ಒಟ್ಟಪಲಂ ಪಾಲಕ್ಕಾಡ್ ಜಿಲ್ಲೆಯಲ್ಲಿರುವ ಒಂದು ಪ್ರಮುಖ ಪಟ್ಟಣವಾಗಿದೆ. ಇದು ಭರತಪುಳ ನದಿ ದಂಡೆಯಲ್ಲಿದೆ. ಈ ಪಟ್ಟಣವು ವಿಭಿನ್ನವಾದ ಸಂಸ್ಕೃತಿಗೆ ಮನೆಮಾತಾಗಿದ್ದು, ತನ್ನ ಪುರಾತನ ಪಾರಂಪರಿಕತೆಯಿಂದಾಗಿಯು ಪಾಲಕ್ಕಾಡ್ ಜಿಲ್ಲೆಯಲ್ಲಿಯೆ ತನ್ನ ಪ್ರತ್ಯೇಕತೆಯನ್ನು ಉಳಿಸಿಕೊಂಡಿದೆ.
ಒಟ್ಟಪಲಂ ಪಟ್ಟಣದಿಂದ 8 ಕಿ.ಮೀ ದೂರದಲ್ಲಿರುವ ಕಿಲ್ಲಿಕ್ಕುರುಸ್ಸಿಮಂಗಲಂ ಎಂಬ ಸ್ಥಳವು ಈ ಪ್ರಾಂತ್ಯದಲ್ಲಿಯೆ ಪ್ರಮುಖ ಆಕರ್ಷಣೆಯಾಗಿದೆ. ಕಿಲ್ಲಿಕ್ಕುರುಸ್ಸಿಮಂಗಲಂ ಕುಂಜನ್ ನಾಯರ್ ಎಂಬ ಕೇರಳದ ಅತ್ಯಂತ ಪ್ರಸಿದ್ಧ ಕವಿಯ ತವರೂರು. ಇವರ ಹೆಸರು ಒಟ್ಟಂತುಲ್ಲಲ್ ಎಂಬ ಅನುಪಮವಾದ ನೃತ್ಯ ಪ್ರಕಾರವನ್ನು ಸೃಷ್ಟಿಸಿದ್ದಕ್ಕಾಗಿ ಕೇರಳ ಸಾಹಿತ್ಯದಲ್ಲಿ ಪ್ರಮುಖವಾಗಿ ಸ್ಥಾನಪಡೆದಿದೆ.
ಪ್ರವಾಸಿಗರು ಒಟ್ಟಪಲಂಗೆ ಭೇಟಿಕೊಟ್ಟಾಗ ಚೆರುತುರುತಿಗೆ ಕೆಲ ಕಿ.ಮೀ ಗಳಷ್ಟು ದೂರದಲ್ಲಿರುವ ಕಲಾಮಂಡಲಂಗೆ (ವಿದ್ಯಾರ್ಥಿಗಳಿಗೆ ಪ್ರದರ್ಶನ ಕಲೆ ಮತ್ತು ಸಂಗೀತದ ಕುರಿತಾಗಿ ತರಬೇತಿ ಕೊಡುವ ಸ್ಥಳ) ಒಮ್ಮೆ ಭೇಟಿಕೊಡಬಹುದು. 1927 ರಲ್ಲಿ ನಿರ್ಮಾಣಗೊಂಡ ಕಲಾಮಂಡಲಂ ಕೇರಳದ ಸಾಂಪ್ರದಾಯಿಕ ನೃತ್ಯ ಪ್ರಕಾರಗಳಾದ ಕಥಕ್ಕಳಿ, ಭರತನಾಟ್ಯಂ, ಕೂಡಿಯಾಟ್ಟಂ ಮತ್ತು ಮೋಹಿನಿಯಾಟ್ಟಂಗಳನ್ನು ರಕ್ಷಿಸಿ, ಪೋಷಿಸುವ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ.
ಇದರ ಜೊತೆಗೆ ಒಟ್ಟಪಲನ್ ಚಿನಕತೂರ್ ಕಾವು ದೇವಾಲಯ ( ಚಿನಕತೂರ್ ಪೂರಂ ಉತ್ಸವಕ್ಕೆ ಖ್ಯಾತಿ ಪಡೆದಿದೆ) ಮತ್ತು ಪರಿಯನಂಪಟ್ಟ ದೇವಾಲಯ ( ವಲ್ಲುವನಾಧನ್ ಮೂಕಾಂಬಿಕಾ ಎಂದೆ ಜನಪ್ರಿಯತೆ ಪಡೆದಿದೆ).