ಮನ್ನಾರಸಾಲ್ ಶ್ರೀ ನಾಗರಾಜ ದೇವಾಲಯ ಕೇರಳದ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ವಿಶ್ವದಾದ್ಯಂತ ಈ ದೇವಸ್ಥಾನಕ್ಕೆ ಭಕ್ತರಿದ್ದಾರೆ. ಕೇರಳದ ಶಕ್ತಿಕೇಂದ್ರ ಇದು. ಇಲ್ಲಿನ ಸ್ಥಳ ಪುರಾಣ ಅತ್ಯಂತ ಕುತೂಹಲಕಾರಿ. ಈ ದೇವಸ್ಥಾನಕ್ಕೆ ಪರಶುರಾಮ ಹಾಗೂ ವಿಷ್ಣುವಿನ ಕೃಪೆಯೂ ಇರುವುದಾಗಿ ನಂಬಿಕೆಯಿದೆ. ಹೆಚ್ಚಾಗಿ ಸಂತಾನ ಹೀನ ಹೆಣ್ಣುಮಕ್ಕಳು ಇಲ್ಲಿಗೆ ಬಂದು ಹರಕೆಹೊತ್ತುಕೊಳ್ಳುತ್ತಾರೆ. ಪ್ರತಿನಿತ್ಯವೂ ವಿಶೇಷ ಸಂಸ್ಕಾರಗಳು, ಶಾಸ್ತ್ರ ವಿಧಿಗಳು ಮತ್ತು ಸೇವೆಗಳು ಇಲ್ಲಿ ನಾಗರಾಜನನ್ನು ಸಂಪ್ರೀತಗೊಳಿಸುವ ಸಲುವಾಗಿಯೇ ನಡೆಯುತ್ತದೆ. ಚಿನ್ನದ ಆಭರಣ, ಚಿನ್ನ ಬೆಳ್ಳಿಯ ದೋಣಿಗಳು, ಹಾಲು, ಹಣ್ಣು, ಅರಿಶಿಣ ಇತ್ಯಾದಿಗಳು ಇಲ್ಲಿನ ದೇವರಿಗೆ ಹರಕೆಯ ರೂಪದಲ್ಲಿ ಅರ್ಪಿಸಲಾಗುತ್ತದೆ.
ಇಲ್ಲಿನ ಪ್ರಮುಖ ದೇವರು ಸರ್ಪವಾದುದರಿಂದ ದೇವಾಲಯದ ವಾತಾವರಣವು ಹುತ್ತದಂತೆಯೇ ಇದೆ ಮತ್ತು ದೇವಾಲಯದ ತುಂಬ ನಾಗರದ ಚಿತ್ರಗಳನ್ನು ಕಾಣಬಹುದಾಗಿದೆ.