ರಾಷ್ಟ್ರೀಯ ವನ್ ಚೇತನ ಕೇಂದ್ರವನ್ನು, ಬಸ್ತಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳ ನಡುವೆ ಕಾಡುಗಳು ಮತ್ತು ಪರಿಸರ ಬಗ್ಗೆ ಅರಿವು ಬೆಳೆಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಮಹಾನ್ ಸಂತ ಅವರ ಶ್ಲಾಘನೆಗೆ 'ಸಂತ ರವಿ ದಾಸ್ ವನ್ ವಿಹಾರ್'ಎಂದೂ ಕೂಡ ಇದನ್ನು ಕರೆಯಲಾಗುತ್ತದೆ.
ಬಸ್ತಿ ಒಂದು ಪುರಾತನ ನಗರ. ಇದು ಸಂತರಿಗೆ ಹಾಗೂ ಋಷಿ ಮುನಿಗಳಿಗೆ ಆಶ್ರಮವನ್ನು ನಿರ್ಮಿಸಿಕೊಳ್ಳುವ ಸ್ಥಳವಾಗಿತ್ತು. ಭಗವಾನ್ ರಾಮನ ಗುರುವಾದ ಋಷಿ ವಶಿಷ್ಠ ಗುರುವೂ ಸಹ ಇಲ್ಲಿ ಆಶ್ರಮವನ್ನು ಕಟ್ಟಿಕೊಂಡಿದ್ದರು ಎಂದು ಹೇಳಲಾಗುತ್ತದೆ. ಭಗವಾನ್ ರಾಮನು ತನ್ನ ಸಹೋದರ ಲಕ್ಷ್ಮಣನೊಂದಿಗೆ ಈ ಆಶ್ರಮದಲ್ಲಿ ಕೆಲವು ಸಮಯ ತಂಗಿದ್ದನು ಎಂದು ಹೇಳಲಾಗಿದೆ.
ಬಸ್ತಿ ನಗರ ಕೇಂದ್ರದಿಂದ ಸುಮಾರು ಒಂದು ಕಿ.ಮೀ ದೂರದಲ್ಲಿರುವ ಈ ಸ್ಥಳ ಗಣೇಶಪುರ್ ಹಳ್ಳಿಗೆ ಹತ್ತಿರದಲ್ಲಿದೆ. ರಾಷ್ಟ್ರೀಯ ವನ ಚೇತನ ಕೇಂದ್ರ ಮಕ್ಕಳ ಉದ್ಯಾನ ಮತ್ತು ಪ್ರವಾಸಿಗರಿಗೆ ಬೋಟಿಂಗ್ ಸೌಲಭ್ಯ ಒದಗಿಸುವ ಸುಂದರವಾದ ಸರೋವರವನ್ನು ಹೊಂದಿದೆ.
ಕುವಾನಾ ನದಿಯ ಸಂಪರ್ಕದಲ್ಲಿರುವ ಈ ಸ್ಥಳ ಬಹುದ್ವಾರವನ್ನು ಹೊಂದಿದೆ. ರಜಾದಿನಗಳು ಮತ್ತು ಭಾನುವಾರದಂದು ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಅಪಾರ.