ತೇಣಿಯಿಂದ 27 ಕಿ.ಮೀ ದೂರದಲ್ಲಿರುವ ಸಣ್ಣ ಹಳ್ಳಿಯಾದ ದೇವದಾನಪಟ್ಟಿಯಲ್ಲಿ ಕಾಮಾಕ್ಷಿ ಅಮ್ಮನವರ ದೇವಾಲಯವಿದೆ. ಇದು ಮಂಜಲ್ ನದಿ ದಂಡೆಯಲ್ಲಿದೆ. ಇದರ ವಿಶೇಷತೆಯೆಂದರೆ ದೇವಾಲಯದ ಮುಖ್ಯ ದೇವತೆಯಿರುವ ಸರ್ಭ ಸ್ಥಳದ ದ್ವಾರವು ಯಾವಾಗಲೂ ಮುಚ್ಚಿರುತ್ತದೆ ಹಾಗು ಪೂಜೆಯನ್ನು ದ್ವಾರದ ಮುಂದೆಯೆ ಮಾಡುತ್ತಾರೆ. ಮಹಾಶಿವರಾತ್ರಿಯ ಸಮಯದಲ್ಲಿ ಇಲ್ಲಿ ಉತ್ಸವ ನಡೆಯುತ್ತದೆ. ಆ ಸಮಯದಲ್ಲಿ ಭಕ್ತರು ಇಲ್ಲಿಗೆ ಬಂದು ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.