Search
  • Follow NativePlanet
Share
» »ಸುಂದರವಾದ ತಾಣದಲ್ಲಿ ದೆವ್ವದ ಕಾಟ, ಕೂಗಾಟ…ಸ್ಥಳೀಯರು ಹೇಳುವುದೊಂದೇ “ಅಲ್ಲಿಗೆ ತಪ್ಪಿಯೂ ಹೋಗಬೇಡಿ”

ಸುಂದರವಾದ ತಾಣದಲ್ಲಿ ದೆವ್ವದ ಕಾಟ, ಕೂಗಾಟ…ಸ್ಥಳೀಯರು ಹೇಳುವುದೊಂದೇ “ಅಲ್ಲಿಗೆ ತಪ್ಪಿಯೂ ಹೋಗಬೇಡಿ”

ಉತ್ತರಾಖಂಡವನ್ನು 'ಭೂಮಿಯ ಮೇಲಿನ ಸ್ವರ್ಗ' ಎಂದು ಕರೆಯಲಾಗುತ್ತದೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿನ ಗಿರಿಧಾಮಗಳನ್ನು ನೋಡಲು ಇಷ್ಟಪಡುತ್ತಾರೆ. ಅದರಲ್ಲೂ ಉತ್ತರಾಖಂಡದ ಮಸ್ಸೂರಿ ಒಂದು ಭವ್ಯವಾದ ಮತ್ತು ಹಳೆಯ ಸುಂದರವಾದ ಗಿರಿಧಾಮವಾಗಿದೆ. ಇಲ್ಲಿ ವರ್ಷವಿಡೀ ಪ್ರವಾಸಿಗರು ತುಂಬಿ ತುಳುಕುತ್ತಿರುತ್ತಾರೆ. ದೂರದ ಊರುಗಳಿಂದೆಲ್ಲಾ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ನೀವು ಸಹ ಮಸ್ಸೂರಿಯ ಸೌಂದರ್ಯ ಮತ್ತು ಅದರ ಪ್ರಸಿದ್ಧ ಮಾಲ್ ರಸ್ತೆಗೆ ಈಗಾಗಲೇ ಭೇಟಿ ನೀಡಿರಬಹುದು.

ಆದರೆ ಮಸ್ಸೂರಿಯ ಬಳಿ ತುಂಬಾ ಭಯಾನಕ ಸ್ಥಳವೊಂದಿದೆ ಎಂದು ನಿಮಗೆ ತಿಳಿದಿದೆಯೇ. ಹೌದು, ಜನರು ಇಲ್ಲಿಗೆ ಹೋಗಲು ಹಿಂಜರಿಯುತ್ತಾರೆ. ಸ್ಥಳೀಯ ಜನರ ಪ್ರಕಾರ, ಇಂದಿಗೂ ರಾತ್ರಿ ವೇಳೆ ಈ ಸ್ಥಳದಲ್ಲಿ ಕೂಗುವ ಶಬ್ದಗಳು ಕೇಳಿಬರುತ್ತವೆಯಂತೆ. ಇದನ್ನು ಹಾಂಟೆಡ್ ಮೈನ್ ಎಂದು ಕರೆಯಲಾಗುತ್ತದೆ. ಹಾಗಾದರೆ ಬನ್ನಿ ಈ ದೆವ್ವದ ಸ್ಥಳದ ಬಗ್ಗೆ ತಿಳಿಯೋಣ.

lambideharmines

ಸ್ಥಳೀಯರು ಹೇಳುವುದೇನು?

ಈ ಸ್ಥಳ ಉತ್ತರಾಖಂಡದ "ಲಂಬಿ ದೇಹರ್ ಮೈನ್ಸ್‌". ಮಸ್ಸೂರಿಯಿಂದ ಕೆಲವು ಕಿಲೋಮೀಟರ್ ದೂರದಲ್ಲಿದೆ. ಈ ಸ್ಥಳವು ಜನರಿಗೆ ಬಹಳ ಭಯಾನಕ ಮತ್ತು ದೆವ್ವದ ಮಾರ್ಗವಾಗಿದೆ. ಹತ್ತಿರದ ಜನರು ಈ ಸ್ಥಳದ ಬಗ್ಗೆ ಅನೇಕ ಪ್ರೇತ ಕಥೆಗಳನ್ನು ಹೇಳುತ್ತಾರೆ. ಅನೇಕ ಭಯಾನಕ ಚಲನಚಿತ್ರಗಳು ಮತ್ತು ಧಾರಾವಾಹಿಗಳನ್ನು ಸಹ ಇಲ್ಲಿ ಚಿತ್ರೀಕರಿಸಲಾಗಿದೆ. ಈ ಸ್ಥಳಕ್ಕೆ ಭೇಟಿ ನೀಡುವ ಬಗ್ಗೆ ಸ್ಥಳೀಯ ಜನರನ್ನು ಕೇಳಿದರೆ, ಎಲ್ಲರೂ ಹೋಗಬೇಡಿ ಎಂದೇ ಸಲಹೆ ನೀಡುತ್ತಾರೆ.

ಅತ್ಯಂತ ಅಪಾಯಕಾರಿ ಸ್ಥಳ

1990 ರಲ್ಲಿ ಗಣಿಗಾರಿಕೆಯ ಸಮಯದಲ್ಲಿ ಕೆಲವು ತಪ್ಪು ಕಾರ್ಯವಿಧಾನಗಳಿಂದ 50,000 ಕಾರ್ಮಿಕರು ಪ್ರಾಣ ಕಳೆದುಕೊಂಡರು ಎಂದು ಹೇಳಲಾಗುತ್ತದೆ. ಈ ಗಣಿ ಬಳಿ ವಾಸಿಸುತ್ತಿದ್ದ ಕಾರ್ಮಿಕರೆಲ್ಲರೂ ಶ್ವಾಸಕೋಶದ ಕಾಯಿಲೆಗಳಿಂದ ಬಳಲುತ್ತಿದ್ದರು. ಇಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಕಾರ್ಮಿಕರು ಕೇವಲ ಕೆಮ್ಮಿನಿಂದ ಸಾವನ್ನಪ್ಪಿದ್ದಾರೆ. ಕಾರ್ಮಿಕರು ರಕ್ತ ವಾಂತಿ ಮಾಡಿಕೊಂಡಿದ್ದರು. ಆ ಸಮಯದಿಂದ "ದೇಹರ್ ಮೈನ್ಸ್" ಮಸ್ಸೂರಿಯ ಅತ್ಯಂತ ಅಪಾಯಕಾರಿ ಸ್ಥಳಗಳಲ್ಲಿ ಒಂದಾಯಿತು. ದೇಹರ್‌ನಲ್ಲಿ ಹಿಂದೆ ಸುಣ್ಣದ ಕಲ್ಲಿನ ಗಣಿಗಳಿದ್ದವು ಎಂದು ಸ್ಥಳೀಯರು ಹೇಳುತ್ತಾರೆ. ನಿರಂತರ ಸಾವುಗಳ ಕಾರಣ 1996 ರಲ್ಲಿ ಮೈನ್ಸ್‌ ಮುಚ್ಚಲಾಯಿತು.

lambideharmines

ಕಿರುಚಾಟ, ಕೂಗಾಟ ಮತ್ತು ಅಳು

ಇಂದಿಗೂ ರಾತ್ರಿ ವೇಳೆ ಇಲ್ಲಿ ಶಬ್ದ ಕೇಳಿಸುತ್ತದೆ ಎನ್ನುತ್ತಾರೆ ಸ್ಥಳೀಯರು. ಯಾರೋ ರಸ್ತೆಯಲ್ಲಿ ನಡೆದಾಡುವ ಜನರ ಸಹಾಯಕ್ಕಾಗಿ ಕೂಗುತ್ತಿರುತ್ತಾರೆ. ಈಗ ಈ ಪ್ರದೇಶದಲ್ಲಿ ಕೇವಲ 20-25 ಜನರು ವಾಸಿಸುತ್ತಿದ್ದಾರೆ. ಜನರು ರಾತ್ರಿ ಮಾತ್ರ ಈ ಸ್ಥಳಕ್ಕೆ ಭೇಟಿ ನೀಡುವುದನ್ನು ತಪ್ಪಿಸುತ್ತಾರೆ. ಇಲ್ಲಿ ನಡೆಯುವ ಘಟನೆಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಎಂಬುದು ಮುಖ್ಯವಾದ ಸಂಗತಿ. ಅಪಘಾತಗಳ ದೃಷ್ಟಿಯಿಂದಲೂ ಗಣಿಗಳನ್ನು ಮುಚ್ಚಲಾಯಿತು. ದೆವ್ವಗಳು ಇಲ್ಲಿ ವಾಸಿಸುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ಇಲ್ಲಿನ ಜನರು ರಾತ್ರಿಯಲ್ಲಿ ಕಿರುಚುತ್ತಾರೆ, ಕೂಗುತ್ತಾರೆ ಮತ್ತು ಅಳುತ್ತಾರೆ.

lambideharmines

ಮಾಟಗಾತಿ ಕಾಟವೇ?

ಈ ಗಣಿ ಈಗ ಅರಣ್ಯವಾಗಿ ಪರಿವರ್ತನೆಯಾಗಿದೆ. ಇಲ್ಲಿ ಅಂದರೆ ಲಂಬಿ ದೇಹರ್ ಗಣಿಗಳಲ್ಲಿ ದೊಡ್ಡ ಮರಗಳು ಬೆಳೆದಿವೆ. ಇಂದಿಗೂ ಇಲ್ಲಿ ಜನರ ಕಿರುಚಾಟದ ಸದ್ದು ಕೇಳಿಬರುತ್ತದೆ. ಇಲ್ಲಿ ಹೆಲಿಕಾಪ್ಟರ್ ಕೂಡ ಅಪಘಾತಕ್ಕೀಡಾಗಿದೆ, ಕಾರಣ ಯಾರಿಗೂ ತಿಳಿದಿಲ್ಲ. ರಾತ್ರಿ ವೇಳೆ ಅಪ್ಪಿ ತಪ್ಪಿಯೂ ಯಾರೂ ಈ ಜಾಗವನ್ನು ಹಾದು ಹೋಗುವುದಿಲ್ಲ. ಒಂದು ಕಾಲದಲ್ಲಿ ಈ ಸ್ಥಳವನ್ನು ಮಾಟಗಾತಿಯೊಬ್ಬರು ಕಾಡುತ್ತಿದ್ದರು. ಇದರಿಂದಾಗಿ ಇಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತವೆ ಎಂದು ಹತ್ತಿರದ ಹಿರಿಯರು ಹೇಳುತ್ತಾರೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+