ಈ ದೇವಾಲಯಕ್ಕೆ ಭೇಟಿ ನೀಡಲು ವರ್ಷವಿಡಿ ಅಂಬೋಲಿಗೆ ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ. ದೇವಿ ಪಾರ್ವತಿಯನ್ನು ಹೀರಣ್ಯ ಕೇಶಿ ಎಂಬ ಹೆಸರಿನಲ್ಲಿ ಕರೆದು ಆಕೆಗೆ ದೇವಸ್ಥಾನ ನಿರ್ಮಿಸಿದ್ದಾರೆ. ಇಲ್ಲಿ ದೇವಿಯ ಪತಿ ಶಿವನ ವಿಗ್ರಹವನ್ನೂ ಪ್ರತಿಷ್ಠಾಪಿಸಲಾಗಿದೆ.
ಈ ದೇವಸ್ಥಾನವು ಹಿರಣ್ಯ ಕೇಶಿ ಎಂಬ ನದಿಯ ತಟದಲ್ಲೆ ಇದ್ದು, ಇಲ್ಲಿ ಮೀನು ಹಿಡಿಯುವುದು ಹಾಗೂ ಧ್ಯಾನಕ್ಕೆ ಉತ್ತಮ ಸ್ಥಳವಾಗಿದೆ. ಇಲ್ಲಿನ ನೈಸರ್ಗಿಕ ಸೌಂದರ್ಯ ಎಂಥವರನ್ನು ಮಂತ್ರಮುಗ್ದರನ್ನಾಗಿಸುತ್ತದೆ.