ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದಕ್ಕಾಗಿ ಆಗಾ ಖಾನ್ ಅರಮನೆಯು ಪ್ರಮುಖವಾದದ್ದೆನಿಸಿದೆ. ಇದು ಸುಲ್ತಾನ್ ಮಹಮ್ಮದ್ ಶಾಹ್, ಮುರನೇ ಆಗಾ ಖಾನ್ರಿಂದ ನಿರ್ಮಿಸಲ್ಪಟ್ಟಿತು. ಈ ಪ್ರದೇಶವು ಪುಣೆ ಜಿಲ್ಲೆಯಲ್ಲಿದೆ.
ಬ್ರಿಟಿಷರ ಆಡಳಿತದಲ್ಲಿ ಬ್ರಿಟಿಷರು ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಇಲ್ಲಿ ಬಂಧಿಗಳನ್ನಾಗಿರಿಸಿದ್ದರು. 1942ರ ಕ್ವಿಟ್ ಇಂಡಿಯಾ ಚಳುವಳಿಯ ನಂತರದಲ್ಲಿ ಮಹಾತ್ಮಾ ಗಾಂಧೀಜಿ ತಮ್ಮ ಪತ್ನಿ ಕಸ್ತೂರಬಾರ ಜೊತೆಗೆ ಇದೇ ಅರಮನೆಯಲ್ಲಿ ಕೈದಿಯಾಗಿದ್ದರು.
ಈ ಅರಮನೆಯು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ನೆನಪಿನ ಖಣಿಯಾಗಿದೆ. ನಮಗೆ ಈ ಅರಮನೆಯು ಹೆಮ್ಮೆಯ ಸಂಕೇತವಾಗಿದೆ. ಈ ಅರಮನೆಯ ಪಕ್ಕದಲ್ಲೇ ಹರಿಯುವ ಮುಲಾ ನದಿಯನ್ನು ಇಲ್ಲಿಂದ ನೋಡಬಹುದು.