ಮಹುವಾ ದಬಾರ್, ಬಸ್ತಿ ಜಿಲ್ಲೆಯಿಂದ 15 ಕಿಲೋಮೀಟರ್ ದೂರದಲ್ಲಿರುವ ಒಂದು ಉಪಜಿಲ್ಲೆಯಾಗಿದ್ದು, ಭಾರತದ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ಒಂದು ಹೆಮ್ಮೆಯ ಸ್ಥಾನ ಪಡೆದಿದೆ. 1857 ರಲ್ಲಿ ಭಾರತದ ಮೊದಲನೇ ಸ್ವಾತಂತ್ರ್ಯ ಹೋರಾಟದಲ್ಲಿ ಹತರಾದ ಬಾಂಬೆಯಲ್ಲಿ ಉದ್ಯಮಿಯಾಗಿದ್ದ ಮೊಹಮ್ಮದ್ ಲತೀಫ್ ಅನ್ಸಾರಿ, ಅವರ ಪೂರ್ವಜರು ಇಲ್ಲಿ ವಾಸಿಸುತ್ತಿದ್ದರು ಎಂದು ನಿರಂತರ ಸಂಶೋಧನೆ ಮೂಲಕ ಕಂಡುಹಿಡಿಯಲಾಗಿದೆ. ಸಂಶೋಧಕನ ತನ್ನ ಪ್ರವರ್ತಕ ಕೆಲಸಕ್ಕೆ ಭಾರತದ ರಾಷ್ಟ್ರಪತಿ ಡಾ ಎ.ಪಿ.ಜೆ ಅಬ್ದುಲ್ ಕಲಾಮ್ ಮೂಲಕ ಶ್ಲಾಘನೆಯ ಪ್ರಮಾಣಪತ್ರವನ್ನು ನೀಡಲಾಯಿತು.
ಬ್ರಿಟಿಷ್ ಸರ್ಕಾರದ ವಿರುದ್ಧ 1857, ಮೇ 10 ರಂದು ಮೀರತ್ ನಲ್ಲಿ ಮತ್ತು ಮೇ 11 ರಂದು ದೆಹಲಿಯಲ್ಲಿ ದಂಗೆಯನ್ನು ಆರಂಭಿಸಲಾಯಿತು. ಮಹುವಾ ದಬಾರ್ ನ ನಿವಾಸಿಗಳ ನೇತೃತ್ವ ವಹಿಸಿದ ಜಾಫರ್ ಅಲಿ, ಮನೋರಮಾ ನದಿ ದಾಟುವಾಗ 6 ಬ್ರಿಟಿಷ್ ಸೇನಾ ಅಧಿಕಾರಿಗಳನ್ನು ಕೊಂದನು.
ನಗರದ ಜನರ ಈ ಕಾರ್ಯದಿಂದ ಕೆರಳಿದ ಬ್ರಿಟಿಷ್ ಉಪ ನ್ಯಾಯಾಧೀಶ/ಮ್ಯಾಜಿಸ್ಟ್ರೇಟ್ ಡಬ್ಲ್ಯೂ.ಪೆಪ್ಪಿ ನೇತೃತ್ವದ ಅಶ್ವಸೇನೆ ನಗರವನ್ನು ಸಂಪೂರ್ಣವಾಗಿ ಸುಟ್ಟುಹಾಕಿತು! ಅಲ್ಲದೇ ಅಲ್ಲಿನ ಎಲ್ಲರನ್ನೂ ಕೊಂದು ಅವರ ಮನೆಗಳನ್ನು ನೆಲಸಮ ಮಾಡಲಾಯಿತು. ಇಂದು ಈ ನಗರ ಬ್ರಿಟಿಷರಿಂದಾದ ಹಾನಿಯನ್ನು ಸರಿದೂಗಿಸಲು ಕೃಷಿ ಭೂಮಿಯಾಗಿ ರೂಪಿತವಾಗಿದೆ.


Click it and Unblock the Notifications