ಕಾಶಿ ವಿಶ್ವನಾಥ ಸ್ವಾಮಿ ತಮಿಳುನಾಡಿನ ಒಂದು ಪ್ರಮುಖ ದೇವಾಲಯವಾಗಿದೆ. ದಕ್ಷಿಣ ಮಧುರೈ ನ ರಾಜ ಹರಿಕೇಸರಿ ಪರಕ್ಕಿರಮ್ ಪಾಂಡ್ಯನ್ ಕಾಶಿಯಿಂದ ಒಂದು ಶಿವಲಿಂಗವನ್ನು ತಂದು ತನ್ನ ರಾಜ್ಯದಲ್ಲಿ ಪ್ರತಿಷ್ಠಾಪಿಸಿದನು. ಹೀಗೆ ಈ ಸ್ಥಳಕ್ಕೆ ಆ ಹೆಸರು ಬಂದಿತು. 15 ಮತ್ತು 16 ನೆಯ ಶತಮಾನದಲ್ಲಿ ಪಾಂಡ್ಯ ರಾಜ ಹಾಗೂ ತಿರುಮಲೈನಾಯ್ಕರ್ ಈ ಶಿವ ದೇವಾಲಯವನ್ನು ಮತ್ತಷ್ಟು ವಿಸ್ತರಿಸಿದರು ಹಾಗೂ ಕಾಶಿ ವಿಶ್ವನಾಥ ಸ್ವಾಮಿ ದೇವಾಲಯ ಎಂದು ಕರೆದಿದ್ದರು. ಇದಾದ ನಂತರವೂ ಇದನ್ನು ಹಲವು ಬಾರಿ ನವೀಕರಣ ಮಾಡಲಾಗಿದೆ. ಮೊದಲ ಸಲ ಆನೈಪ್ಪ ಗಾನಿ ಇದನ್ನು ಪುನರ್ ನಿರ್ಮಿಸಿದನು. ನಾಯ್ಕರ್ ಗಳು 1659 ರಲ್ಲಿ ಈ ದೇವಾಲಯವನ್ನು ಪುನರ್ ನವೀಕರಣ ಮಾಡಿದರು. ಮುತ್ತು ವೀರಪ್ಪ ನಾಯ್ಕರ್ ಈ ದೇವಾಲಯಕ್ಕೆ ರಥವನ್ನು ನೀಡಿದನು. ಇದನ್ನು ಈಗಲೂ ಉತ್ಸವದ ಸಮಯದಲ್ಲಿ ಬಳಸಲಾಗುತ್ತದೆ.