ಶಿವನ ಭಕ್ತರನ್ನು ಹಲವು ನಂಬಿಕೆಗಳು, ಪಂಥಗಳು ಮತ್ತು ಅಖರಾಸುಗಳಲ್ಲಿ ಕಾಣಬಹುದು. ಅಖರಾಸು ಪಂಥದವರನ್ನು ಬಾಬಾಗಳು ಎಂದು ಗುರುತಿಸಲಾಗುತ್ತದೆ. ಇವರು ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಕಂಡುಬರುತ್ತಾರೆ. ಬರೇಲಿಯಲ್ಲಿ ಈ ರೀತಿಯ ನಾಲ್ಕು ಬಗೆಯ ಅಖರಾಸರನ್ನು ಕಾಣಬಹುದು. ಇವರಲ್ಲಿ ಒಂದು ಪಂಥದವರನ್ನು ಆನಂದ ಕ್ರಮದ ನಾಗಾ ಸಂನ್ಯಾಸಿಗಳು ಎಂದು ಕರೆಯುತ್ತಾರೆ. ಈ ಅಖರಾ ನಾಗಾ ಸಾಧುಗಳ ಕೇಂದ್ರ ಕಛೇರಿಯಾಗಿದೆ. ಇವರು ಶಿವನ ದೇವಾಲಯ ಕಟ್ಟಿದ್ದಾರೆ. ಇದನ್ನು ಅಲಕನಾಥ ಎಂದು ಕರೆಯುತ್ತಾರೆ. ಇದೇ ಅಲಕನಾಥ ದೇವಾಲಯ.
ಮುಖ್ಯದೇಗುಲದ ಪ್ರಾಂಗಣದಲ್ಲಿ ಇನ್ನೂ ಅನೇಕ ದೇವಾಲಯಗಳಿವೆ. ಇದು ಹಲವು ದೇವರುಗಳು ಹಾಗೂ ದೇವತೆಗಳಿಗೆ ಸಂಬಂಧಿಸಿದ್ದು. ಇದರ ಸುತ್ತಮುತ್ತ ಹಲವು ಕಟ್ಟಡಗಳು ಮತ್ತು ದೇವಾಲಯಗಳು ಇದ್ದು ಇದರಲ್ಲಿ ಸಂನ್ಯಾಸಿಗಳು ಅಥವ ಬಾಬಾಗಳು ಇರುತ್ತಾರೆ.
ಅಲಕನಾಥ ದೇವಾಲಯವು ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳನ್ನು ದಿನವೂ ತನ್ನತ್ತ ಸೆಳೆಯುತ್ತದೆ. ನೀವು ದೇವಾಲಯಕ್ಕೆ ಭೇಟಿ ನೀಡಿದರೆ ಅಲ್ಲಿ ಮೇಕೆಗಳು, ಹಸುಗಳು ಮತ್ತು ಒಂಟೆಗಳನ್ನು ಕಾಣಬಹುದು. ಸಾಧುಗಳು ಅಥವ ಬಾಬಾಗಳು ಭಕ್ತಾದಿಗಳಿಂದ ಕೊಡುಗೆಗಳನ್ನು ಸ್ವೀಕರಿಸಿ ಅವರನ್ನು ಆಶೀರ್ವದಿಸಿ ಹಣೆಗೆ ವಿಭೂತಿಯನ್ನು ಹಚ್ಚುತ್ತಾರೆ.