ಮಲಂಚಾ ನಿವಾಸ, ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ 1919 ರಲ್ಲಿ ಅಗರ್ತಲಾಕ್ಕೆ ಭೇಟಿ ನೀಡಿದ ಸಮಯದಲ್ಲಿ ಉಳಿದುಕೊಳ್ಳುತ್ತಿದ್ದ ಮನೆಯಾಗಿದೆ. ತ್ರಿಪುರದ ರಾಜ, ಟ್ಯಾಗೊರ್ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಿದ್ದನು ಮತ್ತು ಟಾಗೋರ್ ಅನೇಕ ಬಾರಿ ಆಮಂತ್ರಣದ ಮೇರೆಗೆ ಅಗರ್ತಲಾಕ್ಕೆ ಭೇಟಿ ನೀಡಿದ್ದರು ಎಂದು ಹೇಳಲಾಗುತ್ತದೆ. 1919 ಇಂಥದೊಂದು ಭೇಟಿಯ ಸಮಯದಲ್ಲಿ, ಅವರು ಮಹಾರಾಜ ಬಿರೇಂದ್ರ್ ಕಿಶೋರ್ ಮಾಣಿಕ್ಯ ಬಹದ್ದೂರ್ ಅವರ ಖಾಸಗಿ ಏಕಾಂತ ಸ್ಥಳವಾದ ಕುಂಜಬಾನ್ ಅರಮನೆಯ ಪಕ್ಕದಲ್ಲಿ ಒಂದು ಕಚ್ಚಾ ಮನೆಯಲ್ಲಿ ಉಳಿದಿದ್ದರು.
ಕಚ್ಚಾ ಮನೆ ತರುವಾಯ (ಕಬಿಗುರು ಅಧಿಕೃತ ಅತಿಥಿಗೃಹ) ಜನಪ್ರಿಯತೆಯನ್ನು ಪಡೆಯಿತು. ಮತ್ತು ಇಂದು ಇದು ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಕಚ್ಚಾ ಮಲಂಚಾ ನಿವಾಸವನ್ನು ಇಂದು ಕೆಡವಲಾಗಿದೆ ಮತ್ತು ಅದರ ಸ್ಥಳದಲ್ಲಿ ಕಾಂಕ್ರೀಟ್ ನ ಎರಡು ಮಹಡಿಯ ರಚನೆ ಎದ್ದು ನಿಂತಿದೆ. ಆದಾಗ್ಯೂ, ರವೀಂದ್ರನಾಥ ಟ್ಯಾಗೋರ್ 1919 ರಲ್ಲಿ ಅಗರ್ತಲಾಕ್ಕೆ ಭೇಟಿ ನೀಡಿದ್ದಾಗ, ಮಲಂಚಾ ನಿವಾಸ ಅಷ್ಟು ಪ್ರಸಿದ್ಧಿ ಪಡೆದಿರಲಿಲ್ಲ. ಆದರೆ ಕಾಂಕ್ರೀಟ್ ನಿರ್ಮಾಣದ ನಂತರ ಇದಲ್ಲಿ ಮಲಂಚಾ ನಿವಾಸ ಎಂದು ಮರುನಾಮಕರಣ ಮಾಡಲಾಯಿತು.
ಇದನ್ನು ಕುಂಜಬಾನ್ ಅರಮನೆಯ ಮೇಲ್ಭಾಗದಲ್ಲಿ ನಿರ್ಮಿಸಲಾಗಿದೆ.


Click it and Unblock the Notifications