ಪಹಲ್ಗಾಂನಲ್ಲಿನ ಸೂರ್ಯನ ದೇವಾಲಯವು ಕಾರ್ಕೋಟ ಮನೆತನದ ರಾಜ ಲಲಿತಾದಿತ್ಯ ಮುಕ್ತಪಿಡನಿಂದ ನಿರ್ಮಿಸಲ್ಪಟ್ಟಿತು. ನಂಬಿಕೆಗಳ ಪ್ರಕಾರ ಈ ದೇವಾಲಯಕ್ಕೆ ಬುನಾದಿಯನ್ನು ನಿಕಟಪೂರ್ವ ರಾಜ ರಾಣಾದಿತ್ಯ ಮುಕ್ತಪೀಡನು ಹಾಕಿ ಇದರ ನಿರ್ಮಾಣ ಕಾರ್ಯವನ್ನು ಆರಂಭಿಸಿದನಂತೆ. ಈ ದೇವಾಲಯವು ಶ್ರೀನಗರದಿಂದ 64 ಕಿ.ಮೀ ದೂರದಲ್ಲಿದ್ದು, ಅನಂತನಾಗ್ನಿಂದ 7.ಕಿ.ಮೀ ದೂರದಲ್ಲಿದೆ. ದಂತಕಥೆಗಳ ಪ್ರಕಾರ ಈ ದೇವಾಲಯವು ಮಹಾಭಾರತದ ಪಾಂಡವರ ಕಾಲದ್ದೆಂದು ಸಾರಲಾಗುತ್ತಿದೆ. ಸಮತಟ್ಟದ ಭೂಭಾಗದಲ್ಲಿ ನೆಲೆಗೊಂಡಿರುವ ಈ ದೇವಾಲಯವು ಪ್ರವಾಸಿಗರಿಗೆ ಮಟ್ಟನ್ ಪ್ರದೇಶದ ವಿಹಂಗಮ ನೋಟವನ್ನು ಒದಗಿಸುತ್ತದೆ. ಮಟ್ಟನ್ ಹಿಂದೂಗಳ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ.