ಶ್ರೀ ಆದಿಕೇಶವ ಪೆರುಮಾಳ್ ದೇವಸ್ತಾನವು ತಿರುವತ್ತೂರಿನಲ್ಲಿದ್ದು ಇದು 108 ದಿವ್ಯದೇಶಂ ಗಳಲ್ಲಿ ಒಂದಾಗಿದೆ. ಆದ್ದರಿಂದ ಕೆಲವು ಯಾತ್ರಿಕರು ನಿಯಮಿತವಾಗಿ ಇಲ್ಲಿಗೆ ಬರುತಾರೆ. ಈ ದೇವಸ್ತಾನದ ಸುತ್ತಲೂ ಕೋತಾಲ್, ಪಹ್ ರೇಲಿ ಮತ್ತು ತಾಮೀರಭರಣಿ ನದಿಗಳು ಮೂರುಕಡೆಯಿಂದ ಸುತ್ತುವರಿದು ಈ ಸ್ಥಳವನ್ನು ನಯನಮನೋಹರವಾಗಿ ಮಾಡಿವೆ. ಇಲ್ಲಿನ ಮೂಲ ದೇವರುಗಳು ಶಿವ ಮತ್ತು ಆದಿಕೇಶವ ಪೆರುಮಾಳ್.
ಇಲ್ಲಿನ ಐತಿಹ್ಯದ ಪ್ರಕಾರ ಆದಿಕೇಶವ ಸ್ವಾಮೀಯು ಕೇಶಿಯೆಂಬ ರಾಕ್ಷಸನನ್ನು ಭಯಂಕರ ಯುದ್ಧದಲ್ಲಿ ಕೊಂದನು. ಈ ರಾಕ್ಷಸನ ಹೆಂಡತಿಯು ಆದಿಕೇಶವ ಸ್ವಾಮೀಯನ್ನು ನಾಶಪಡಿಸಲು ಗಂಗಾ ಹಾಗು ತಾಮಿರಭರಣಿಯನ್ನು ಪ್ರಾರ್ಥಿಸುತ್ತಾಳೆ ಆದರೂ ಸ್ವಾಮೀಯನ್ನು ಸೋಲಿಸಲು ಸಾಧ್ಯವಾಗಲಿಲ್ಲ.
ವಿಶಾಲವಾದ ಅಂಗಳ, ಸ್ಥಂಭಗಳು, ಹಾಗೂ ಮರದಿಂದ ನಿರ್ಮಾಣವಾದ ತಾರಸಿಗಳು ಕೇರಳದ ಶೈಲಿಯ ವಾಸ್ತುವನ್ನು ಈ ದೇವಾಲಯ ನೆನಪಿಸುತ್ತದೆ. ಮರದ ಕೆತ್ತನೆಯನ್ನು ಸುಂದರವಾಗಿ ಮಾಡಲಾಗಿದೆ ಹಾಗೂ ಇದರಲ್ಲಿ ಹಿಂದೂ ದೇವತೆಗಳನ್ನು ಸುಂದರವಾಗಿ ಕೆತ್ತಲಾಗಿದೆ. ಹಿಂದೂ ಮಹಾಕಾವ್ಯಗಳಲ್ಲಿನ ಪ್ರಸಿದ್ದ ದೃಶ್ಯಗಳನ್ನು ಕಂಬಗಳಲ್ಲಿ ಹಾಗು ತಾರಸಿಯಲ್ಲಿ ಸುಂದರವಾಗಿ ಮೂಡಿಸಲಾಗಿದೆ.