ವೆಲ್ಲೂರಿನ ಕೇಂದ್ರ ಭಾಗದಲ್ಲಿ ವೆಲ್ಲೂರ್ ಕೋಟೆ ಇದೆ. ಇದು ಹಳೆಯ ಬಸ್ ನಿಲ್ದಾಣಕ್ಕೆ ಸರಿಯಾಗಿ ವಿರುದ್ಧ ದಿಕ್ಕಿನಲ್ಲಿದೆ. ಭಾರತದ ಪುರಾತತ್ವ ಇಲಾಖೆ ಇದರ ನಿರ್ವಹಣೆಯ ಹೊಣೆ ಹೊತ್ತಿದೆ. ಜಲಗಂಡೇಶ್ವರ ದೇವಾಲಯ ಇಲ್ಲಿನ ಆವರಣದಲ್ಲಿದೆ. ಜೊತೆಗೆ ಒಂದು ಮಸೀದಿ, ಚರ್ಚ್, ಮುತ್ತು ಮಂಡಪಂ, ವೆಲ್ಲೂರ್ ಕ್ರಿಶ್ಚಿಯನ್ ಆಸ್ಪತ್ರೆ ಹಾಗೂ ರಾಜ್ಯ ಸರ್ಕಾದರ ವಸ್ತು ಸಂಗ್ರಹಾಲಯ ಇಲ್ಲೇ ಇವೆ.
ಈ ಕೋಟೆಯ ಹೊರ ಗೋಡೆಗಳು ಬೆಣಚು ಕಲ್ಲಿನಿಂದ ಕಟ್ಟಲಾಗಿದೆ. ಹಾಗೂ ದೊಡ್ಡದಾದ ಕಂದಕವಿದೆ. ಸೂರ್ಯಗುಂಟ ಜಲಾಶಯ ಇಲ್ಲಿಗೆ ನೀರಿನ ಸಂಪರ್ಕ ಒದಗಿಸಿಕೊಡುತ್ತದೆ. ನೀರನ್ನು ಈ ಕಂದಕಗಳಲ್ಲಿ ಸಂಗ್ರಹಿಸಲಾಗುತ್ತದೆ. ಇದು ಟಿಪ್ಪು ಮಹಲ್ ಗೂ ನೆಲೆಯಾಗಿದೆ. ಬ್ರಿಟೀಷರೊಂದಿಗಿನ ಯುದ್ಧದ ಸಮಯದಲ್ಲಿ ಟಿಪ್ಪು ಇಲ್ಲಿಯೇ ನೆಲೆಸಿದ್ದ ಎಂದು ನಂಬಲಾಗಿದೆ.
ಈ ಅವಧಿಯಲ್ಲಿ ಇಲ್ಲಿ ಭಾರತದ ಹಲವು ಪ್ರಸಿದ್ಧ ಯುದ್ಧಕೈದಿಗಳನ್ನು ಇರಿಸಲಾಗಿತ್ತು ಅವರೆಂದರೆ ಕ್ಯಾಂಡಿಯ ಕೊನೆಯ ಅರಸ, ವಿಕ್ರಮ ರಾಜಸಿಂಹ ಹಾಗೂ ಟಿಪ್ಪು ಸುಲ್ತಾನನ ಕುಟುಂಬ ಸದಸ್ಯರು. ವೆಲ್ಲೂರ್ ಕೋಟೆಯಲ್ಲಿಯೇ ಭಾರತದ ಮೊದಲ ಸೀಪಾಯಿ ದಂಗೆ ಆರಂಭವಾಯಿತು. ಇದು ಒಂದು ಪ್ರವಾಸಿ ತಾಣವೂ ಹೌದು ಜೊತೆಗೆ ಭಾರತದ ಐತಿಹಾಸಿಕ ಮಹತ್ವದ ನಗರವೂ ಹೌದು.