ಪಾಂಡ್ಯ ವಂಶದ ರಾಜಾ ಮರವರ್ಮ ಕುಲಶೇಖರ ಪಾಂಡಿಯನ್ ಅವರು ಕ್ರಿ.ಶ 1305 ರಲ್ಲಿ ಮಸಿಳಮಣಿ ನಾಥರ್ ಕೋವಿಲ್ ಅನ್ನು ನಿರ್ಮಿಸಿದರು. ಇದು ಆಗಿನ ಕಾಲದ ವಾಸ್ತುಕಲೆಯನ್ನು ತೋರಿಸುತ್ತದೆ. ಪೂಂಪುಗಾರ್ ಗೆ ಭೇಟಿ ನೀಡಿದವರು ಈ ಜಾಗವನ್ನು ನೋಡಲೇಬೇಕು. ಈ ದೇವಸ್ಥಾನದ ವಾಸ್ತುಕಲೆಯು ಹಳೆಯ ಕಾಲದಲ್ಲಿ ರೂಢಿಯಲ್ಲಿದ್ದ ಸಂಪ್ರದಾಯದ ಪ್ರತೀತವಾಗಿದೆ.
ಇಂದು, ಕಾಲದ ಸುಳಿಯಲ್ಲಿ ಉಂಟಾದ ಕಡಲ್ಕೊರೆತಕ್ಕೆ ಸಿಕ್ಕಿ ದೇವಸ್ಥಾನದ ಮುಂದಿನ ಭಾಗ ಹಾನಿಗೊಳಗಾಗಿದೆ. ಈ ದೇವಸ್ಥಾನದ ಸ್ಥಿತಿ ತುಂಬಾ ಕೆಟ್ಟಿರುವುದರಿಂದ ಇಲ್ಲಿ ಈಗ ಯಾವುದೇ ಧಾರ್ಮಿಕ ಕಾರ್ಯ ನಡೆಯುವುದಿಲ್ಲ. ಆದರೂ ಕೂಡ ಇಂದು ಇದೊಂದು ಪ್ರಖ್ಯಾತ ಯಾತ್ರಾಸ್ಥಳವಾಗಿದೆ. ಈ ಸ್ಥಳ ಪೂಂಪುಗಾರ್ ನ ವ್ಯಾವಹಾರಿಕ ಕೇಂದ್ರದ ಸಮೀಪದಲ್ಲೇ ಇರುವುದರಿಂದ ಇಲ್ಲಿಗೆ ತಲುಪುವುದು ತುಂಬಾ ಸುಲಭ.