ನೂರಾರು ವರ್ಷಗಳ ಕಾಲದಿಂದಲೂ ಇಲ್ಲಿನ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ಕಾರಣ .............ದೇವತೆಗಳು ಶಾಪವನ್ನು ನೀಡುತ್ತಾರೆ ಎಂದು ಯಾರು ಏರಿಲ್ಲ..
ಗಂಗೆಯ ಕುರಿತಾಗಿ, ಗಂಗಮಾತೆಯ ವಾತಾವರಣದ ಕುರಿತಾಗಿ ಆಸ್ತಿಕಿಕರವಾದ ಪುರಾಣ ಕತೆಗಳು ಇವೆ. ಪವಿತ್ರವಾದ ಭಾಗವತದಲ್ಲಿಯೂ, ಬೃಹಧರ್ಮ ಪುರಾಣಗಳಲ್ಲಿಯೂ, ದೇವಿ ಭಾಗವತದಲ್ಲಿಯೂ ಗಂಗೆಯ ಬಗ್ಗೆ ಸಾಕಷ್ಟು ಉಲ್ಲೇಖಗಳು ಇರುವುದನ್ನು ಕಾಣಬಹುದಾಗಿದೆ. ಜಗತ್ ಜನನಿ ನಿರಾಕಾಯವಾಗಿರುವ ಗಂಗ ಮಾತೆಯು ಬ್ರಹ್ಮ ದೇವನ ಕಮಂಡಲದಲ್ಲಿ ಇರುವವಳು.
ಒಮ್ಮೆ ಶಂಕರನ್ನು ಸುಮಧುರವಾದ ಲಾಲಿ ಹಾಡು ಹಾಡುವಾಗ ಅದನ್ನು ಕೇಳಿಸಿಕೊಂಡ ನಾರಾಯಣನಿಗೆ ಆನಂದಭಾಷ್ಪವಾಯಿತು. ನಾರಾಯಣನ ಕಣ್ಣಿನಿಂದ ಬಿದ್ದ ಆ ನೀರು ಗಂಗಾ ಮಾತೆಯಾಗಿ ಹರಿಯತೊಡಗಿದಳು. ಆ ನೀರು ಬ್ರಹ್ಮ ದೇವನ ಕಮಂಡಲಕ್ಕೆ ತಾಕಿತು. ಇದನ್ನು ಕಂಡ ಬ್ರಹ್ಮನು ಶ್ರೀ ಮಹಾವಿಷ್ಣುವಿನ ಪಾದ ಚರಣವನ್ನು ತನ್ನ ಕಮಂಡಲದಲ್ಲಿ ಇದ್ದ ಗಂಗ ನೀರಿನಿಂದ ತೊಳೆದನು. ಆ ಪಾದಗಳಿಂದ ಪ್ರವಹಿಸುವ ನದಿಯೇ ದಿವ್ಯಗಂಗ....
900 ವರ್ಷಗಳಿಂದಲೂ ಕೂಡ ಈ ಪರ್ವತದ ಮೇಲೆ ಯಾರು ಕೂಡ ಹತ್ತಿಲ್ಲ. ದೇವತೆಗಳು ಶಪಿಸುತ್ತಾರೆ ಎಂಬ ಒಂದು ನಂಬಿಕೆಯಾಗಿದೆ.
ಈ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ಸೂರ್ಯಾವಂಶದ ರಾಜನಾದ ಸಗರು ಎಂಬುವವನಿಗೆ ವೈದರ್ಭಿ, ಶೈಬ್ಯ ಎಂಬ ಇಬ್ಬರು ಪತ್ನಿಯರು. ಶೈಬ್ಯಳಿಗೆ ಅಸಮಂಜಸ ಎಂಬ ಕುಮಾರ ಹಾಗು ವೈದರ್ಭಿಗೆ 60 ಸಾವಿರ ಮಂದಿ ಕುಮಾರರು ಇದ್ದರು.
ಈ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ರಾಜ ಸಗರು ಒಂದು ಆಶ್ವಮೇಧ ಯಾಗವನ್ನು ಮಾಡುತ್ತಿರುತ್ತಾನೆ. ಈ ಯಾಗವನ್ನು ಭಂಗ ಮಾಡಲು ಇಂದ್ರ ದೇವನು ಯಾಗದ ಕುದುರೆಯನ್ನು ಪಾತಾಳದಲ್ಲಿ ಅಡಗಿಸಿದ.
ಈ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ಆ ಕುದುರೆಯನ್ನು ಹುಡುಕಲು ತೆರಳಿದ ಸಗರಿನ 60 ಸಾವಿರ ಮಂದಿ ಪುತ್ರರು ಕಪಿಲ ಮಹಾಮುನಿ ಶಾಪದಿಂದಾಗಿ ಭಸ್ಮವಾಗುತ್ತಾರೆ.
ಈ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ಈಗಾಗಲೇ ಭಸ್ಮವಾಗಿರುವ 60 ಸಾವಿರ ಪುತ್ರರು ಮತ್ತೇ ಮರಳಿ ಒಳ್ಳೆಯ ಸ್ಥಿತಿಗೆ ಹಿಂದಿರುಗಬೇಕು ಎಂದಾದರೆ ಗಂಗೆಯನ್ನು ಪಾತಾಳಕ್ಕೆ ಕರೆತರಬೇಕಾದ ಅವಶ್ಯಕತೆ ಎದುರಾಗುತ್ತದೆ.
ಈ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ಸಗರು ಮತ್ತು ಆತನ ಪುತ್ರ ಅಸಮಂಜಸನು ತಪಸ್ಸು ಮಾಡಿದರೂ ಕೂಡ ಪ್ರಯೋಜನವಾಗದೇ ಹೋಯಿತು.
ಈ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ಅಸಮಂಜನ ಪುತ್ರ ಅಂಶುಮಂತ. ಆ ಅಂಶುಮಂತನ ಪುತ್ರ ಭಗೀರಥ.
ಈ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ಭಗೀರಥ ತನ್ನ ತಾತರಿಗೆ ಉತ್ತಮವಾದ ಮೋಕ್ಷ ಪಾಪ್ತಿಗಾಗಿ ಗಂಗೆಗಾಗಿ ತಪ್ಪಸ್ಸು ಮಾಡಿಮಾಡುತ್ತಾನೆ.
ಈ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ಭಗೀರಥನ ತಪ್ಪಸ್ಸಿಗೆ ಮೆಚ್ಚಿದ ಗಂಗೆಯು ಪ್ರತ್ಯಕ್ಷವಾಗಿ "ನಾನು ಭೂಮಿ ಮೇಲೆ ಇಳಿದುಬರಲು ಸಿದ್ಧನಾಗಿದ್ದೇನೆ ಎಂದು ಹೇಳಿದಳು" ಆದರೆ ನನ್ನ ರಭಸವನ್ನು ತಡೆಯುವವರು ಯಾರು? ಎಂದು ಕೇಳಿದಳು.
ಈ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ಭಗೀರಥನು ಶಿವನಿಗಾಗಿ ತಪಸ್ಸು ಮಾಡಿದನು. ಅನುಗ್ರಹಿಸಿದ ಪರಮಶಿವನು ಗಂಗೆಯು ಭೂಮಿಯ ಮೇಲೆ ಬಂದ ಕ್ಷಣವೇ ತನ್ನ ತಲೆಯ ಮೇಲಿನ ಜಾಟಾಜೂಟದಲ್ಲಿ ಬಂಧಿಸಿದ. ಭಗೀರಥನ ಪ್ರಾರ್ಥನೆಯ ಮೇರೆಗೆ ಶಿವನು ಸ್ವಲ್ಪ ಭಾಗವನ್ನು ನೆಲದ ಮೇಲೆ ಬಿಟ್ಟನು.
ಈ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ಭಗೀರಥನ ಹಿಂದೆ ಗಂಗ ಮಾತೆಯು ಸಾಗಿದಳು. ದಾರಿಯಲ್ಲಿ ಜಹ್ನಮುನಿಯ ಆಶ್ರಮವಿತ್ತು. ಆದರೆ ಆ ಆಶ್ರಮವನ್ನು ತನ್ನ ಪವಿತ್ರವಾದ ನೀರಿನಿಂದ ಮುಳುಗಿಸಿದ ಕಾರಣ ಅವಳಿಗೆ "ಜಾಹ್ನವಿ" ಎಂದು ಹೆಸರು ಬಂದಿತು.
ಈ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ನಂತರ ಸಾಗರದಲ್ಲಿ ಪ್ರವಹಿಸಿ ಪಾತಾಳಕ್ಕೆ ಸೇರಿ ಸಗರು ರಾಜನ ಪುತ್ರರಿಗೆ ಮೋಕ್ಷವನ್ನು ನೀಡಿದಳು.
ಈ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ಸ್ವರ್ಗದಲ್ಲಿ "ಮಂದಾಕಿನಿ"ಯಾಗಿ, ಭೂಲೋಕದಲ್ಲಿ "ಗಂಗೆ"ಯಾಗಿ, ಪಾತಾಳದಲ್ಲಿ "ಭೊಗವತಿ"ಯಾಗಿ ಮೂರು ಲೋಕಗಳಲ್ಲಿಯೂ ಪ್ರವಿಹಿಸಿದ ಗಂಗೆಯನ್ನು "ತ್ರಿಪಥಗ" ಎಂದೂ ಸಹ ಕರೆಯುತ್ತಾರೆ.
ಈ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ಹಿಮಾಲಯದಲ್ಲಿನ ಕೈಲಾಸ ಪರ್ವತದ ಮೇಲೆ ಪರಮಶಿವನು ನೆಲೆಸಿದ್ದಾನೆ ಎಂಬುದನ್ನು ನಾವು ಸಾಮಾನ್ಯವಾಗಿ ಕೇಳಿದ್ದೇವೆ.
ಈ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ಈ ಹಿಮಾಲಯ ಪರ್ವತವು ಹಿಂದೂಗಳಿಗೇ ಅಲ್ಲದೇ ಬೌದ್ಧರಿಗೆ, ಜೈನರಿಗೂ ಕೂಡ ಪವಿತ್ರವಾದ ಪ್ರದೇಶವಾಗಿದೆ.
ಈ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ಕೈಲಾಸ ಪರ್ವತದ ಮೇಲೆ ಸ್ವರ್ಗಕ್ಕೆ ದಾರಿ ಇದೆ ಎಂದು ಹಿಂದೂ ಧರ್ಮದವರು ಹಾಗು ಬೌದ್ಧ ಧರ್ಮದವರು ನಂಬುತ್ತಾರೆ.
ಈ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ಈ ಪರ್ವತದ ಮೇಲೆ ತೆರಳಿದರೆ ದೇವತೆಗಳು ಶಪಿಸುತ್ತಾರೆ ಎಂಬ ನಂಬಿಕೆಯಿಂದ ಇಂದಿಗೂ ಈ ಹಿಮಾಲಯ ಪರ್ವತದ ಮೇಲೆ ಯಾರು ಕೂಡ ಕಾಲು ಇಡುವುದಿಲ್ಲ.
ಈ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ಸುಮಾರು 20 ಸಾವಿರ ಅಡಿ ಎತ್ತರವಿರುವ ಈ ಪರ್ವತದ ಮೇಲೆ ಕಳೆದ 900 ವರ್ಷಗಳಿಂದ ಯಾರು ಕೂಡ ಏರುವುದಿಲ್ಲ.
ಈ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ಏರಲೇಬೇಕು ಎಂದು ಪ್ರಯತ್ನ ಮಾಡಿರುವ ಹಲವಾರು ಮಂದಿಗೆ ಎದುರಾದ ಅನುಭವಗಳನ್ನು ಕಂಡು ಅನುಭವಿಸಿ ಯಾರು ಕೂಡ ಕೈಲಾಸ ಪರ್ವತದ ಮೇಲೆ ಏರುವ ಸಾಹಸ ಮಾಡುವುದಿಲ್ಲ.
ಈ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ಈ ಪರ್ವತದ ಮೇಲೆ ಕೊನೆಯಾದಾಗಿ ತೆರಳಿದವರು ಟಿಬೆಟ್ ಮೂಲದ ಯೋಗಿ.
ಈ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
12 ನೇ ಶತಮಾನಕ್ಕೆ ಸೇರಿದ ಆತನು ಆನಂತರ ಬೌದ್ಧ ಮತವನ್ನು ಸ್ವೀಕಾರ ಮಾಡಿ ಸನ್ಯಾಸಿಯಾಗಿ ಮಾರ್ಪಾಟಾದನು. ಆ ನಂತರ ಕೈಲಾಸ ಪರ್ವತವನ್ನು ಯಾರು ಕೂಡ ಹತ್ತಿಲ್ಲ.
ಈ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ಏರಲೇಬೇಕು ಎಂದು ಹೋದವರು ಹಲವಾರು ಮಂದಿ ಮೃತಪಟ್ಟರಂತೆ. ಹಾಗಾಗಿಯೇ ಈ ಪರ್ವತವನ್ನು ಹತ್ತುವ ಸಾಹಸ ಯಾರು ಕೂಡ ಮಾಡುವುದಿಲ್ಲವಂತೆ.
ಈ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ಸಾಮಾನ್ಯವಾಗಿ ಹೇಳಬೇಕಾದರೆ ಈ ಪರ್ವತದ ಮೇಲೆ ತೆರಳಬೇಕಾದರೆ ತುಂಭ ಕಷ್ಟ. ಪ್ರಸ್ತುತ ಕೈಲಾಸ ಪರ್ವತದ ಮೇಲೆ ಹತ್ತುವುದಕ್ಕೆ ಚೀನಾ ಸರ್ಕಾರ ಯಾರಿಗೂ ಕೂಡ ಅನುಮತಿ ನೀಡುತ್ತಿಲ್ಲ.
ಈ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ಪರ್ವತವನ್ನು ಏರಲು ಅನುಮತಿಯನ್ನು ನೀಡಿದರೆ ಹಲವಾರು ಮಂದಿಯ ವಿಶ್ವಾಸಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣದಿಂದಾಗಿ ಚೀನಾ ಸರ್ಕಾರ ನಿಷೇಧಿಸಿದೆ. ಕೈಲಾಸ ಪರ್ವತದ ಸುತ್ತಲೂ ಚೀನಾ ಸೈನಿಕರು ಕಾವಲು ಕಾಯುತ್ತಾ ಇರುತ್ತಾರೆ.