ಗಂಗಾ ನದಿಯ ಬಲ ದಂಡದಲ್ಲಿರುವ ರಾಮನಗರ ಕೋಟೆ ಮತ್ತು ಮ್ಯೂಸಿಯಂ, 17ನೇ ಶತಮಾನದಲ್ಲಿ ಈ ಕೋಟೆಯನ್ನು ಕಟ್ಟಿದ ರಾಜ ಬಲ್ವಂತ್ ಸಿಂಗ್ ರ ಮನೆಯಾಗಿತ್ತು. ರಾಮನಗರದಲ್ಲಿ ಮಹಾಭಾರತದ ಋಷಿ ವೇದವ್ಯಾಸರು ಧ್ಯಾನ ಮಾಡಿದ ಸ್ಥಳ ಇದಾಗಿದೆ. ಈ ಸ್ಥಳವನ್ನು ಅವರ ಹೆಸರಿನಿಂದಲೇ ವ್ಯಾಸ ಕಾಶಿ ಎಂದು ಕರೆಯಲಾಗುತ್ತಿತ್ತು. ರಾಮನಗರವು ಸಪ್ಟೆಂಬರ್ ನಿಂದ ಅಕ್ಟೋಬರ್ ತನಕ 31 ದಿನಗಳ ಕಾಲ ನಡೆಯುವ ರಾಮಲೀಲಾಕ್ಕೆ ಜನಪ್ರಿಯವಾಗಿದೆ.
ಮ್ಯೂಸಿಯಂನಲ್ಲಿ ಸುಂದರ ಕೆತ್ತನೆಗಳಿರುವ ಬಾಲ್ಕನಿ, ಅತ್ಯಾಕರ್ಷಕ ಸಭಾಂಗಣ ಮತ್ತು ತೆರೆದ ಅಂಗಣವಿದೆ. ಮ್ಯೂಸಿಯಂನಲ್ಲಿರುವ ವಿದ್ಯಾ ಮಂದಿರವು ರಾಜರ ಆಳ್ವಿಕೆ ಕಾಲದಲ್ಲಿ ನ್ಯಾಯಾಲಯವಾಗಿತ್ತೆನ್ನುವುದನ್ನು ಪ್ರತಿಬಿಂಬಿಸುತ್ತದೆ. ಪ್ರಾಚೀನ ಕಾಲದ ಗಡಿಯಾರ, ಹಳೆ ಶಸ್ತ್ರಾಸ್ತ್ರ, ಖಡ್ಗ, ಹಳೆಯ ಕೋವಿ, ಹಳೆಯ ಕಾರುಗಳು ಮತ್ತು ಆನೆದಂತದ ವಸ್ತುಗಳು ಸೇರಿದಂತೆ ಆಕರ್ಷಕ ವಸ್ತುಗಳ ಸಂಗ್ರಹವಿದೆ. ರಾಜಮನೆತನಕ್ಕೆ ಸಂಬಂಧಿಸಿದ ಮಧ್ಯಯುಗದ ಉಡುಪುಗಳು, ಆಭರಣಗಳು, ಮತ್ತು ಪೀಠೋಪಕರಣನ್ನು ಕಾಣಬಹುದಾಗಿದೆ.