ವಾರಣಾಸಿಯ ಗಂಗಾ ನದಿ ದಂಡೆಯಲ್ಲಿರುವ ಘಾಟ್ ಗಳಲ್ಲಿ ದಶಅಶ್ವಮೇಧ ಘಾಟ್ ಅತ್ಯಂತ ಪ್ರಾಚೀನ ಮತ್ತು ಅತ್ಯಾಕರ್ಷಕ ಘಾಟ್ ಆಗಿದೆ. ಇದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ದಶಅಶ್ವಮೇಧ ಎಂದರೆ ಹತ್ತು ಕುದುರೆಗಳೆಂದರ್ಥ. ಕೋಪದಿಂದ ತೆರಳಿದ್ದ ಶಿವನನ್ನು ಮರಳಿ ಕರೆಸಲು ಬ್ರಹ್ಮ ಇಲ್ಲಿ ಯಜ್ಞ ಮಾಡಿದನೆಂಬುವುದು ಪುರಾಣಗಳಲ್ಲಿವೆ. ಯಜ್ಞದ ವೇಳೆ ಅಥವಾ ಶಿವ ಮರಳಿ ಬಂದ ಸಂಭ್ರಮ ಆಚರಿಸಲು ಹತ್ತು ಕುದುರೆಗಳನ್ನು ಬಲಿ ಕೊಡಲಾಗಿದೆಯಾ ಎನ್ನುವುದು ಮಾತ್ರ ಸ್ಪಷ್ಟವಿಲ್ಲ. ಎರಡನೇ ಶತಮಾನದಲ್ಲಿ ಭಾರ ಶಿವನಾಗ ರಾಜರು ಇಂತಹ ಬಲಿ ನೀಡಿದ್ದರು ಎನ್ನುವುದು ಇತಿಹಾಸಗಳಲ್ಲಿವೆ.
ಐತಿಹಾಸಿಕ ಮಹತ್ವದ ಹಿನ್ನೆಲೆಯಲ್ಲಿ ಈ ಘಾಟ್ ವಾರಣಾಸಿಯ ಪ್ರಮುಖ ಘಾಟ್ ಎಂದು ಪರಿಗಣಿಸಲಾಗಿದೆ. ನಗರದಲ್ಲಿರುವ ಇತರ ಎಲ್ಲಾ ಘಾಟ್ ಗಳಿಗಿಂತ ಅತೀ ಹೆಚ್ಚಿನ ಭಕ್ತರು ಭೇಟಿ ನೀಡುವ ಹಾಗೂ ಪೂಜಿಸಲ್ಪಡುವ ಘಾಟ್ ಇದಾಗಿದೆ. ಬೆಳಗ್ಗೆ ಮತ್ತು ಸಂಜೆ ವೇಳೆ ಅರ್ಚಕರು ಆರತಿ ಬೆಳಗುತ್ತಾರೆ. ಸಂಜೆ ವೇಳೆ ಗಂಗಾರತಿ ಮಾಡುವಾಗ ಅದನ್ನು ನೋಡುವುದೇ ಕಣ್ಣಿಗೊಂದು ಹಬ್ಬ ಮತ್ತು ಭಕ್ತಾದಿಗಳು ಮಣ್ಣಿನ ಹಣತೆಯಲ್ಲಿ ದೀಪಗಳನ್ನು ಹಚ್ಚಿ ಗಂಗೆಯಲ್ಲಿ ತೇಳಿಬಿಡುತ್ತಾರೆ.