ಭಾರತದ ಬಲಿಷ್ಟ ಕೋಟೆಗಳಲ್ಲಿ ಅಲೀಗಢದ ಕೋಟೆಯು ಒಂದೆಂದು ಹೇಳಲಾಗುತ್ತದೆ. ಇದನ್ನು ಇಬ್ರಾಹಿಂ ಲೋಧಿಯ ಕಾಲದಲ್ಲಿದ್ದ ಇಲ್ಲಿನ ಗವರ್ನರನ ಮಗ ಕಟ್ಟಿಸದನೆಂದು ಹೇಳಲಾಗುತ್ತದೆ. ಇದು ಜಿ ಟಿ ರಸ್ತೆಯಲ್ಲಿದೆ. ಬಹುಭುಜಾಕೃತಿಯ ಈ ಕೋಟೆಯ ಸುತ್ತ ಕಂದಕವಿದೆ.
ಕಾಲಾಂತರದಲ್ಲಿ ಕೋಟೆಯನ್ನು ಹಲವು ಬಾರಿ ಮರುನಿರ್ಮಾಣ ಮಾಡಲಾಗಿದೆ. 18ನೇ ಶತಮಾನದಲ್ಲಿ ಒಂದನೆ ಮಾಧವರಾವ್ ಶಿಂಧೆಯ ಕಾಲದಲ್ಲಿ ಈ ಕೋಟೆ ಸೈನಿಕರಿಗೆ ಯುರೋಪಿಯನ್ ಯುದ್ಧ ತಂತ್ರಗಳನ್ನು ಕಲಿಸುವ ಮುಖ್ಯ ಕೇಂದ್ರವಾಗಿತ್ತು. 1857ರಲ್ಲಿ ನಡೆದ ಬ್ರಿಟೀಷರ ವಿರುದ್ಧದ ದಂಗೆ ಕೂಡ ಇಲ್ಲಿಯೇ ನಡೆದದ್ದು.
ಈ ಕೋಟೆಯಲ್ಲಿ ಭಾರತೀಯ ಮತ್ತು ಫ್ರೆಂಚ್ ವಾಸ್ತು ಶೈಲಿಯ ಮಿಶ್ರಣವನ್ನು ಕಾಣಬಹುದು. ಇದು ಈಗ ಅಲೀಗಢ ಮುಸ್ಲಿಂ ವಿವಿಯ ಸಸ್ಯಶಾಸ್ತ್ರ ವಿಭಾಗದ ಮೇಲ್ವಿಚಾರಣೆಯಲ್ಲಿದೆ. ಕೋಟೆಯ ಒಳಗಡೆ ಸಸ್ಯಶಾಸ್ತ್ರೀಯ ಉದ್ಯಾನವಿದ್ದು ಇದ್ದು ಇಲ್ಲಿ ಹಲಬಗೆಯ ಸಸ್ಯಗಳನ್ನು ಕಾಣಬಹುದು.


Click it and Unblock the Notifications