ಶಂಕರ ರಾಮೇಶ್ವರರ್ ದೇವಾಲಯ ನಗರದ ಹಳೆಯ ಬಸ್ ನಿಲ್ದಾಣದ ಹತ್ತಿರದಲ್ಲಿದೆ. ಪುರಾಣ ಕಥೆಗಳ ಪ್ರಕಾರ, ಶಿವ ಮತ್ತು ಆತನ ಧರ್ಮ ಪತ್ನಿ ಪಾರ್ವತಿ ತಿರುಚೆಂಡುರಿಗೆ ಪ್ರಯಾಣಿಸುವ ಸಂದರ್ಭದಲ್ಲಿ ವಂಚ ಪುಷ್ಕರಣಿ ಬಳಿ ತಂಗಿದ್ದರು ಎಂದು ಹೇಳಲಾಗುತ್ತದೆ. ಅವರು ಇಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಂದರ್ಭದಲ್ಲಿ ಭಗವಾನ್ ಶಿವನು ಪಾರ್ವತಿಗೆ ಪ್ರಣವ ಮಂತ್ರದ ಮಹಾನ್ ರಹಸ್ಯಗಳನ್ನು ವಿವರಿಸಿದನು. ಇದರಿಂದಾಗಿ ಈ ನಗರಕ್ಕೆ ತಿರುಮಂತ್ರ ನಗರ ಎಂದು ಹೆಸರಿಸಲಾಗಿದ್ದು ಆನಂತರದಲ್ಲಿ ಇದರ ಹೆಸರು ತೂತುಕುಡಿ ಎಂದೇ ಚಿರಪರಿಚಿತವಾಯಿತು. ಇಲ್ಲಿನ ದೇವಾಲಯವನ್ನು ಶಿವಪಾರ್ವತಿಯರು ವಿಶ್ರಾಂತಿ ಪಡೆದ ಸ್ಥಳದಲ್ಲಿಯೇ ನಿರ್ಮಾಣ ಮಾಡಲಾಗಿದೆ.