ಸಂಗಮ, ಇದು ಸಂಸ್ಕೃತದ ಪದ. ಹೆಸರೇ ಸೂಚಿಸುವಂತೆ ಮೂರು ಪವಿತ್ರ ನದಿಗಳು ಬಂದು ಸೇರುವ ಸ್ಥಳ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಮಿಲನಕ್ಕೆ ತ್ರಿವೇಣಿ ಸಂಗಮ ಎಂದು ಕರೆಯುತ್ತಾರೆ. ಸರಸ್ವತಿ ನದಿ ಈ ನಿರ್ದಿಷ್ಟ ಸ್ಥಳದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದಾಳೆ ಎಂದು ಜನರು ಹೇಳುತ್ತಾರೆ. ಪ್ರಾಕೃತಿಕ ಸೌಂದರ್ಯವನ್ನು...
ಭಾರತದ ಪ್ರಾಚೀನ ಮಂದಿರಗಳಲ್ಲಿ ಪಾತಾಳಪುರಿ ಮಂದಿರವೂ ಒಂದು. ಇದರ ಇತಿಹಾಸ ವೇದಕಾಲದಿಂದಲೂ ಇದೆ. ಸುಂದರವಾದ ಕೆತ್ತನೆಯನ್ನು ಹೊಂದಿರುವ ಈ ಮಂದಿರ ಪಾತಾಳದಲ್ಲಿದೆ. ಇದು ಕೋಟೆಯ ಒಳಭಾಗದಲ್ಲಿ ಇದ್ದು, ಅಜರಾಮರವಾಗಿರುವ ಅಕ್ಷಯ್ ವಟ್ ಆಲದ ಮರದ ಸಮೀಪದಲ್ಲಿ ಇದೆ. ಇಲ್ಲಿ ಕೂಡ ಎಲ್ಲ ದ್ವಾರಗಳಿಂದ ಪ್ರವೇಶ ನಿಷೇಧಿಸಲಾಗಿದೆ. ಆದರೆ...
ಅಕ್ಬರ್ ದಿ ಗ್ರೇಟ್ ಕಟ್ಟಿಸಿದ ಕೋಟೆಗಳಲ್ಲಿ ಅಲಹಾಬಾದ್ ಕೋಟೆ ಅತಿ ದೊಡ್ಡದು. 1583ನೇ ಇಸ್ವಿಯಲ್ಲಿ ಕಟ್ಟಲಾಗಿರುವ ಈ ಕೋಟೆಯನ್ನು ಅಂದಿನ ಕಾಲದಲ್ಲಿ ಕಟ್ಟಲಾದ ಅತ್ಯುತ್ತಮ ಕೋಟೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಗಂಗಾ ಮತ್ತು ಯಮುನಾ ನದಿ ಸೇರುವ ಸ್ಥಳದಲ್ಲಿ ಈ ಕೋಟೆಯನ್ನು ಕಟ್ಟಲಾಗಿದೆ. ಅದ್ವಿತೀಯ ವಿನ್ಯಾಸ ಹಾಗು...
ಅಲಹಾಬಾದ್ ವಿಶ್ವವಿದ್ಯಾಲಯ ಎಂದು ಪ್ರಸಿದ್ಧಿ ಹೊಂದಿರುವ ಈ ವಿವಿ ಭಾರತದ ಎಲ್ಲಾ ಹಳೆಯ ಆಂಗ್ಲ ಭಾಷೆಯ ವಿವಿಗಳಲ್ಲಿ ಒಂದು. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಉತ್ತರ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಸರ್ ವಿಲಿಯಂ ಮುಯಿರ್ ಸೆಂಟ್ರಲ್ ಎಜ್ಯುಕೇಷನ್ ಇನ್ಸ್ಟಿಟ್ಯೂಟ್ ಆರಂಭಿಸುವ ಯೋಜನೆಗೆ ಚಾಲನೆ ನೀಡಿದರು. ಮುಯಿರ್...
ಅಲಹಾಬಾದ್ ಕೋಟೆಯ ಪಾತಾಳಪುರಿ ಮಂದಿರದ ಬಳಿಯಿರುವ ಅಕ್ಷಯ್ ವಟ್ ಮರವನ್ನು 'ಅವಿನಾಶಿನಿ ಆಲದ ಮರ' ಎಂದೂ ಕರೆಯುತ್ತಾರೆ. ಪುರಾಣದ ಪ್ರಕಾರ, ಒಮ್ಮೆ ಒಬ್ಬ ಋಷಿ ಮುನಿಯು ಭಗವಾನ್ ನಾರಾಯಣನನ್ನು ತನ್ನ ಅಗಾಧವಾದ ದೈವಿಕ ಶಕ್ತಿಯನ್ನು ತೋರಿಸಲು ಕೇಳಿದಾಗ, ಸ್ವಯಂ ನಾರಾಯಣನು ಒಂದು ಕ್ಷಣಕಾಲ ಮಾತ್ರ ಇಡೀ ವಿಶ್ವವನ್ನು ಜಲಾವೃತ ಮಾಡಿ...
ಹೆಸರೇ ಸೂಚಿಸುವಂತೆ ಆನಂದ ಭವನ ಆನಂದ ತುಂಬಿಕೊಂಡಿರುವ ಮನೆ ಎಂದೇ ಹೇಳಬಹುದು. ಇದು ನೆಹರೂ-ಗಾಂಧಿ ವಂಶದ ಪೂರ್ವಿಕರಿಗೆ ಸೇರಿದ ಒಂದು ದಿವ್ಯವಾದ ಆಲಯ. ಆನಂದ ಭವನವನ್ನು ಸ್ವರಾಜ್ ಭವನ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಸ್ವತಂತ್ರ ಭಾರದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ತಂದೆ ಮೋತಿಲಾಲ್ ನೆಹರೂ 19ನೇ ಶತಮಾನದ ಪ್ರಸಿದ್ಧ...
ಅಲಹಾಬಾದ್ ರೈಲ್ವೆ ಜಂಕ್ಷನ್ ಸಮೀಪದಲ್ಲಿ ಖುಸ್ರೋ ಬಾಗ್ ಉಪಸ್ಥಿತವಿದೆ. ಇದರ ಸುತ್ತ ಗೋಡೆಗಳನ್ನು ಕಟ್ಟಿ ಸಂರಕ್ಷಿಸಲಾಗಿದೆ. ಇಲ್ಲಿ ಮುಖಲ್ ದೊರೆ ಜಹಾಂಗಿರ್ ಪರಿವಾರದ ಮೂವರ ಗೋರಿಗಳಿವೆ. ಜಹಾಂಗಿರನ ಹಿರಿಯ ಮಗ ಖುಸ್ರಾವ್ ಮಿರ್ಜಾ, ಜಹಾಂಗಿರನ ಮೊದಲ ಪತ್ನಿ ಶಾಹ್ ಬೇಗಮ್, ಜಹಾಂಗಿರನ ಮಗಳು ರಾಜಕುಮಾರಿ ಸುಲ್ತಾನ್ ನಿಥಾರ್ ಬೇಗಂರ...
ಅಲಹಾಬಾದ್ ನ ಅತಿ ಮುಖ್ಯವಾದ ಮಂದಿರಗಳಲ್ಲಿ ಹನುಮಾನ್ ದೇಗುಲವೂ ಒಂದು. ಹಿಂದೂಗಳ ಧಾರ್ಮಿಕ ಸ್ಥಳಗಳಲ್ಲಿ ಇದು ಭಕ್ತರ ಫೆವರಿಟ್ ಮಂದಿರ. ಇದನ್ನು 1787ರಲ್ಲಿ ಕಟ್ಟಿಸಲಾಗಿದ್ದು, ಇಲ್ಲಿ 20 ಅಡಿ ಎತ್ತರದ ಹನುಮಾನ್ ವಿಗ್ರಹ ವಿಶ್ರಾಂತಿ ತೆಗೆದುಕೊಳ್ಳುತ್ತಿರುವಂತೆ ನಿರ್ಮಿಸಲಾಗಿದೆ. ಇತರ ಹಿಂದೂ ದೇವತೆಗಳ ಮೂರ್ತಿಗಳನ್ನು ಕೂಡ...
1931ರಲ್ಲಿ ಅಲಹಾಬಾದ್ ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಯಿತು. ಇದಕ್ಕೆ ಆರ್ಥಿಕ ನೆರವು ನೀಡಿದ್ದು ಕೇಂದ್ರ ಸಂಸ್ಕೃತಿ ಇಲಾಖೆ. ಅನೇಕ ಹಾಗು ಅನನ್ಯವಾದ ಕಲಾಕೃತಿಯ ವಸ್ತು ಪ್ರದರ್ಶನ ಇಲ್ಲಿರುವುದರಿಂದ ಅಲಹಾಬಾದ್ ಮ್ಯೂಸಿಯಂ ಸಾಕಷ್ಟು ಪ್ರಸಿದ್ಧಿ ಪಡೆದಿದೆ.
ನಗರದ ಮತ್ತೊಂದು ಆಕರ್ಷಣೀಯ ಸ್ಥಳವಾಗಿರುವ ಚಂದ್ರಶೇಖರ್...
ಭಾರತದಲ್ಲಿ ಸ್ಥಾಪಿತವಾದ ಪ್ರಪ್ರಥಮ ಹೈಕೋರ್ಟ್ ಎಂಬ ಹೆಗ್ಗಳಿಕೆಗೆ ಅಲಹಾಬಾದ್ ಹೈಕೋರ್ಟ್ ಪಾತ್ರವಾಗಿದೆ. ಪೂರ್ಣ ಪ್ರಮಾಣದಲ್ಲಿ ಇಡೀ ಉತ್ತರ ಪ್ರದೇಶ ರಾಜ್ಯದ ನ್ಯಾಯ ನಿರ್ವಹಣೆ ಕೆಲಸವನ್ನು ಹೈಕೋರ್ಟ್ ಹೊತ್ತುಕೊಂಡಿದೆ. ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಇದನ್ನು ಮೊದಲು ಆಗ್ರಾದಲ್ಲಿ ಸ್ಥಾಪಿಸಲಾಗಿತ್ತು. ನಂತರ ನಿರ್ವಹಣೆಗೆ...
19ನೇ ಶತಮಾನದಲ್ಲಿ ಬ್ರಿಟಿಷರಿಂದ ಕಟ್ಟಿಸಲ್ಪಟ್ಟ ಪ್ರಸಿದ್ಧ ಚರ್ಚ್ ಈ ಆಲ್ ಸೇಂಟ್ಸ್ ಕೆಥೆಡ್ರಲ್. ಇದನ್ನು ಗೋಥಿಕ್ ಶೈಲಿಯಿಂದ ಕಟ್ಟಿಸಲಾಗಿದೆ. ಕೋಲ್ಕತಾದಲ್ಲಿ ಕಟ್ಟಿಸಲಾದ ವಿಶ್ವವಿಖ್ಯಾತ ವಿಕ್ಟೋರಿಯಾ ಮೆಮೋರಿಯಲ್ ಕಟ್ಟಿಸಿದ ಪ್ರಖ್ಯಾತ ವಾಸ್ತುಶಿಲ್ಪಿ ವಿಲಿಯಂ ಎಮರಸನ್ ಇದನ್ನು ಕೂಡ ಕಟ್ಟಿಸಿದ.
ಈ ಬೃಹತ್ತಾದ ಕಟ್ಟಡ...
133 ಎಕರೆ ಪ್ರದೇಶವನ್ನು ಆವರಿಸಿದ ಈ ಆಲ್ಫ್ರೆಡ್ ಪಾರ್ಕ್ ಇಡೀ ಅಲಹಾಬಾದ್ ನಲ್ಲಿಯೇ ಅತಿ ದೊಡ್ಡ ಪಾರ್ಕ್ ಎಂದು ಹೇಳಬಹುದು. ಬ್ರಿಟಿಷರ ಆಳ್ವಿಕೆ ಇದ್ದಾಗ ಪ್ರಿನ್ಸ್ ಆಲ್ಫ್ರೆಡ್ ಅಲಹಾಬಾದಿಗೆ ಭೇಟಿ ನೀಡಿದ ಸ್ಮರಣಾರ್ಥವಾಗಿ ಈ ಪಾರ್ಕನ್ನು ನಿರ್ಮಿಸಲಾಯಿತು.
ಕಿಂಗ್ ಜಾರ್ಜ್ v ಮತ್ತು ರಾಣಿ ವಿಕ್ಟೋರಿಯಾಳ ಬೃಹತ್ತಾದ...
ಅಲಹಾಬಾದ್ ನಲ್ಲಿರುವ ಬಡೇ ಹನುಮಾನಜಿ ಮಂದಿರ ಹಿಂದೂಗಳ ಅನೇಕ ಜನಪ್ರಿಯ ಮಂದಿರಗಳಲ್ಲಿ ಒಂದು. ಅಲ್ಲಿಯ ಜನ ಈ ಮಂದಿರದಲ್ಲಿರುವ ಹನುಮಂತನ ಮೂರ್ತಿಗೆ ಅಗಾಧವಾದ ಶಕ್ತಿ ಇದೆ ಹಾಗು ವಿಶೇಷವಾದ ಸಾನ್ನಿಧ್ಯ ಇದೆ ಎಂದು ನಂಬುತ್ತಾರೆ.
ಒಂದು ಜನಜನಿತವಾದ ಕಥೆ ಹೀಗಿದೆ : ಒಮ್ಮೆ ಶ್ರೀಮಂತ ವ್ಯಾಪಾರಿಯೊಬ್ಬ ಹನುಮಂತನ ಪ್ರತಿಮೆಯನ್ನು...
ಅಲಹಾಬಾದ್ ನಲ್ಲಿರುವ ಎರಡು ಶಕ್ತಿ ಪೀಠಗಳಲ್ಲಿ ಲಲಿತಾದೇವಿ ಮಂದಿರವು ಒಂದು. ಹಿಂದೂಗಳ ದಂತಕಥೆಯ ಪ್ರಕಾರ, ಸತಿಯ ಬೆರಳುಗಳು ಯಮುನಾ ನದಿಯ ತೀರದಲ್ಲಿ ಬಿದ್ದ ಮೇಲೆ ಭಗವತಿ ಲಲಿತಾದೇವಿ ಪ್ರತ್ಯಕ್ಷಳಾದಳು. ಅನೇಕ ವರ್ಷಗಳಿಂದ ಸಾಕಷ್ಟು ಬಾರಿ ಈ ಮಂದಿರವು ಜೀರ್ಣೋದ್ಧಾರಕ್ಕೆ ಒಳಪಟ್ಟಿದೆ. ಕಳೆದ ಬಾರಿ ಜೀರ್ಣೋದ್ಧಾರವಾದದ್ದು 1987ನೇ...
ದಿ ಥಾರ್ನ್ ಹಿಲ್ ಮೆಮೋರಿಯಲ್ ಭಾರತದಲ್ಲಿ ಬ್ರಿಟಿಷರ ಕಾಲವನ್ನು ಸ್ಮರಣೆಗೆ ತಂದುಕೊಡುವಂತಹ ಕಟ್ಟಡ. ಸಭೆಗಳನ್ನು ನಡೆಸುವುದಕ್ಕೆ ಬ್ರಿಟಿಷರ ಕಾಲದಲ್ಲಿ ಈ ಕಟ್ಟಡವನ್ನು ಕಟ್ಟಿಸಲಾಯಿತು. ಬಿಳಿ ಮರಳುಗಲ್ಲಿನಿಂದ ಕಟ್ಟಿಸಿದ ಈ ಕಟ್ಟಡಕ್ಕೆ ವಿಸ್ತಾರವಾದ ಗೋಥಿಕ್ ಶೈಲಿಯ ಕೆತ್ತನೆ ಹಾಗು ವಿನ್ಯಾಸಗಳಿವೆ. ಅಲ್ಲಿಯ ಜನರಿಗೆ ಈ...