Search
  • Follow NativePlanet
Share
» »ಈ ಹೂವಿನ ಕಣಿವೆ ಸೆಪ್ಟೆಂಬರ್’ವರೆಗೆ ಮಾತ್ರ ತೆರೆದಿರುತ್ತೆ, ಮಧ್ಯಾಹ್ನ ಹೋಗುವಂತಿಲ್ಲ!   

ಈ ಹೂವಿನ ಕಣಿವೆ ಸೆಪ್ಟೆಂಬರ್’ವರೆಗೆ ಮಾತ್ರ ತೆರೆದಿರುತ್ತೆ, ಮಧ್ಯಾಹ್ನ ಹೋಗುವಂತಿಲ್ಲ!   

ಮುಂದಿನ ದಿನಗಳಲ್ಲಿ ಹೊರ ರಾಜ್ಯಗಳಿಗೆ ಪ್ರವಾಸ ಮಾಡಬೇಕೆಂದು ಪ್ಲ್ಯಾನ್ ಮಾಡುತ್ತಿದ್ದರೆ ಉತ್ತರಾಖಂಡದ ಚಮೋಲಿ ಜಿಲ್ಲೆಗೆ ಭೇಟಿ ನೀಡಿ. ಚಮೋಲಿ ಎಂದೊಡನೆ ನಾವು ಯಾವ ಸ್ಥಳದ ಬಗ್ಗೆ ಹೇಳುತ್ತಿದ್ದೇವೆ ಎಂದು ನಿಮಗಿಗಾಗಲೇ ಗೊತ್ತಾಗಿರಬಹುದು. ಹೌದು, ನಿಮ್ಮ ಊಹೆ ನಿಜ. ನಾವಿಲ್ಲಿ ವ್ಯಾಲಿ ಆಫ್ ಫ್ಲವರ್ಸ್ ಅಥವಾ ಹೂಗಳ ಕಣಿವೆಯ ಬಗ್ಗೆ ಮಾತನಾಡುತ್ತಿದ್ದೇವೆ. ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ವ್ಯಾಲಿ ಆಫ್ ಫ್ಲವರ್ಸ್ ಕಣಿವೆಯು ಚಮೋಲಿ ಜಿಲ್ಲೆಯಲ್ಲಿ (ಬದರಿನಾಥದ ಬಳಿ) ಋಷಿಕೇಶದ ಉತ್ತರಕ್ಕೆ ಸರಿಸುಮಾರು 300 ಕಿಮೀ ದೂರದಲ್ಲಿದೆ.

ಹೂವುಗಳ ಕಣಿವೆಯ ಸುತ್ತ ಬಿಳಿ ಶಿಖರಗಳು, ಕಾಡು, ವಿವಿಧ ಜಾತಿಯ ಹೂವುಗಳನ್ನು ನೋಡಬಹುದಾಗಿದ್ದು, ಇದು ವಿಶ್ವ ಪರಂಪರೆಯ ತಾಣವಾಗಿದೆ. ಅಂದಹಾಗೆ ಇದು ಪ್ರತಿ ವರ್ಷ ಜೂನ್ ನಿಂದ ಸೆಪ್ಟೆಂಬರ್ ವರೆಗೆ ತೆರೆದಿರುತ್ತದೆ. ಇದು ಗಿಡಮೂಲಿಕೆ ಸಸ್ಯಗಳಿಗೂ ಹೆಸರುವಾಸಿಯಾಗಿದೆ, ಹನುಮಂತನು ಈ ಹೂವುಗಳ ಕಣಿವೆಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಲಕ್ಷ್ಮಣನಿಗೆ ಸಂಜೀವನಿಯನ್ನು ತಂದನು ಎಂದು ನಂಬಲಾಗಿದೆ. ಜಲಪಾತಗಳು, ತೊರೆಗಳು ಮತ್ತು ಗದ್ದೆಗಳು ಹೀಗೆ ಪ್ರಕೃತಿ ಸೌಂದರ್ಯ ಸವಿಯುವವರಿಗೆ ಇದು ಸೂಕ್ತ ಸ್ಥಳವಾಗಿದೆ.

valleyofflowers-03-1491212435-1661019300.jpg -Properties

ಹೂವುಗಳ ವಾಸಸ್ಥಾನ

ಹೂಗಳ ಕಣಿವೆಯು ನಂದಾ ದೇವಿ ರಾಷ್ಟ್ರೀಯ ಉದ್ಯಾನವನದ ಪಕ್ಕದಲ್ಲಿರುವ ಗಡ್ವಾಲ್ ಪ್ರದೇಶದ ಜೋಶಿಮಠ ಪ್ರದೇಶದಲ್ಲಿ ನೆಲೆಗೊಂಡಿರುವ ಒಂದು ಸುಂದರ ತಾಣವಾಗಿದೆ. ಜೂನ್‌'ನಿಂದ ಇಲ್ಲಿ ಪ್ರವೇಶಿಸಬಹುದು. ಈ ಸುಂದರವಾದ ಕಣಿವೆಯು ಅಪರೂಪದ ಪ್ರಭೇದಗಳ ಹೂವುಗಳಿಂದ ತುಂಬಿದೆ, ವಿಶೇಷವಾಗಿ ಗೋಲ್ಡನ್ ಲಿಲ್ಲಿಯಂತಹ ಸ್ಥಳೀಯ ಆಲ್ಪೈನ್ ಹೂವುಗಳು. ಈಗ ವಿಶ್ವ ಪರಂಪರೆಯ ತಾಣವಾಗಿರುವ ಇದನ್ನು 1931 ರಲ್ಲಿ ಮೂವರು ಪ್ರವಾಸಿಗರಾದ ಫ್ರಾಂಕ್ ಸ್ಮಿಥ್, ಎರಿಕ್ ಶಿಪ್ಟನ್ ಮತ್ತು ಆರ್‌ಎಸ್ ಹೋಲ್ಸ್‌ವರ್ತ್, ಮೌಂಟ್ ಕಾರ್ಮೆಟ್‌ ಕಂಡುಹಿಡಿದರು. ಆದ್ದರಿಂದ ನೀವು ಗರ್ವಾಲ್ ಪ್ರದೇಶಕ್ಕೆ ಪ್ರವಾಸ ಮಾಡುತ್ತಿದ್ದರೆ, ಈ ಸ್ಥಳಕ್ಕೆ ಭೇಟಿ ನೀಡಲು ಮರೆಯದಿರಿ.

lay-naik-as-emv-hus8-unsplash-1652851212-1661019309.jpg -Properties

ಹೇಗೆ ಕಂಡುಹಿಡಿಯಲಾಯಿತು?

ಈ ಸ್ಥಳ ಎಷ್ಟು ದುರ್ಗಮವಾಗಿದೆ ಎಂದರೆ ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಜನರಿಗೆ ಸಾಧ್ಯವಾಗಿರಲಿಲ್ಲ. ಆದರೆ 1931 ರಲ್ಲಿ ಮೂವರು ಬ್ರಿಟಿಷ್ ಪರ್ವತಾರೋಹಿಗಳಾದ ಫ್ರಾಂಕ್ ಎಸ್. ಸ್ಮಿಥ್, ಎರಿಕ್ ಶಿಪ್ಟನ್ ಮತ್ತು ಆರ್.ಎಲ್. ಹೋಲ್ಡ್ಸ್‌ವರ್ತ್ ಅವರು ಮೌಂಟ್ ಕಾಮೆಟ್‌ ನಿಂದ ಹಿಂದಿರುಗುವಾಗ ತಮ್ಮ ದಾರಿ ತಪ್ಪಿದರು. ಆಗ ಈ ಸ್ಥಳವನ್ನು ಕಂಡುಹಿಡಿದರು. ಕಣಿವೆ ಹೂಗಳಿಂದ ತುಂಬಿದ್ದರಿಂದ 'ಹೂವಿನ ಕಣಿವೆ' ಎಂದು ಹೆಸರಿಸಲಾಯಿತು. ಈ ಹೂಗಳ ಕಣಿವೆಯನ್ನು ಸರ್ಕಾರವು 1980 ರಲ್ಲಿ ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಿತು.

1982 ರಲ್ಲಿ ಈ ಉದ್ಯಾನವನವನ್ನು ನಂದಾದೇವಿ ರಾಷ್ಟ್ರೀಯ ಉದ್ಯಾನವನ ಎಂದು ಮರುನಾಮಕರಣ ಮಾಡಲಾಯಿತು. 1988 ರಲ್ಲಿ, ನಂದಾ ದೇವಿ ಬಯೋಸ್ಪಿಯರ್ ರಿಸರ್ವ್ ಅನ್ನು ಸ್ಥಾಪಿಸಿದಾಗ, ಈ ಸ್ಥಳವನ್ನು ಅದರ ಪ್ರಮುಖ ವಲಯವೆಂದು ಘೋಷಿಸಲಾಯಿತು. ನಂದಾ ದೇವಿ ಬಯೋಸ್ಪಿಯರ್ ರಿಸರ್ವ್ 2004 ರಿಂದ ಯುನೆಸ್ಕೋ ವರ್ಲ್ಡ್ ನೆಟ್‌ವರ್ಕ್ ಆಫ್ ಬಯೋಸ್ಫಿಯರ್ ರಿಸರ್ವ್‌ನ ಭಾಗವಾಗಿದೆ. ವ್ಯಾಲಿ ಆಫ್ ಫ್ಲವರ್ಸ್ ಈಗ ವಿಶ್ವ ಪರಂಪರೆಯ ತಾಣವಾಗಿದೆ.

thevalleyofflower-1594031121-1661019318.jpg -Properties

ಅಪರೂಪದ ಪ್ರಾಣಿ-ಪಕ್ಷಿಗಳು

ಹೂಗಳ ಕಣಿವೆಯು ಕಂಡುಬರುವ ಎಲ್ಲಾ ಪ್ರಾಣಿಗಳು ಅಪರೂಪದ ಅಥವಾ ಅಳಿವಿನಂಚಿನಲ್ಲಿರುವ ಜಾತಿಗಳಾಗಿವೆ. ಸಾಮಾನ್ಯವಾಗಿ ತಾಹ್ರ್, ಸೆರೋವ್, ಗೋರಲ್, ಕಸ್ತೂರಿ ಜಿಂಕೆ ಮತ್ತು ಭಾರಲ್, ನೀಲಿ ಕುರಿಗಳು ಅಪರೂಪವಾಗಿ ಕಂಡುಬರುತ್ತವೆ. ಪಕ್ಷಿಗಳ ಪೈಕಿ ಹಿಮಾಲಯನ್ ಗೋಲ್ಡನ್ ಈಗಲ್, ಗ್ರಿಫನ್ ರಣಹದ್ದು, ಸ್ನೋ ಪಾರ್ಟ್ರಿಡ್ಜ್, ಹಿಮಾಲಯನ್ ಸ್ನೋ ಕಾಕ್, ಹಿಮಾಲಯನ್ ಮೊನಾಲ್, ಸ್ನೋ ಪಾರಿವಾಳ ಹೀಗೆ ಮುಂತಾದ ಪಕ್ಷಿಗಳು ಕಂಡುಬರುತ್ತವೆ. ಬಣ್ಣ ಬಣ್ಣ ಚಿಟ್ಟೆಗಳು ಸಹ ಆಕರ್ಷಿಸಲಿದ್ದು, ಲೈಮ್ ಚಿಟ್ಟೆಯನ್ನೂ ನಾವಿಲ್ಲಿ ವೀಕ್ಷಿಸಬಹುದು.

ಪ್ರವೇಶ ಶುಲ್ಕವಿದೆ

ಭಾರತೀಯರಿಗೆ ಮತ್ತು ವಿದೇಶಿಯರಿಗೆ ಬೇರೆ ಬೇರೆ ದರದಲ್ಲಿ ಟಿಕೆಟ್ ನೀಡಲಾಗುತ್ತದೆ. ಟಿಕೆಟ್ ಖರೀದಿಸಿದ ದಿನಾಂಕದಿಂದ 3 ದಿನಗಳವರೆಗೆ ಮಾನ್ಯವಾಗಿರುತ್ತದೆ. ಜೂನ್ 1 ರಿಂದ ಅಕ್ಟೋಬರ್ 4 ರವರೆಗೆ ತೆರೆದಿರುತ್ತದೆ.

22-1445495770-kaasplateaue-1661019326.jpg -Properties

ಹೂಗಳ ಕಣಿವೆಗೆ ಭೇಟಿ ನೀಡಲು ಉತ್ತಮ ಸಮಯ

ಕಣಿವೆಯು ಪ್ರತಿ ವರ್ಷ ಜೂನ್ 1 ರಂದು ತೆರೆಯುತ್ತದೆ ಮತ್ತು ಅಕ್ಟೋಬರ್‌'ನಲ್ಲಿ ಮುಚ್ಚಲಾಗುತ್ತದೆ. ಹೂಗಳ ಕಣಿವೆಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಜುಲೈನಿಂದ ಸೆಪ್ಟೆಂಬರ್ ನಡುವಿನ ಅವಧಿ. ನೀವು ಈ ಸಮಯದಲ್ಲಿ ಕಣಿವೆಯಲ್ಲಿ ಹೂಗಳನ್ನು ನೋಡಬಹುದು. ಹೂವುಗಳು ಅರಳುವುದನ್ನು ನೋಡಲು ಆಗಸ್ಟ್ ಅತ್ಯುತ್ತಮ ಸಮಯ. ಆದರೆ, ಭೂಕುಸಿತ ಮತ್ತು ಭಾರೀ ಮಳೆಯಿಂದಾಗಿ ಅಲ್ಲಿಗೆ ತಲುಪಲು ಕಷ್ಟವಾಗಬಹುದು. ಕಣಿವೆಯ ಪ್ರವೇಶವನ್ನು ಮಧ್ಯಾಹ್ನದ ವೇಳೆಗೆ ನಿರ್ಬಂಧಿಸಲಾಗಿದೆ ಎಂಬುದನ್ನು ನೆನಪಿನಲ್ಲಿಡಿ. ನೀವು ಕಣಿವೆಯನ್ನು ಬೆಳಗ್ಗೆ 7:00 ಮತ್ತು 2:00 ಗಂಟೆಯ ನಡುವೆ ಮಾತ್ರ ಪ್ರವೇಶಿಸಬಹುದು. ಇಲ್ಲಿಂದ 5:00 ಗಂಟೆಗಿಂತ ಮೊದಲು ಹೊರಡಬೇಕಾಗುತ್ತದೆ. ರಾತ್ರಿಯ ಕ್ಯಾಂಪಿಂಗ್ ಅನ್ನು ನಿಷೇಧಿಸಲಾಗಿದೆ.

ತಲುಪುವುದು ಹೇಗೆ?

ಹೂಗಳ ಕಣಿವೆಗೆ ನೇರ ರಸ್ತೆ ಸಂಪರ್ಕವಿಲ್ಲ. ನೇರ ರೈಲು ಸಂಪರ್ಕವಿಲ್ಲ. ಕಣಿವೆಯಿಂದ 272 ಕಿಮೀ ದೂರದಲ್ಲಿರುವ ರಿಷಿಕೇಶವು ಹತ್ತಿರದ ರೈಲು ನಿಲ್ದಾಣವಾಗಿದೆ. ಆದ್ದರಿಂದ ಇಲ್ಲಿ ನಡೆಯುವುದೊಂದೇ ಆಯ್ಕೆ. ಕಣಿವೆಗೆ ಹತ್ತಿರದ ಸ್ಥಳವೆಂದರೆ ಗೋವಿಂದಘಾಟ್ (ಜೋಶಿಮಠದ ಹತ್ತಿರ) ಇದು ಹೂವಿನ ಕಣಿವೆಯಿಂದ ಸರಿಸುಮಾರು 17 ಕಿಮೀ ದೂರದಲ್ಲಿದೆ. ಇಲ್ಲಿಂದ ಟ್ರೆಕ್ಕಿಂಗ್ ಮೂಲಕ ತಲುಪಬಹುದು. ಗಂಗರಿಯಾ (ಇದು ಕಣಿವೆಯಿಂದ ಸರಿಸುಮಾರು 3 ಕಿಮೀ ದೂರದಲ್ಲಿದೆ) ಸಮೀಪಿಸುತ್ತಿರುವಾಗ, ಹೂವುಗಳ ಸುಗಂಧವು ಬರಲು ಪ್ರಾರಂಭಿಸುತ್ತದೆ.

ಪ್ರವಾಸಿಗರು ಸುವಾಸನೆಯಿಂದ ಮಂತ್ರಮುಗ್ಧರಾಗುವುದು ಖಚಿತ. ಪ್ರವಾಸಿಗರು ಹೂಗಳ ಕಣಿವೆಯನ್ನು ಪ್ರವೇಶಿಸಲು ಗಂಗಾರಿಯಾದಿಂದ ಪರವಾನಗಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಅನುಮತಿಯು 3 ದಿನಗಳವರೆಗೆ ಇರುತ್ತದೆ ಮತ್ತು ನೀವು ಬೆಳಗಿನ ಸಮಯದಲ್ಲಿ ಮಾತ್ರ ಚಾರಣ ಮಾಡಬಹುದು. ಉತ್ತರಾಖಂಡ ಮತ್ತು ನವದೆಹಲಿಯ ಉಳಿದ ಸ್ಥಳಗಳಿಂದ ಜೋಶಿಮಠಕ್ಕೆ ಸಂಪರ್ಕವಿರುವುದರಿಂದ ಜೋಶಿಮಠವನ್ನು ತಲುಪುವುದು ಕಷ್ಟದ ಕೆಲಸವಲ್ಲ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+