ಭುವನ್ ಮಹಾದೇವ್ ದೇವಾಲಯ ಇರುವ ಭುವನ್ ಬೆಟ್ಟದಿಂದ 5 ಕಿ.ಮೀ ದೂರದಲ್ಲಿ ಮನಿಹರನ್ ಸುರಂಗ ಇದೆ. ಇದನ್ನು ಹಿಂದೂಗಳ ಮಹಾಕಾವ್ಯ ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿನ ಜನಗಳು ನಂಬುವ ಪ್ರಕಾರ ಇದನ್ನು ಶ್ರೀ ಕೃಷ್ಣ ಬಳಸಿದ್ದನು. ಪವಿತ್ರವಾದ ತ್ರಿವೇಣಿ ನದಿ ಈ ಸುರಂಗದ ಕೆಳಭಾಗದಲ್ಲಿ ಹರಿಯುತ್ತದೆ.
ಸುರಂಗದ ಸಮೀಪದಲ್ಲಿ ಒಂದು ಶ್ರೀ ಕೃಷ್ಣನ ದೇವಾಲಯವಿದೆ. ಇಲ್ಲಿ ದೇಶ ವಿದೇಶಗಳ ಪ್ರವಾಸಿಗಳು ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ ಸಿಲ್ಚರ್ ಪ್ರವಾಸದಲ್ಲಿ ತಪ್ಪದೆ ಭೇಟಿ ನೀಡಬೇಕಾದ ಸ್ಥಳವಾಗಿದೆ. ಪ್ರತಿ ವರ್ಷ ನಡೆಸುವ ಹೋಲಿ ಮತ್ತು ಶಿವರಾತ್ರಿ ಹಬ್ಬಗಳು ಈ ಸುರಂಗದ ಆಸುಪಾಸಿನ ಸ್ಥಳಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸುತ್ತದೆ.


Click it and Unblock the Notifications