ಕೊಡಗಿನ ರಾಜ ದೊಡ್ಡ ರಾಜಾ ವೀರೇಂದ್ರರು 1792ರಿಂದ 1794ರ ನಡುವೆ ನಲಕ್ನಾಡು ಅರಮನೆಯನ್ನು ಕಟ್ಟಿಸಿದರು. ಕರ್ನಾಟಕದ ಕೊಡಗು ಜಿಲ್ಲೆಯ ಯವಕಪಾಡಿ ಗ್ರಾಮದ ಸನಿಹದಲ್ಲಿ ತಡಿಯಾಂಡಮೋಲ್ ಶಿಖರದ ಪಾದತಲದಲ್ಲಿದೆ ಈ ಆರಮನೆ. ಬೇಟೆಯ ಬಿಡಾರವೆಂದು ಕಟ್ಟಿದ್ದ ಈ ಆರಮನೆಯನ್ನು ಕೊಡಗಿನ ಕೊನೆಯ ಚಿಕ್ಕವೀರ ರಾಜೇಂದ್ರರು ಸುರಕ್ಷಿತ ತಂಗುದಾಣವೆಂದು ಪರಿಗಣಿಸಿದ್ದರು. ಈ ಚಾರಿತ್ರಿಕ ಮೈಲಿಗಲ್ಲು "ನಾಲ್ಕು ನಾಡುಅರಮನೆ" ಎಂದೂ ಪ್ರಸಿದ್ಧವಾಗಿದ್ದು , ನಾಲ್ಕು ಗ್ರಾಮಗಳ ಆರಮನೆ ಎಂಬುದು ಅದರ ಅರ್ಥ. ಹುಲ್ಲುಹಾಸಿನ ಎರಡು ಅಂತಸ್ತಿನ ಈ ಕಟ್ಟಡ ಅಪಾರ ಚಾರಿತ್ರಿಕ ಸಂಪತ್ತಿನ ಆಗರವಾಗಿದೆ. ಈ ಅರಮನೆಯ ಗೋಡೆಗಳು ಮತ್ತು ಎಲ್ಲಾ 12 ಕಂಬಗಳು ಸುಂದರವಾದ ಕೆತ್ತನೆಯಿಂದ ಅಲಂಕರಿಸಲ್ಪಟ್ಟಿವೆ. ಚಾರಣಪ್ರಿಯರು ಈ ಅರಮನೆಯನ್ನು ತಂಗುದಾಣವಾಗಿ ಉಪಯೋಗಿಸಬಹುದಾಗಿದೆ.ಕರ್ನಾಟಕ ರಾಜ್ಯ ಸರ್ಕಾರದ ಪುರಾತತ್ವ ಮತ್ತು ವಸ್ತುಸಂಗ್ರಾಲಯಗಳ ನಿರ್ದೇಶನಾಲಯವು ಇದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ.ತಡಿಯಾಂಡಮೋಲ್ಗೆ ಭೇಟಿ ನೀಡುವ ಪ್ರವಾಸಿಗರು ಸಮಯಾವಕಾಶವಿದ್ದಲ್ಲಿ ಇಲ್ಲಿಗೆ ತಪ್ಪದೇ ಭೇಟಿ ನೀಡಿರಿ.