ಕೊಡಗು ಜಿಲ್ಲೆಯ ವಿರಾಜಪೇಟೆ , ಸ್ಥಳೀಯವಾಗಿ ಬೆಳೆವ ಕಾಫಿ ಹಾಗೂ ಸಾಂಬಾರ ಪದಾರ್ಥಗಳಿಗೆ ಪ್ರಖ್ಯಾತವಾಗಿದೆ. ಹಿಂದೂಗಳ ದೇವರಾದ ಶಿವನಿಗೆ ಅರ್ಪಿತವಾದ ಶ್ರೀ ಅಯ್ಯಪ್ಪ ದೇಗುಲ ಈ ಪಟ್ಟಣದ ಪ್ರಮುಖ ಆಕರ್ಷಣೆ. ಹಿಂದೂಗಳ ಪವಿತ್ರಸ್ಥಳವೆಂದು ಪರಿಗಣಿಸಲ್ಪಡುವ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ವರ್ಷಪೂರ್ತಿ ಭೇಟಿ ನೀಡುತ್ತಾರೆ.ಮಲೆತ್ರಿಕೆರೆ ಬೆಟ್ಟದ ಮೇಲಿರುವ ಈ ದೇಗುಲ ಪಟ್ಟಣದ ವಿಹಂಗಮ ನೋಟವನ್ನೊದಗಿಸುತ್ತದೆ.ವಿರಾಜಪೇಟೆಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿಂದ 8 ಕಿಲೋಮೀಟರ್ ದೂರದಲ್ಲಿರುವ ಅರ್ಧ ಗೋಳಾಕಾರದ ಕಕೋಟುಪುರಂಟು ಬೆಟ್ಟವನ್ನು ವೀಕ್ಷಿಸಬಹುದು. ಸಂತ ಆನ್ರ ಚರ್ಚ್ ಇಲ್ಲಿನ ಮತ್ತೊಂದು ಪ್ರಮುಖ ಪ್ರವಾಸಿ ಆಕರ್ಷಣೆ. ಗಾಥಿಕ್ ಶಿಲ್ಪಶೈಲಿಯ ಈ ಚರ್ಚ್ 200 ವರ್ಷಗಳ ಹಿಂದೆ ಪಾದ್ರಿ ಗಲಿವಾನ್ರ ಮಾರ್ಗದರ್ಶನದಲ್ಲಿ ಕಟ್ಟಲ್ಪಟ್ಟಿದೆ. ನಗರದ ಮಧ್ಯಭಾಗದಲ್ಲಿರುವ ಗಡಿಯಾರ ಗೋಪುರವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸನಿಹದಲ್ಲೇ ಇರುವ ಗಣೇಶನ ಗುಡಿ ಮತ್ತೊಂದು ಜನಪ್ರಿಯ ಪ್ರವಾಸಿ ಆಕರ್ಷಣೆ. ತಡಿಯಾಂಡಮೋಲ್ಗೆ ಬರುವ ಎಲ್ಲಾ ಪ್ರವಾಸಿಗರು ತಪ್ಪದೇ ಭೇಟಿ ನೀಡಿರಿ.