ಕಾವೇರಿ ನದಿಯ ತೀರದ ಮೇಲೆ ಇರುವ ಗುಣಶೀಲಮ್ ವಿಷ್ಣು ದೇವಸ್ಥಾನವು ವಿಷ್ಣುವಿಗೆ ಮೀಸಲಾಗಿದೆ. ಈ ದೇವಸ್ಥಾನದಲ್ಲಿ ಒಂದು ಅಭೌತಿಕ ಶಕ್ತಿ ಇದೆ ಎಂದು ನಂಬಲಾಗಿದೆ. ಈ ದೇವಸ್ಥಾನಕ್ಕೆ ಮಾನಸಿಕ ವಿಕಲಚೇತನ ಮಕ್ಕಳನ್ನು ಗುಣಪಡಿಸುವ ಸಾಮರ್ಥ್ಯ ಇದೆ ಎಂಬ ನಂಬಿಕೆ ಅಲ್ಲಿಯ ಜನರಲ್ಲಿದೆ. ಹೀಗಾಗಿ ಇಂತಹ ಮಕ್ಕಳ ಪೋಷಕರು ತಮ್ಮ ಮಾನಸಿಕ ವಿಕಲಚೇತನ ಮಕ್ಕಳನ್ನು ಇಲ್ಲಿ 48 ದಿನಗಳವರೆಗೂ ಇಲ್ಲಿ ಬಿಡುವ ಸಂಪ್ರದಾಯವಿದೆ.
ಈ ದೇವಸ್ಥಾನದ ಪ್ರಮುಖ ದೇವತೆ ಪ್ರಸನ್ನ ವೆಂಕಟಾ ಚಲಪತಿ. ವಿಘ್ನೇಶ್ವರನ ಸನ್ನಿಧಿಯು ದೇವಾಲಯದ ಆವರಣದಲ್ಲಿ ಕಂಡು ಬರುತ್ತದೆ. ಈ ದೇವಾಲಯದ ಆವರಣದಲ್ಲಿಯೇ ವೆಂಕಟೇಶ್ವರನು ಗಣೇಶನನ್ನು ಬ್ರಾಹ್ಮಣತ್ವದಿಂದ ಆರ್ಶಿವದಿಸಿದನು ಎಂದು ಹೇಳಲಾಗುತ್ತದೆ.


Click it and Unblock the Notifications