ಅರ್ಧಗೋಳಾಕೃತಿಯನ್ನು ಹೊಂದಿರುವ ಈ ಪವಿತ್ರ ಜಲಕೊಳವನ್ನು 'ತೀರ್ಥರಾಜ' ವೆಂದೂ ಕರೆಯಲಾಗುತ್ತದೆ. ಹಿಂದು ಪುರಾಣದ ಪ್ರಕಾರ, ಬ್ರಹ್ಮದೇವನು ವಜ್ರನಾಭನೆಂಬ ಅಸುರನನ್ನು ಸಂಹರಿಸಲು ಉಪಯೋಗಿಸಿದ ಕಮಲದ ಹೂವಿನ ಒಂದು ಪಕುಳಿಯಿಂದ ಈ ಸರೋವರವು ಉತ್ಪತ್ತಿಯಾಗಿದೆ. ಈ ಸರೋವರವು ಸುಮಾರು 10 ಮೀ ಆಳವನ್ನು ಹೊಂದಿದೆ. ಈ ಸರೋವರದ ಸುತ್ತಮುತ್ತ 300 ಕ್ಕೂ ಅಧಿಕ ದೇವಸ್ಥಾನಗಳು ಮತ್ತು 52 ಘಾಟ್ ಗಳಿದ್ದು ಭಕ್ತಾದಿಗಳು ಸಾಲುಸಾಲಾಗಿ ಈ ಸರೋವರದ ಪವಿತ್ರ ಸ್ನಾನವನ್ನು ಮಾಡುತ್ತಾರೆ. ಈ ಸರೋವರದ ಪವಿತ್ರ ಸ್ನಾನವು ಮೋಕ್ಷವನ್ನು ಕೊಡುತ್ತದೆ ಎಂಬುದು ಜನರ ನಂಬಿಕೆಯಾಗಿದೆ. ಅಷ್ಟೆ ಅಲ್ಲ, ಪಾಪ ವಿನಾಶ, ರೋಗಗಳ ನಾಶ ಹಾಗು ವಿವಿಧ ಬಗೆಯ ಚರ್ಮರೋಗಗಳಿಗೆ, ಈ ಸೀರು ರಾಮಬಾಣವಾಗಿದೆ ಎಂದು ನಂಬಲಾಗಿದೆ.