ಗಾಂಧಿಬಾಗ್ ಉದ್ಯಾನಕ್ಕೆ ಈ ಹೆಸರನ್ನು ಮಹಾತ್ಮಾ ಗಾಂಧಿಯಿಂದಾಗಿ ಇಡಲಾಗಿದೆ. ಇದು ಸಿಲ್ಚರ್ ನ ಮಧ್ಯಭಾಗದಲ್ಲಿ ಇದೆ. ಅಭಿವೃದ್ಧಿ ಹೊಂದುತ್ತಿರುವ ನಗರದ ಮಧ್ಯಭಾಗದಲ್ಲಿ ಇದೊಂದು ಪೂರ್ಣ ಹಸಿರಾದ ಉದ್ಯಾನವಾಗಿ ಎಲ್ಲರ ಗಮನ ಸೆಳೆಯುತ್ತದೆ. ಇಲ್ಲಿನ ಅತ್ಯಂತ ಪ್ರಸಿದ್ಧ ಮತ್ತು ಪ್ರಮುಖವಾದ ಮೇಳ ಎಂದರೆ ವರ್ಷಕ್ಕೊಮ್ಮೆ ನಡೆಯುವ ಗಾಂಧಿ ಮೇಳ. ಈ ಅವಧಿಯಲ್ಲಿ ಕರಕುಶಲ ಕಲೆಗಳು ಮತ್ತು ಖಾದಿ ಬಟ್ಟೆಗಳ ಪ್ರದರ್ಷನ ಮತ್ತು ಮಾರಾಟ ಇರುತ್ತದೆ. ಜನವರಿ ತಿಂಗಳಲ್ಲಿ ಈ ಮೇಳವನ್ನು ಆಯೋಜಿಸಲಾಗುತ್ತದೆ.
ಉದ್ಯಾನದ ಒಂದು ಭಾಗದಲ್ಲಿ ಈ ಹುತಾತ್ಮರ ಸಮಾಧಿ ಇದೆ. ಇದನ್ನು ಫೆಬ್ರವರಿ 21, 1961 ರಲ್ಲಿ ಪೋಲೀಸರ ಗುಂಡಿಗೆ ಬಲಿಯಾದ 11 ಹುತಾತ್ಮರ ನೆನಪಿಗೆ ಕಟ್ಟಲಾಗಿದೆ. ಬರಾಕ್ ಕಣಿವೆಯಲ್ಲಿ ಬಂಗಾಲಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು ತಿಳಿದ ನಂತರವೂ ಇಡಿ ರಾಜ್ಯದಲ್ಲಿ ಅಸ್ಸಾಮಿಯನ್ನು ಕಡ್ಡಾಯ ಮಾಡಲು ಹೊರಟ ರಾಜ್ಯ ಸರ್ಕಾರದ ವಿರುದ್ಧ ಹೋರಾಡಿದ ಜನರನ್ನು ಇಲ್ಲಿಗೆ ಗುಂಡಿಗೆ ಬಲಿ ಮಾಡಲಾಗಿತ್ತು.