Search
  • Follow NativePlanet
Share
» »ಲೈಫ್‌ನಲ್ಲಿ ಒಮ್ಮೆಯಾದ್ರೂ ಕೂರ್ಗ್‌ಗೆ ಹೋಗಬೇಕು ಯಾಕೆ?

ಲೈಫ್‌ನಲ್ಲಿ ಒಮ್ಮೆಯಾದ್ರೂ ಕೂರ್ಗ್‌ಗೆ ಹೋಗಬೇಕು ಯಾಕೆ?

ಮಡಿಕೇರಿಗೆ ಹೋಗೋದಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಕೊಡಗಿನ ವಾತಾವರಣ ಯಾರನ್ನಾದರೂ ತನ್ನತ್ತ ಸೆಳೆಯದೇ ಇರದು. ಅಲ್ಲಿನ ಪ್ರಕೃತಿ ಸೌಂದರ್ಯ ನಿಮ್ಮನ್ನು ಮತ್ತೆ ಮತ್ತೆ ಅಲ್ಲಿಗೆ ಕರೆಸುತ್ತದೆ. ಹಸಿರು ಕಾಡುಗಳು ಮತ್ತು ಮಂಜಿನ ಪರ್ವತಗಳಿಂದ ಕೂಡಿದ ಕೂರ್ಗ್ ನ್ನು ಭಾರತದ ಸ್ಕಾಟ್ಲ್ಯಾಂಡ್ ಎಂದು ಕರೆಯಲಾಗುತ್ತದೆ. ದಕ್ಷಿಣ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಕೊಡಗುನ್ನು ಬ್ರಿಟಿಷರು ಕೂರ್ಗ್ ಎಂದು ಕರೆದರು. ಬ್ರಿಟಿಷರು ದೇಶವನ್ನು ತೊರೆದ ನಂತರವೂ ಈ ಹೆಸರು ಹಾಗೆಯೇ ಉಳಿಯಿತು.

ಪ್ರಕೃತಿ ಸೌಂದರ್ಯ

ಪ್ರಕೃತಿ ಸೌಂದರ್ಯ

PC: Manas Mondal

ಕೂರ್ಗ್‌ನಲ್ಲಿನ ರಸ್ತೆಗಳು ಹಸಿರು ಕಾಫಿ ತೋಟಗಳು ಮತ್ತು ಮೆಣಸು ಬಳ್ಳಿಗಳು, ಮಂಜಿನ ವಾತಾವರಣಗಳಿಂದ ನಿಜಕ್ಕೂ ಸುಂದರ ದೃಶ್ಯಗಳನ್ನು ಆನಂದಿಸ ಬಹುದು. ಈ ಭೂಮಿಯು ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯೊಂದಿಗೆ ಅದರ ಟೈಮ್ಲೆಸ್ ಸೌಂದರ್ಯದೊಂದಿಗೆ ತುಂಬಿದೆ. ಇದು ತನ್ನ ಸ್ವಾಭಾವಿಕ ಸೌಂದರ್ಯ, ದೇವಾಲಯಗಳು, ಧಾರ್ಮಿಕತೆಗಳು, ಆಚರಣೆಗಳು ಮತ್ತು ಹೆಚ್ಚಿನವುಗಳಿಂದ ಕೂಡಿದೆ.

ನಿಸರ್ಗಧಾಮ

ನಿಸರ್ಗಧಾಮ

PC: Sajith T S

ಸುಂದರವಾದ ಪರಿಸರ ಉದ್ಯಾನವನವಾಗಿದ್ದು, ದಟ್ಟವಾದ ಬಿದಿರು ತೋಪುಗಳು ಶ್ರೀಗಂಧದ ಮರ ಮತ್ತು ತೇಗದ ಮರಗಳಿಂದ ತುಂಬಿವೆ. ಕಾವೇರಿ ನದಿ ಸ್ವತಃ ಒಂದು ದ್ವೀಪವನ್ನು ರಚಿಸುವ ಸ್ಥಳವಾಗಿದೆ. ಇದು ಬಿದಿರು ಕಾಡುಗಳಿಂದ ತುಂಬಿರುತ್ತದೆ. ಜಿಂಕೆ ಉದ್ಯಾನವನ, ಟ್ರೆಟಪ್ ಆಶ್ರಯ, ನೇತಾಡುವ ಸೇತುವೆ ಮತ್ತು ಹೆಚ್ಚಿನವುಗಳ ಮೂಲಕ ಸ್ವಲ್ಪ ದೂರದಲ್ಲಿ ಈ ಪ್ರದೇಶದ ಸೌಂದರ್ಯವನ್ನು ಆನಂದಿಸಬಹುದು.

ಗಾಡಿಗೆಯ ಇಂಡೋ-ಸಾರ್ಸೆನಿಕ್ ಆರ್ಕಿಟೆಕ್ಚರ್

ಗಾಡಿಗೆಯ ಇಂಡೋ-ಸಾರ್ಸೆನಿಕ್ ಆರ್ಕಿಟೆಕ್ಚರ್

PC: pranav

ಇಲ್ಲಿರುವ ಸ್ಮಾರಕಗಳು, ಇದು ಕೊಡವ ರಾಜಮನೆತನಕ್ಕೆ ಸೇರಿದವುಗಳಾಗಿವೆ. ರಾಜ ಮನೆತನದ ಮರಣದ ಅವಶೇಷಗಳು ಇದಾಗಿದೆ. ಇಲ್ಲಿ ರಾಜ ವೀರರಾಜೇಂದ್ರ ಮತ್ತು ರಾಣಿ ಮಹಾದೇವಿಯಮ್ಮನ ಮರಣದ ಅವಶೇಷಗಳು ಇವೆ. ಸಮಾಧಿಗಳನ್ನು ಮಹಮ್ಮದ್ ಶೈಲಿಯ ಪ್ರಕಾರ ನಿರ್ಮಿಸಲಾಗಿದೆ. ಮಧ್ಯದಲ್ಲಿ ಗೋರಿಗಳು ಮತ್ತು ಮೂಲೆಗಳಲ್ಲಿ ಗೋಪುರಗಳ ಮೂಲಕ ನಿರ್ಮಿಸಲಾಗಿದೆ. ರಾಜ ಹಿಂದೂ ಎಂದು ಸಮಾಧಿಯ ಒಳಗೆ ಭಗವಾನ್ ಶಿವನನ್ನು ಪೂಜಿಸಲಾಗುತ್ತದೆ, ಆದರೆ ಕುತೂಹಲಕಾರಿ ಸಂಗತಿಗಳು ಬಹುತೇಕ ಸಮಾಧಿಗಳು ಮುಸ್ಲಿಂ ರಾಜರು ಮತ್ತು ರಾಜವಂಶಗಳಿಗೆ ಸೇರಿದವು.

ರಾಜಾ ಸೀಟ್ ನಲ್ಲಿ ಸೂರ್ಯಾಸ್ತ ವೀಕ್ಷಿಸಿ

ರಾಜಾ ಸೀಟ್ ನಲ್ಲಿ ಸೂರ್ಯಾಸ್ತ ವೀಕ್ಷಿಸಿ

PC: Jesjose

ಈ ಪ್ರದೇಶದ ಅಂತ್ಯವಿಲ್ಲದ ಕಣಿವೆಗಳಲ್ಲಿ ಸೂರ್ಯಾಸ್ತದ ಮೂಲಕ ತಮ್ಮ ಸಂಗಾತಿಗಳೊಂದಿಗೆ ಸಂಜೆ ಕಳೆಯಲು ಕೊಡಗು ರಾಜರ ನೆಚ್ಚಿನ ಸ್ಥಾನ ರಾಜಾ ಸೀಟ್ ಆಗಿತ್ತು. ಈ ಉದ್ಯಾನವು ಹಲವಾರು ಎತ್ತರದ ಮತ್ತು ಕಡಿಮೆ ಪರ್ವತಗಳಿಂದ ಸುತ್ತುವರಿಯಲ್ಪಟ್ಟಿದೆ. ಇದು ಇಲ್ಲಿನ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ.

ಟಿಬೆಟ್‌ನ ಒಂದು ಸ್ಲೈಸ್ ಅನುಭವ

ಟಿಬೆಟ್‌ನ ಒಂದು ಸ್ಲೈಸ್ ಅನುಭವ

PC: Sahyadri H S

ಬೈಲಕುಪ್ಪೆ ಭಾರತದಲ್ಲಿನ ಅತಿದೊಡ್ಡ ಟಿಬೆಟಿಯನ್ ವಸಾಹತುಗಳಲ್ಲಿ ಒಂದಾಗಿದೆ. ಸ್ತೂಪಗಳು, ಪ್ರಾರ್ಥನಾ ಧ್ವಜಗಳು ಮತ್ತು ವಿವಿಧ ಟಿಬೆಟಿಯನ್ ಬೌದ್ಧ ಧರ್ಮದ ಪಂಗಡಗಳ ಮಠಗಳನ್ನು ಅಲಂಕರಿಸಿರುವ ಇದನ್ನು ಹಲವಾರು ಶಿಬಿರಗಳನ್ನಾಗಿ ವಿಂಗಡಿಸಲಾಗಿದೆ. ಗೋಲ್ಡನ್ ಟೆಂಪಲ್ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು, ಪದ್ಮಸಂಭವ, ಅಮಿತಾಯುಸ್ ಮತ್ತು ಬುದ್ಧನ ಎತ್ತರದ ಪ್ರತಿಮೆಗಳಿಂದ ಇದು ನಿಶ್ಚಯವಾಗಿ ಉಳಿಯುತ್ತದೆ.

ದುಬಾರೆನಲ್ಲಿ ಆನೆಗಳ ಕ್ಯಾಂಪ್

ದುಬಾರೆನಲ್ಲಿ ಆನೆಗಳ ಕ್ಯಾಂಪ್

PC: Navin Sigamany

ಕರ್ನಾಟಕದ ಅರಣ್ಯ ಇಲಾಖೆಯು ಅನೇಕ ಆನೆಗಳ ಶಿಬಿರಗಳನ್ನು ಹೊಂದಿದೆ. ಇದು 150 ಆನೆಗಳ ನಿವಾಸವನ್ನು ಹೊಂದಿದೆ ಅವುಗಳಲ್ಲಿ ಒಂದು ದುಬಾರೆ ಎಲಿಫೆಂಟ್ ಕ್ಯಾಂಪ್ ಕೂಡಾ ಒಂದು. ಮೈಸೂರು ದಸರಾದಲ್ಲಿ ನಾವು ನೋಡಬೇಕಾದ ಆನೆಗಳು ಈ ಶಿಬಿರದ ನಿವಾಸಿಗಳು, ಈ ಸೌಮ್ಯ ದೈತ್ಯರೊಂದಿಗೆ ಸಂವಹನ ಮಾಡಲು ಭೇಟಿ ನೀಡಲಾಗುತ್ತದೆ. ಕಾವೇರಿ ನದಿಯಲ್ಲಿ ನೀವು ಆನೆಗೆ ಸ್ನಾನ ಮಾಡಿಸಬಹುದು. ಅವುಗಳಿಗೆ ಆಹಾರವನ್ನೂ ನೀಡಬಹುದು. ನಂತರ ಹತ್ತಿರವಿರುವ ಕಾಡಿನಲ್ಲಿ ಸವಾರಿಯು ಮಾಡಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+