ಮಹಿಳೆಯೊಬ್ಬಳು ತ್ರಿಭಂಗಿಯಲ್ಲಿ ನಿಂತಿರುವ ಕಲ್ಲಿನ ವಿಗ್ರಹವೇ ಸಾಲಭಂಜಿಕೆ. ಇದು ಕ್ರಿಪೂ 8-9ನೇ ಶತಮಾನಕ್ಕೆ ಸೇರಿದ್ದು. ಇದು ಗ್ಯಾರಸ್ಪುರದಲ್ಲಿದೆ. ಇದನ್ನು ವನದೇವತೆ ಅಥವ ವೃಶಿಕ ಎಂದು ಕರೆಯುತ್ತಾರೆ. ಇದು ಸಂಸ್ಕೃತದ ಪದ. ಇದರರ್ಥ ‘ ಸಾಲ ಮರದ ಮುರಿದ ಕೊಂಬೆ’. ಈ ಸಾಲಭಂಜಿಕೆಯನ್ನು ಗ್ವಾಲಿಯರ್ನ ಪುರಾತತ್ವ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆ. ತ್ರಿಭಂಗಿಯಲ್ಲಿ ನಿಂತಿರುವ ಈ ದೇವತೆಯ ವಿಗ್ರಹ ನೋಡಲು ಸುಂದರವಾಗಿದೆ. ಕೆಲವು ವಿಮರ್ಶಕರ ಪ್ರಕಾರ ಸಾಲಭಂಜಿಕೆ ಬೌದ್ಧಧರ್ಮಕ್ಕೆ ಸೇರಿದ್ದು. ರಾಣಿ ಮಾಯಾ ಗೌತಮ ಬುದ್ಧನಿಗೆ ಜನ್ಮ ನೀಡುವ ಸಂದರ್ಭದಲ್ಲಿ ಅಶೋಕ ಮರದ ಕೆಳಗೆ ನಿಂತ ಭಂಗಿಯಿದು ಎಂದು ಹೇಳಲಾಗುತ್ತದೆ. ಮತ್ತೆ ಕೆಲವರ ಪ್ರಕಾರ ಇದು ಸಂತಾನೋತ್ಪತ್ತಿಗೆ ಸಂಬಂಧಿಸಿದ ದೇವತೆ. ಹಿಂದೋಳ ತೋರಣದಲ್ಲಿ ಸಾಲಭಂಜಿಕೆಯರ ಸಣ್ಣ ಸಣ್ಣ ವಿಗ್ರಹಗಳನ್ನು ಕಾಣಬಹುದು.