ಗುಂಡಿಯಾಟ್ ಎಂಬ ಸಣ್ಣ ಹಳ್ಳಿಯಲ್ಲಿ ಕಪಿಲ ಮುನಿ ಆಶ್ರಮ ಇದೆ. ಇದು ಸಮುದ್ರ ಮಟ್ಟದಿಂದ 4500 ಮೀಟರ್ ಎತ್ತರದಲ್ಲಿದೆ. ಇದು ಅತ್ಯಂತ ವಿಶಿಷ್ಟ ಬೆಟ್ಟವಾಗಿದ್ದು, ಗಡ್ವಾಲ್ ಪ್ರದೇಶದಲ್ಲಿದೆ. ಕಪ್ಪು ಹಲಗೆ ಮಹಡಿ ಹೊಂದಿರುವ ಚಿಕ್ಕ ಕಿಟಕಿಗಳುಳ್ಳ ಮನೆಯನ್ನು ಈ ಪ್ರದೇಶ ಹೊಂದಿದೆ. ಪ್ರವಾಸಿಗರು ಇಲ್ಲಿನ ಸ್ಥಳೀಯ ಬಸ್ ನಿಲ್ದಾಣದಲ್ಲಿ ಇಳಿದು ಕಪಿಲ ಮುನಿ ಆಶ್ರಮಕ್ಕೆ ಒಂದಿಷ್ಟು ದೂರು ನಡೆದು ಹೋಗಬೇಕಾಗುತ್ತದೆ. ಈ ಆಶ್ರಮವು ಕಪಿಲ ಮುನಿಗೆ ಮೀಸಲಾಗಿದೆ. ಈ ಮುನಿ ಶಿವನ ಆರಾಧಕರಾಗಿದ್ದು, ಆಶೀರ್ವಾದವನ್ನೂ ಪಡೆದುಕೊಂಡ ಸಾಧಕರು. ಶಿವನ ಕುರಿತು ಪ್ರಾರ್ಥಿಸಿ ಆಶೀರ್ವಾದ ಪಡೆದ ಈ ಮುನಿಯ ಆಶ್ರಮದಲ್ಲಿ ಒಂದು ಶಿವಲಿಂಗ (ಕಪಿಲೇಶ್ವರ ಮಹದೇವ ಎಂದು ಪ್ರಸಿದ್ಧಿ) ಇದೆ. ಇದೇ ಸ್ಥಳದಲ್ಲಿ ಶಿವ ಪ್ರತ್ಯಕ್ಷನಾಗಿ ಮುನಿಗೆ ಆಶೀರ್ವದಿಸಿದ್ದರು ಎಂದು ನಂಬಲಾಗುತ್ತದೆ. ಈ ದೇವಾಲಯವು ಇಲ್ಲಿನ ರಾಮಾ ಹಳ್ಳಿಯಿಂದ ಐದು ಕಿ.ಮೀ. ದೂರದಲ್ಲಿದೆ.