ಗಂಗಾ ನದಿಯ ದಕ್ಷಿಣದ ಭಾಗದಲ್ಲಿ ಅಸ್ಸಿ ಘಾಟ್ ಗೆ ವಿದೇಶಿ ಪ್ರವಾಸಿಗಳಿಗೆ ಮತ್ತು ಸಂಶೋಧಕರಿಗೆ ಅತೀ ನೆಚ್ಚಿನ ತಾಣವಾಗಿದೆ. ಅದರಲ್ಲೂ ಇಸ್ರೇಲ್ ನವರು ಮಿಲಿಟರಿ ಸೇವೆಯಿಂದ ನಿವೃತ್ತರಾದ ಬಳಿಕ ಇಲ್ಲಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ.
ಗಂಗಾ ಮತ್ತು ಅಸ್ಸಿ ನದಿಯ ಸಂಗಮದಲ್ಲೇ ಅಸ್ಸಿ ಘಾಟ್ ಇದೆ. ಶುಂಭ-ನಿಶುಂಭರನ್ನು ಕೊಂದ ಬಳಿಕ ದುರ್ಗಾ ಮಾತೆ ತನ್ನ ಖಡ್ಗವನ್ನು ಎಸೆದ ಜಾಗ ಇದು. ಖಡ್ಗ ಬಿದ್ದ ಜಾಗದಲ್ಲಿ ನದಿ ಹುಟ್ಟಿದ್ದು, ಇದನ್ನು ಅಸ್ಸಿ ನದಿಯೆಂದು ಕರೆಯಲಾಯಿತೆಂಬ ಉಲ್ಲೇಖ ಪುರಾಣಗಳಲ್ಲಿದೆ.
ಈ ಘಾಟ್ ನ ಬಗ್ಗೆ ಹಲವು ಪ್ರಮುಖ ಹಿಂದೂ ಪುರಾಣಗಳಾದ ಮತ್ಸ್ಯ ಪುರಾಣ, ಅಗ್ನಿ ಪುರಾಣ, ಕಾಶಿ ಖಂಡ ಮತ್ತು ಪದ್ಮ ಪುರಾಣದಲ್ಲಿ ಉಲ್ಲೇಖವಿದೆ. ಈ ಘಾಟ್ ನ ಅಶ್ವತ್ಥ ಮರದ ಕೆಳಗೆ ಶಿವಲಿಂಗವಿದೆ ಮತ್ತು ಎರಡು ನದಿಗಳ ಸಂಗಮದ ಅಧಿದೇವತೆ ಅಸಿಸಂಗಮೇಶ್ವರ ದೇವರ ಮಂದಿರವಿದೆ. ಇಲ್ಲಿ ಪುರಾತನ ತೊಟ್ಟಿಯೊಂದಿದ್ದು, ಭೂಮಿಯಿಂದ ಸುಮಾರು 15 ಮೀಟರ್ ಕೆಳಗಿರುವ ಇದನ್ನು ಲೊಲಾರ್ಕ ಕುಂಡವೆಂದು ಕರೆಯಲಾಗುತ್ತದೆ.
ಹಬ್ಬಗಳ ತಿಂಗಳಾದ ಚೈತ್ರಾ(ಮಾರ್ಚ್-ಎಪ್ರಿಲ್) ಮತ್ತು ಮೇಘ(ಜನವರಿ-ಫೆಬ್ರವರಿ) ಮಾಸದಲ್ಲಿ ಈ ಘಾಟ್ ನಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರುತ್ತಾರೆ.