ಮಗನ್ ಸಂಗ್ರಹಾಲಯವು ವಾರ್ಧಾದ ಮಗನ್ವಾಡಿಯಲ್ಲಿದೆ. ಇದು ಡಿಸೆಂಬರ್ 30, 1938 ರಂದು ಸ್ವತಃ ಮಹಾತ್ಮ ಗಾಂಧಿಯವರಿಂದ ಉದ್ಘಾಟಿಸಲ್ಪಟ್ಟಿತು. ಇದು ಸೈನ್ಸ್ ಸೆಂಟರ್ ಬಳಿ ಇದ್ದು, ಗಾಂಧೀಯನ್ ಎಕೊನೋಮಿಕ್ ಸಿಸ್ಟಮ್ ನ ಇಬ್ಬರು ಪ್ರಖ್ಯಾತ ಪರಿಣಿತರಾದ ಆರ್ಯನಾಯಕಂ ಮತ್ತು ಡಾ ಜೆ.ಸಿ. ಕುಮಾರಪ್ಪಯವರ ಅಡಿಯಲ್ಲಿ ಈ ಮ್ಯೂಸಿಯಂ ಅನ್ನು ಅಭಿವೃದ್ಧಿಪಡಿಸಲಾಯಿತು.
ಮ್ಯೂಸಿಯಂ ಗ್ರಾಮೀಣ ಕೈಗಾರಿಕೆಗಳು, ಹೈನುಗಾರಿಕೆ, ಕೃಷಿ, ಇತ್ಯಾದಿಗಳ ಕುರಿತು ಜಾಗೃತಿಯನ್ನು ಹರಡುವ ಗುರಿಯನ್ನಿಟ್ಟುಕೊಂಡಿದ್ದು ಅವುಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ವಿಶೇಷ ಗಮನ ನೀಡುತ್ತಿದೆ. ಇದು ಸ್ಥಳೀಯ ಗ್ರಾಮೀಣ ಕುಶಲಕರ್ಮಿಗಳು ಮಾಡಿದ ವಿವಿಧ ಖಾದಿ ವಸ್ತುಗಳು, ಚರಕದ ಮತ್ತು ಕರಕುಶಲ ಕಲೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಸ್ವದೇಶಿ ಚಳವಳಿಯನ್ನು ಉತ್ತೇಜಿಸಲಾಗುತ್ತಿದೆ.