ಅಚಂಕೊವಿಲ್ ನದಿಯ ದಡದಲ್ಲಿರುವ ಪಂದಲಂ ಅರಮನೆಯು ಪಂದಲಂ ರಾಜಮನೆತನದವರ ನಿವಾಸ. ಅಡೂರ್ ನಿಂದ 10 ಕಿ.ಮೀ. ದೂರದಲ್ಲಿರುವ ಪಂದಲಂನಲ್ಲಿ ಅರಮನೆಯಿದೆ. ಕೇರಳದ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡದುಕೊಂಡಿರುವ ರಾಜಮನೆತನದವರು ಮಧುರೈಯ ಪಂಡ್ಯ ರಾಜವಂಶಸ್ಥರೆಂದು ನಂಬಲಾಗಿದೆ. ಪಂದಲಂ ಅರಮನೆ ಕೇವಲ ಐತಿಹಾಸಿಕ ಮಹತ್ವವಲ್ಲದೆ ಧಾರ್ಮಿಕ...
ಅಚಂಕೊವಿಲ್ ನದಿ ದಡದಲ್ಲಿರುವ ಕೇರಳದ ಅತ್ಯಂತ ಪುರಾತನ ಮಂದಿರವೇ ಪಂದಲಂ ಮಹಾದೇವ ಮಂದಿರ. ಪಂದಲಂ ನಗರದಲ್ಲಿರುವ ಪುರಾತನ ಧಾರ್ಮಿಕ ಕ್ಷೇತ್ರವು ಅಡೂರ್ ನಿಂದ ಹತ್ತು ಕಿ.ಮೀ. ದೂರದಲ್ಲಿದೆ. ಪ್ರಕೃತಿ ಸೊಗಬಿನ ಮಧ್ಯೆ ಇರುವ ಪುಣ್ಯಕ್ಷೇತ್ರವು ಪ್ರತೀವರ್ಷ ನೂರಾರು ಭಕ್ತರನ್ನು ಆಕರ್ಷಿಸುತ್ತದೆ.
ಇಲ್ಲಿ ಪೂಜಿಸಲ್ಪಡುವ ಮುಖ್ಯ...
ಕೇರಳದಲ್ಲಿರುವ ಕೃಷ್ಣ ದೇವರ ಮಂದಿರಗಳಲ್ಲಿ ಅತ್ಯಂತ ಪುರಾತನವಾಗಿರುವ ಪಾರ್ಥಸಾರಥಿ ಮಂದಿರಕ್ಕೆ ಭೇಟಿ ನೀಡಲೆಂದೇ ಯಾತ್ರಾರ್ಥಿಗಳು ಅಡೂರ್ ಗೆ ಭೇಟಿ ನೀಡುತ್ತಾರೆ. ಕೃಷ್ಣನ ಒಂದು ಅವತಾರವಾಗಿರುವ ಪಾರ್ಥಸಾರಥಿಯನ್ನು ಈ ಮಂದಿರದಲ್ಲಿ ಪೂಜಿಸಲಾಗುತ್ತದೆ. ಗಣಪತಿ ಮತ್ತು ಈಶ್ವರ ದೇವರು ಪಾರ್ಥಸಾರಥಿ ಮಂದಿರದಲ್ಲಿ ಪೂಜಿಸಲ್ಪಡುವ ಇತರ...
ಪಟ್ಟುಪುರಕಲ್ ದೇವಿ ಮಂದಿರವು ಪ್ರಸಿದ್ಧ ಧಾರ್ಮಿಕ ಕೇಂದ್ರ ಹಾಗೂ ಅಡೂರ್ ನ ಮತ್ತೊಂದು ಆಕರ್ಷಣ ಕೇಂದ್ರ. ಪಂದಲಂ ವಾಲಿಕೊಯಿಕ್ಕಲ್ ಮಂದಿರದ ಸಮೀಪದಲ್ಲೇ ಇರುವ ಈ ಮಂದಿರವು ಪಾರ್ವತಿ ದೇವರ ಅವತಾರ ಭದ್ರಕಾಳಿ ದೇವಿಗೆ ಸಮರ್ಪಿತವಾಗಿದೆ. ಮಂದಿರದ ಗರ್ಭಗುಡಿಯಲ್ಲಿ ಭದ್ರಕಾಳಿ ದೇವಿಯ ಮೂರ್ತಿ ಮತ್ತು ಕನಿಕ್ಕ ಮಂಡಪಂ ಇದೆ....
ಭದ್ರಕಾಳಿ ದೇವಿಗೆ ಸಮರ್ಪಿತ ಪುಥೆಂಕವಿಲ್ ಭಗವತಿ ಮಂದಿರವು ಅಡೂರ್ ನಗರದಿಂದ 8 ಕಿ.ಮೀ. ದೂರದಲ್ಲಿದೆ. ದಂತಕಥೆಯಂತೆ ಕುರಂಪಲದ ಪಾಲಪ್ಪಲ್ಲಿಲ್ ಕುಟುಂಬದ ವ್ಯಕ್ತಿಯೊಬ್ಬರು ಈ ಮಂದಿರ ನಿರ್ಮಿಸಿದರೆನ್ನುವ ದಂತಕಥೆಯಿದೆ. ವ್ಯಕ್ತಿಯ ಭಕ್ತಿಗೆ ಮೆಚ್ಚಿದ ದೇವಿ ಆತನಿಗೆ ದೈವಿಕ ಶಕ್ತಿಯನ್ನು ನೀಡಿದೆಂಬ ದಂತಕಥೆಯಿದೆ.
ಇದರ...
ಶ್ರೀನಾರಾಯಣಪುರಂ ಮಹಾವಿಷ್ಣು ಮಂದಿರವು ದೈವಿಕ ಪಾವಿತ್ರ್ಯವನ್ನು ಹೊಂದಿರುವ ಅಡೂರ್ ನಲ್ಲಿರುವ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಅಡೂರ್ ನಿಂದ ಐದು ಕಿ.ಮೀ. ದೂರದಲ್ಲಿರುವ ಮನಂಕಲ ಗ್ರಾಮದಲ್ಲಿ ಈ ಮಂದಿರವಿದೆ. ಶ್ರೀನಾರಾಯಣಪುರಂ ಮಹಾವಿಷ್ಣು ಮಂದಿರವು ಪುರಾತನ ಮಂದಿರವಾಗಿದ್ದು, ವಿಷ್ಣು ದೇವರ ಮೂರ್ತಿಯನ್ನು...
ಅಡೂರ್ ನಿಂದ 13 ಕಿ.ಮೀ. ದೂರದಲ್ಲಿರುವ ಚಂದನಪಳ್ಳಿ ಗ್ರಾಮದಲ್ಲಿ ಸೇಂಟ್ ಜಾರ್ಜ್ ಅರ್ಥಡಕ್ಸ್ ಚರ್ಚ್ ಇದೆ. 1810ರಲ್ಲಿ ನಿರ್ಮಿಸಲಾಗಿರುವ ಚರ್ಚ್ ದಕ್ಷಿಣ ಭಾರತದಲ್ಲಿರುವ ಅತ್ಯಂತ ದೊಡ್ಡ ಚರ್ಚ್ ಗಳಲ್ಲಿ ಒಂದಾಗಿದೆ. ಇಂಗ್ಲೆಂಡ್ ನ ಧಾರ್ಮಿಕ ಗುರುವಾಗಿದ್ದ ಸೇಂಟ್ ಜಾರ್ಜ್ ಹೆಸರನ್ನು ಈ ಚರ್ಚ್ ಗೆ ಇಡಲಾಗಿದೆ. ಚರ್ಚ್ ನ್ನು...
ಅಡೂರ್ ನಗರದಿಂದ 15 ಕಿ.ಮೀ. ದೂರದಲ್ಲಿರುವ ಸೇಂಟ್ ಮೇರಿಸ್ ಅರ್ಥಡಕ್ಸ್ ಸಿರಿಯನ್ ಚರ್ಚ್ ಪುರಾತನ ಪೂಜಾಕೇಂದ್ರ. ಥುಂಪಮೊನ್ ಗ್ರಾಮದಲ್ಲಿರುವ ಈ ಚರ್ಚ್ ನ್ನು ಥುಂಪಮೊನ್ ವಾಲಿಯಪಳ್ಳಿ ಎಂದೇ ಕರೆಯಲಾಗುತ್ತದೆ. ಹಲವಾರು ಶತಮಾನದ ಹಿಂದೆ ಇಲ್ಲಿ ನೆಲೆಸಿದ್ದ ನಝರೆನೆ ಕ್ರಿಶ್ಚಿಯನ್ ಸಮುದಾಯದವರಿಗೆ ಚರ್ಚ್ ಪ್ರಾರ್ಥನಾ ಸ್ಥಳವಾಗಿತ್ತು...
ತ್ರಿಚೆಂಡೆ ಮಂಗಳಂ ಮಹಾದೇವ ಮಂದಿರವು ಪೆರಿಂಗಂಡ ಗ್ರಾಮದಲ್ಲಿದೆ. ಅಡೂರ್ ನಿಂದ ಐದು ಕಿ.ಮೀ. ದೂರದಲ್ಲಿರುವ ಮಂದಿರವು ಇಲ್ಲಿನ ಪ್ರಮುಖ ಆಕರ್ಷಣೆ. ಶಿವ ದೇವರು ಮಂದಿರದ ಪೂಜ್ಯನೀಯ ದೇವರು. ಉತ್ಸವದ ವೇಳೆ ಸಾವಿರಾರು ಮಂದಿ ಭಕ್ತರು ಮತ್ತು ಪ್ರವಾಸಿಗರು ಮಂದಿರಕ್ಕೆ ಭೇಟಿ ನೀಡುತ್ತಾರೆ. ತ್ರಿಚೆಂಡೆ ಮಂಗಳಂ ಮಹಾದೇವ...