ಅಗಸ್ತ್ಯ ಮಾಲಾ ಶಿಖರವನ್ನು ಅಗಸ್ರ್ಯಾಕೂಡಮ್ ಎಂದು ಕೂಡ ಕರೆಯಲಾಗುತ್ತಿದೆ. ಇದು 1,868 ಮೀ ಎತ್ತರದಲ್ಲಿದೆ. ಇದು ತಿರುವಂತಪುರಂ ನಗರದಲ್ಲಿರುವ ಅತ್ಯಂತ ಎತ್ತರದ ಶಿಖರವಾಗಿದೆ. ತಾಮಿರಬರಣಿ ನದಿಯು ಇಲ್ಲಿ ಹಟ್ಟುತ್ತದೆ. ಇದೇ ರೀತಿ ಕರಮಣ ಮತ್ತು ನೆಯ್ಯರ್ ಇದು ಹಿಂದೂಗಳಿಗೆ ಪವಿತ್ರವಾದ ಸ್ಥಳವಾಗಿದೆ. ಈ ಶಿಖರದ ತುದಿಯಲ್ಲಿ ಅಗಸ್ತ್ಯ ಮಹರ್ಷಿಯ ಮೂರ್ತಿಯನ್ನು ಕಾಣಬಹುದು.
ಈ ಅಗಸ್ತ್ಯ ಮಾಲಾ ಶಿಖರಕ್ಕೆ ನಡೆದುಕೊಂಡು ಹೊಗಬೇಕು. ಇಲ್ಲಿಗೆ ಹೋಗುವ ಮುಂಚೆ ಅರಣ್ಯ ಇಲಾಖೆಯವರನ್ನು ಅನು ಸಂಧಾನ ಮಾಡಬೇಕಾಗುತ್ತದೆ. ಇಲ್ಲಿಗೆ ಟ್ರಕ್ಕಿಂಗ್ ಹೋಗಲು ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಹೋಗಲು ಮಾತ್ರ ಅನುಮತಿ ನೀಡಲಾಗುತ್ತದೆ. ಉಳಿದ ಸಮಯದಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ನಿರ್ಬಂಧಗಳನ್ನು ಹಾಕಲಾಗಿದೆ.
ಭಕ್ತಾದಿಗಳು ಕೂಡ ಈ ಸ್ಥಳಕ್ಕೆ ಬರಲು ಕೇರಳ ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ. ಈ ಶಿಖರಕ್ಕೆ ಹೋಗುವ ದಾರಿಯಲ್ಲಿ ಗಿಡಮೂಲಿಕೆಗಳು ಮತ್ತು ಅನೇಕ ಔಷಧೀಯ ಗಿಡಗಳು , ದೊರೆಯುತ್ತವೆ. ಅಲ್ಲದೇ ಅನೇಕ ಪ್ರಾಣಿಗಳ ನೆಲೆವೀಡಾಗಿದೆ. ಆದ್ದರಿಂದ ಇಲ್ಲಿ ಸಂಶೋಧನಾ ಆಸಕ್ತರು , ವಿದ್ಯಾರ್ಥಿಗಳು ಹೆಚ್ಚಾಗಿ ಭೇಟಿ ನೀಡುತ್ತಾರೆ.
ಇಷ್ಟೊಂದು ವಿಶೇಷತೆಗಳನ್ನು ಹೊತ್ತು ನಿಂತ ತಿರುವನಂತಪುರಂ ಗೆ ಹೋಗಲು ಪ್ರವಾಸಿಗರು ಯಾವುದೆ ನಗರಗಳಿಂದ ಬರುವುದಾದರೂ ವಾಹನ ಸೌಕರ್ಯಗಳಿವೆ. ದೇಶದ ಪ್ರಮುಖ ಪಟ್ಟಣ ಅಥವಾ ವಿದೇಶಗಳಿಂದ ಬರುವವರಿಗೆ ನೇರೆವಾದ ವಿಮಾನ ಸೌಲಭ್ಯಗಳಿವೆ. ತಿರುವನಂತಪುರಂ ಗೆ ಪ್ರವಾಸಿಗರು ಬರಲು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.