ಪ್ರಾಚೀನ ಮಹಾಕಾವ್ಯ ಮಹಾಭಾರತದಲ್ಲಿಯೂ ಉಲ್ಲೇಖವಿರುವ ಕೇರಳದ ಪಾಂಡವರ ಶಿಲೆಯನ್ನು ನೀವು ನೋಡಲೇಬೇಕು. ಹಲವಾರು ಪೌರಾಣಿಕ ದಂತಕಥೆಗಳನ್ನು ಸಾರುವ ಈ ಪ್ರದೇಸ, ಇಲ್ಲಿನ ಗುಹೆಗಳನ್ನು ನೋಡುವುದೆಂದರೇ ಮನಸಿಗೆ ಪುಳಕ. ಕೌರವರೊಡನೆ ಕಟ್ಟಿದ ಪಂಥದಲ್ಲಿ ಸೋತ ಪಾಂಡವರು ಅಜ್ಞಾತವಾಸದ ಸಂದರ್ಭದಲ್ಲಿ ಇಲ್ಲಿ ನೆಲೆಸಿದ್ದರು ಎಂಬ ಪ್ರತೀತಿ. ಇಲ್ಲಿನ ಕಾಡುಗಳಲ್ಲಿ ಸತ್ತಾಡುತ್ತ, ಈ ಗುಹೆಯಲ್ಲಿಯೇ ಬಿಡಾರ ಹೂಡಿದ್ದರು ಎನ್ನುತ್ತದೆ ಸ್ಥಳ ಪುರಾಣ. ಈ ಗುಹೆ ಕಾಲಕ್ರಮೇಣ ರೂಪ ಬದಲಾಯಿಸಿ, ಸಣ್ಣ ಪರ್ವತದಂತೆ ಕಾಣುತ್ತಿದೆ.
ಇದೊಂದು ಐತಿಹಾಸಿಕ ಪ್ರವಾಸೀ ತಾಣ. ವಿದ್ಯಾರ್ಥಿಗಳು, ಇತಿಹಾಸ ಪ್ರಿಯರ ಹೆಚ್ಚಾಗಿ ಇಲ್ಲಿಗೆ ಆಗಮಿಸುತ್ತಾರೆ. ಕುಟುಂಬ ಸಮತ ಇಲ್ಲಿಗೆ ಬಂದು ವಿಹಾರ ಮಾಡಬಹುದು. ಅಂದುಕೊಂಡಷ್ಟು ಸುಲಭವಾಗಿ ಇಲ್ಲಿ ಸಂಚರಿಸಲಾಗದು. ಈ ಗುಡ್ಡವನ್ನೇರಿ ಎಲ್ಲೆಡೆ ಸುತ್ತುಗಟ್ಟಿದ ಪರಿಸರವನ್ನು ನೋಡಬಹುದೆಂಬುದೇ ನಿಸರ್ಗನೇಹಿಗಳಿಗೆ ರೋಮಾಂಚನ ಮೂಡಿಸುವ ಸಂಗತಿ. ಬಸ್, ರಿಕ್ಷಾ, ಅಥವಾ ಬಾಡಿಗೆ ಟ್ಯಾಕ್ಸಿಯನ್ನು ಮಾಡಸಿಕೊಂಡು ಇಲ್ಲಿಗೆ ಬರಬಹುದು.