ಮವೂತು ತೇಣಿಯಿಂದ 35 ಕಿಮೀ ಮತ್ತು ಅನಿಪಟ್ಟಿಯಿಂದ 20 ಕಿಮೀ ದೂರದಲ್ಲಿದೆ. ಈ ಸ್ಥಳವು ವರ್ಷನಾಡು ಬೆಟ್ಟದ ಮೇಲಿರುವ ವೇಲಪ್ಪಾರ್ ದೇವಾಲಯದಿಂದ ಪ್ರಸಿದ್ಧವಾಗಿದೆ. ಇಲ್ಲಿ ಸಪ್ತಕನ್ನಿಕೆಯರ ವಿಗ್ರಹಗಳಿವೆ. ಈ ದೇವಾಲಯವನ್ನು ಕಂಡಮಾನೂರ್ ಜಮೀನ್ದಾರ್ ಕಟ್ಟಿಸಿದನು. ಇಲ್ಲೊಂದು ನೈಸರ್ಗಿಕ ಚಿಲುಮೆಯಿದೆ. ಇದರ ನೀರಿಗೆ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ ಎಂಬ ನಂಬಿಕೆಯಿದೆ.
ಮವೂತು ಎಂದರೆ ತಮಿಳಿನಲ್ಲಿ ‘ಮಾವಿನ ತೋಪಿನ ಚಿಲುಮೆ’ ಎಂದರ್ಥ. ಈ ಜಾಗದಲ್ಲಿ ಅತ್ಯಧಿಕ ಮಳೆಯಾಗುತ್ತದೆ. ಈ ನೀರು ಅಲ್ಲಿರುವ ಮಾವಿನ ಮರಗಳ ತೋಪುಗಳಲ್ಲಿ ಶೇಖರಣೆಯಾಗುತ್ತದೆ. ಆದ್ದರಿಂದಲೇ ಈ ಸ್ಥಳಕ್ಕೆ ಈ ಹೆಸರು ಬಂದಿದೆ. ಮವೂತು ಪಶ್ಚಿಮ ಘಟ್ಟಗಳಲ್ಲಿರುವ ನೈಸರ್ಗಿಕ ಸಂಪತ್ತಿನಿಂದ ಕಂಗೊಳಿಸುತ್ತಿರುವ ಸುಂದರ ಪ್ರದೇಶ.