ಭಾರತದಲ್ಲಿ ರೂಪಿಸಲಾಗಿದ್ದ ಸುಮಾರು ಎಂಟು ಶಾಂತಿ ಸ್ತೂಪಗಳಲ್ಲಿ ವಿಶ್ವ ಶಾಂತಿ ಸ್ತೂಪವೂ ಒಂದಾಗಿದೆ. ಗಿತೈ ಮಂದಿರದ ಪಕ್ಕದಲ್ಲೇ ಇರುವ ಈ ಸ್ತೂಪವು ಫುಜೀ ಗುರೂಜಿಯ ಒಂದು ಕನಸೇ ಆಗಿತ್ತು, ಎಂಬುದು ಗಾಂಧೀಜಿಯವರಿಂದ ಬಂದಿರುವ ಹೆಮ್ಮೆಯ ನುಡಿ. ಫುಜಿ ಗುರೂಜಿಯವರು 1935 ರಲ್ಲಿ ಜಪಾನ್ನಿಂದ ವಾರ್ಧಾಕ್ಕೆ ಆಗಮಿಸಿದರು ಮತ್ತು ಭಾರತದಲ್ಲಿ ಈ ಸ್ತೂಪವನ್ನು ನಿರ್ಮಿಸುವ ಉದ್ದೇಶದಿಂದಲೇ ಗಾಂಧೀಜಿಯವರನ್ನು ಭೇಟಿಮಾಡಿದ್ದರೆಂದು ನಂಬಲಾಗಿದೆ.
ಸ್ತೂಪ ಬೌದ್ಧ ಸಮುದಾಯದ ಪೂಜಾಸ್ಥಾನವಾಗಿ ಕಾರ್ಯನಿರ್ವಹಿಸುತ್ತದೆ. ಸ್ತೂಪವು ಬೃಹತ್ತಾಗಿದ್ದು ಶ್ವೇತ ವರ್ಣದ್ದಾಗಿದೆ. ಸ್ತೂಪದ ಮೇಲೆ ನಾಲ್ಕು ಬೇರೆ ಬೇರೆ ದಿಕ್ಕುಗಳಿಗೆ ಮುಖಮಾಡಿರುವ ಬುದ್ಧನ ಪ್ರತಿಮೆಗಳನ್ನು ಕಾಣಬಹುದು. ಈ ಸ್ತೂಪವು ಗೌತಮ್ ಬುದ್ಧನ ಜೀವನದ ಇತಿಹಾಸವನ್ನು ವಿವರಿಸುತ್ತದೆ.
ಇದರ ಹತ್ತಿರದಲ್ಲೇ, ಜಪಾನಿಯರ ಒಂದು ಸಣ್ಣ ಬೌದ್ಧ ದೇವಾಲಯ ಹಾಗೂ ದೊಡ್ಡ ಪಾರ್ಕ್ ಕೂಡ ಇದೆ.