Search
  • Follow NativePlanet
Share
» »ಈ ದೇವಿ ಹರಸಿದರೆ ಕಷ್ಟಗಳು ಮಂಗಮಾಯ!

ಈ ದೇವಿ ಹರಸಿದರೆ ಕಷ್ಟಗಳು ಮಂಗಮಾಯ!

ಉತ್ತರ ಪ್ರದೇಶ ರಾಜ್ಯದ ಕಾನಪುರ ದೇಹಾತ್ ಜಿಲ್ಲೆಯ ರೂರಾ ನದಿಯ ತಟದ ಮೇಲಿರುವ ಪರಹುಲ್ ದೇವಿಯ ದೇವಾಲಯವು ಸಾಕಷ್ಟು ಪ್ರಭಾವಶಾಲಿಯಾಗಿದ್ದು ಅನೇಕ ಜನರಿಂದ ಭೇಟಿ ನೀಡಲ್ಪಡುತ್ತದೆ

By Vijay

ನೂರಾರು ವರ್ಷಗಳ ಇತಿಹಾಸವಿರುವ ದೇವಾಲಯ ಇದಾಗಿದೆ. ಇದು ತುಸು ವಿಭಿನ್ನವಾದ ದೇವಾಲಯ. ಉತ್ತರ ಭಾರತದ ರಾಜ್ಯವೊಂದರಲ್ಲಿದೆ. ಈ ದೇವಿಯನ್ನು ಪರಹುಲ್ ದೇವಿ ಎಂದೆ ಕರೆಯುತ್ತಾರೆ. ಶಕ್ತಿಯ ಅವತಾರ ಈಕೆಯಾಗಿದ್ದಾಳೆಂದು ನಂಬಲಾಗುತ್ತದೆ ಅಲ್ಲದೆ ಈಕೆ ಅಪಾರ ಪ್ರಭಾವಶಾಲಿ ದೇವಿ ಎಂದೂ ಸಹ ಕೊಂಡಾಡಲಾಗುತ್ತದೆ.

ಮುಖ್ಯವಾಗಿ ಮನೋಕಾಮನೆಗಳಿರುವವರು ಅಥವಾ ಜೀವನದಲ್ಲಿ ಎಡೆ ಬಿಡದೆ ತೊಂದರೆ, ಕಷ್ಟಗಳಿಗೆ ಒಳಗಾಗುತ್ತಿರುವವರು ಈ ದೇವಿಯನ್ನು ಕುರಿತು ಹರಕೆ ಹೊತ್ತುಕೊಳ್ಳುತ್ತಾರೆ. ಸ್ಥಳೀಯವಾಗಿ ಹೇಳುವಂತೆ ಹೀಗೆ ಹರಕೆ ಹೊತ್ತಿಕೊಂಡವರು ಶತಪ್ರತಿಶತದಷ್ಟು ದೇವಿಯನ್ನು ನಂಬಿದ್ದೆ ಆದಲ್ಲಿ ಅವರ ಎಲ್ಲ ಬಯಕೆಗಳು ಈಡೇರಲ್ಪಡುತ್ತವೆ ಅಲ್ಲದೆ ಕಷ್ಟಗಳು ಧಿಡೀರನೆ ಮಂಗ ಮಾಯವಾಗುತ್ತವಂತೆ!

ಈ ದೇವಿ ಹರಸಿದರೆ ಕಷ್ಟಗಳು ಮಂಗಮಾಯ!

ಚಿತ್ರಕೃಪೆ: Teacher1943

ಉತ್ತರ ಪ್ರದೇಶ ರಾಜ್ಯದ ಕಾನಪುರ ದೇಹಾತ್ ಜಿಲ್ಲೆಯಲ್ಲಿ ಈ ಪುರಾತನ ದೇವಾಲಯವಿದೆ. ರೂರಾ-ಶಿವಲಿ ರಸ್ತೆಯಿಂದ ಮೂರು ಕಿ.ಮೀ ಗಳಷ್ಟು ದೂರದಲ್ಲಿರುವ ಲಮಹರಾ ಎಂಬ ಗ್ರಾಮದ ಸರಹದ್ದಿನಲ್ಲಿ ಹರಿದಿರುವ ರಿಂದ್ ನದಿಯ ತಟದ ಮೇಲೆ ಈ ಪರಹುಲ್ ದೇವಿಯ ದೇವಾಲಯವಿದೆ. ಅಲ್ಲದೆ ಮಹಾದೇವನ ದೇವಾಲಯವು ಇಲ್ಲಿನ ಸಂಕೀರ್ಣದಲ್ಲಿದೆ.

ಪರಹುಲ್ ದೇವಿಯು ಸಾಕಷ್ಟು ಪ್ರಭಾವಿ ದೇವಿಯಾಗಿದ್ದು ಉತ್ತರ ಪ್ರದೇಶ ರಾಜ್ಯದ ಮೂಲೆ ಮೂಲೆಗಳಿಂದ ಕಷ್ಟಗಳನ್ನು ದೂರ ಮಾಡು ತಾಯೆ ಎಂದು ಬೇಡಿ ಕೊಂಡು ಬರುವ ಭಕ್ತರ ಸಂಖ್ಯೆ ಅಪಾರ. ಈ ಪ್ರದೇಶದ ಐತಿಹಾಸಿಕ ನಾಯಕರಾದ ಅಲಾಹ್ ಮತ್ತು ಉದ್ಧಳ ಎಂಬುವವರ ಕಥೆ ಈ ದೇವಾಲಯದೊಂದಿಗೆ ಬಲು ರೋಚಕವಾಗಿ ತಳುಕು ಹಾಕಿಕೊಂಡಿದೆ.

ಈ ದೇವಿ ಹರಸಿದರೆ ಕಷ್ಟಗಳು ಮಂಗಮಾಯ!

ರಿಂದ್ ನದಿ ಹಾಗೂ ದೇವಾಲಯ, ಚಿತ್ರಕೃಪೆ: Teacher1943

ಅಲಾಹ್ ಎಂಬ ಯೋದ್ಧನು ಈ ದೇವಿಯ ಪರಮ ಭಕ್ತನಾಗಿದ್ದನು. ತಾನ್ ವಿಜಯಿಯಾಗಬೇಕೆಂದು ದೇವಿಯಲ್ಲಿ ಬೇಡಿಕೊಂಡು ಅದರಂತೆ ಯುದ್ಧವೊಂದರಲ್ಲಿ ಜಯ ಸಾಧಿಸಿದನು. ಇದರಿಂದ ಸಂತಸ ಹೊಂದಿದ ಆತ ಕೆಜಿ ಗಟ್ಟಲೆ ಬಂಗಾರವಿರುವ ದೀಪ ಉರಿಸುವ ಕುಂಡವೊಂದನ್ನು ದೇವಿಗೆ ಕಾಣಿಕೆಯಾಗಿ ಅರ್ಪಿಸಿದ. ಆ ಸುವರ್ಣವು ಸಾಕಷ್ಟು ಹೊಳೆಯುತ್ತಿತ್ತು.

ಅದರ ಹೊಳಪು ಹೇಗಿತ್ತೆಂದರೆ ಅದರಿಂದ ಪ್ರತಿಫಲಿತವಾದ ಬೆಳುಕು ದೂರದ ಕನ್ನೌಜ್ ಅರಮನೆಗೆ ತಲುಪಿ ಅಲ್ಲಿ ರಾಣಿ ಪದ್ಮಾವತಿ ಮಲಗಲು ಅದು ಅಡ್ಡಿಪಡಿಸುತ್ತಿತ್ತು. ಅಲ್ಲಿನ ದೊರೆಯಾದ ಉದ್ಧಳ ಎಂಬಾತನು ಇದನ್ನು ಕಂಡು ಆ ಕುಂಡವನ್ನು ರಿಂದ್ ನದಿಯ ಮಧ್ಯಭಾಗದಲ್ಲಿ ಎಸೆದಿದ್ದನಂತೆ. ಹೀಗೆ ಈ ಕಥೆಯು ಇಲ್ಲಿನ ಜನರು ತಮ್ಮ ಪೂರ್ವಜರಿಂದ ಕೇಳಿಕೊಂಡು ಬಂದಿದ್ದಾರಂತೆ.

ದಕ್ಷಿಣದ ಜನರು ಹೆಚ್ಚಾಗಿ ಭೇಟಿ ನೀಡುವ ಉತ್ತರದ ಸ್ಥಳಗಳು!

ಅಷ್ಟಕ್ಕೂ ಇದರಲ್ಲಿರುವ ರೋಚಕತೆ ಎಂದರೆ, ಇಲ್ಲಿನ ಹಿರಿಯರು ಹೇಳುವ ಪ್ರಕಾರ ಇಂದಿಗೂ ಮಧ್ಯರಾತ್ರಿಯ ಸಮಯದಲ್ಲಿ ಆ ಸುವರ್ಣಕುಂಡದಿಂದ ದೇವಿಯ ಸನ್ನಿಧಿಯಲ್ಲಿ ದೀಪ ಬೆಳಗುತ್ತದೆ ಹಾಗೂ ಪ್ರತಿ ದಿನ ಮುಂಜಾವಿನ ಸಂದರ್ಭದಲ್ಲಿ ಅರ್ಚಕರು ದೇವಿಯ ಸನ್ನಿಧಿಗೆ ಬಂದಾಗ ತಾಜಾ ಗುಲಾಬು ಹೂವುಗಳು ದೇವಿಗೆ ಏರಿಸಲ್ಪಟ್ಟಿರುತ್ತವಂತೆ!

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+