸೀದಿಯು ಭಗರ ಸಾಧನಗೆ ಸಮರ್ಪಿತವಾಗಿದೆ. ಇವರು ಸಾಧನ ಕಸಾಯಿ ಎಂದೇ ಜನಪ್ರಿಯರಾಗಿದ್ದಾರೆ. ಇವರೊಬ್ಬರು ಪ್ರಸಿದ್ದ ಮುಸ್ಲಿಮ ಸಂತ, ಕವಿ ಮತ್ತು ಅನುಭಾವಿಗಳಾಗಿದ್ದರು. ಇವರ ಆಧ್ಯಾತ್ಮಿಕ ಸ್ತೋತ್ರಗಳನ್ನು ಸಿಖ್ಖರ ಪವಿತ್ರ ಗ್ರಂಥ 'ಗ್ರಂಥ ಸಾಹೀಬ'ನಲ್ಲಿ ಕಾಣಬಹುದು. ಈ ಮಸೀದಿಯನ್ನು ಸ್ಥಳೀಯ ಇಟ್ಟಿಗೆಗಳಿಂದಲೇ ನಿರ್ಮಾಣ ಮಾಡಲಾಗಿದೆ. ಈ ಸುಂದರ ಕಟ್ಟಡವು ಮೊಘಲ ವಾಸ್ತು ಶಿಲ್ಪ ಶೈಲಿಯಲ್ಲಿದೆ. ಈ ಮಸೀದಿಯಲ್ಲಿ ಸುಂದರ ಕಲಾ ವರ್ಣ ಚಿತ್ರಗಳನ್ನು ಕಾಣಬಹುದು.