Search
  • Follow NativePlanet
Share
» »ಗುಡ್‌ ನ್ಯೂಸ್: ಹಿಮಪಾತದ ನಂತರ ಓಂ ಪರ್ವತ ಮತ್ತೆ ಗೋಚರ, ನಿರಾಸೆಯ ನಡುವೆ ಭರವಸೆಯ ನಿರೀಕ್ಷೆ

ಗುಡ್‌ ನ್ಯೂಸ್: ಹಿಮಪಾತದ ನಂತರ ಓಂ ಪರ್ವತ ಮತ್ತೆ ಗೋಚರ, ನಿರಾಸೆಯ ನಡುವೆ ಭರವಸೆಯ ನಿರೀಕ್ಷೆ

ಉತ್ತರಾಖಂಡದ ಪಿಥೋರಗಢ್ ಜಿಲ್ಲೆಯಲ್ಲಿರುವ ಪವಿತ್ರ ಓಂ ಪರ್ವತದಲ್ಲಿ ಹಿಮದಿಂದ ಕೂಡಿದ ʼಓಂʼ ಮತ್ತೆ ಕಾಣಿಸಿಕೊಳ್ಳಲಾರಂಭಿಸಿದೆ. ಎರಡು ದಿನಗಳ ಹಿಂದೆಯಷ್ಟೇ, ಓಂ ಪರ್ವತದ ʼಓಂʼ ಮಾಯವಾಗಿದೆ ಮತ್ತು ಅದರ ಸ್ಥಳದಲ್ಲಿ ಕಪ್ಪು ಪರ್ವತ ಮಾತ್ರ ಗೋಚರಿಸುತ್ತದೆ ಎಂದು ಹೇಳಲಾದ ಫೋಟೋವೊಂದು ವೈರಲ್ ಆಗಿತ್ತು.

ಸ್ಪಷ್ಟವಾಗಿ ಗೋಚರಗೊಂಡ ʼಓಂʼ

ಆದರೀಗ ಕೆಲವು ನಿರಾಸೆಗಳ ನಡುವೆಯೇ ನೈಸರ್ಗಿಕ ಮಂಜುಗಡ್ಡೆಯಿಂದ ಕಂಗೊಳಿಸುತ್ತಿರುವ ʼಓಂʼ ಮತ್ತೆ ಓಂ ಪರ್ವತದಲ್ಲಿ ಗೋಚರಿಸಿದೆ ಎಂಬ ಭರವಸೆಯ ಸುದ್ದಿಯೊಂದು ಪ್ರವಾಸಿಗರು ಹಾಗೂ ಭಕ್ತರಲ್ಲಿ ನೆಮ್ಮದಿ ಮೂಡಿಸಿದೆ. ಇತ್ತೀಚಿನ ಹಿಮಪಾತದ ನಂತರ, ಓಂ ಪರ್ವತದ ಎತ್ತರವು ಮತ್ತೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹಿಮ ಕರಗಿದ ಕಾರಣ ಓಂ ಪರ್ವತದ ಓಂ ಮಾಯವಾಗಿದೆ ಎಂದು ಹೇಳಲಾಗಿತ್ತು. ಆದರೆ ಇತ್ತೀಚಿನ ಮಾಹಿತಿಯ ಪ್ರಕಾರ ಓಂ ಪರ್ವತವು ಮತ್ತೆ ಹಿಮಪಾತದಿಂದ ಆವೃತವಾಗಿದೆ ಮತ್ತು ಹಿಮದಿಂದ ರೂಪುಗೊಂಡ ಓಂ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕ್ಯಾಮೆರಾಗಳಲ್ಲಿ ಓಂ ಚಿಹ್ನೆ ಸೆರೆ

ಕುಮಾನ್ ಮಂಡಲ್ ಅಭಿವೃದ್ಧಿ ನಿಗಮದ ಸಾಹಸ ಪ್ರವಾಸೋದ್ಯಮ ವ್ಯವಸ್ಥಾಪಕ ದಿನೇಶ್ ಗುರುರಾಣಿ ಹೇಳುವ ಪ್ರಕಾರ, ಭಾನುವಾರ ರಾತ್ರಿ ಹಿಮಾಲಯದ ಎತ್ತರದ ಪ್ರದೇಶದಲ್ಲಿ ಹಿಮಪಾತದಿಂದಾಗಿ, ಓಂ ಪರ್ವತದ ಎತ್ತರವು ಮತ್ತೆ ಗೋಚರಿಸುತ್ತಿದೆ. ಇತ್ತೀಚಿನ ಹಿಮಪಾತದ ನಂತರ, ಪಾಲಿಕೆಯ ಕಾರ್ಯಕರ್ತರು ತಮ್ಮ ಕ್ಯಾಮೆರಾಗಳಲ್ಲಿ ಓಂ ಚಿಹ್ನೆಯನ್ನು ಸೆರೆಹಿಡಿದಿದ್ದಾರೆ ಎಂದು ಹೇಳಿದರು.

Good news om Parvat is visible again after snowfall

ಪ್ರವಾಸಿಗರಲ್ಲಿ ಭರವಸೆ ಮೂಡಿಸಿದ ಓಂ

ಹಿಮಪಾತದ ನಂತರ ಓಂ ಚಿಹ್ನೆಯನ್ನು ನೋಡಲೆಂದೇ ಬರುವ ಪ್ರವಾಸಿಗರು ಮತ್ತು ಶಿವ ಭಕ್ತರು ಈಗ ನಿರಾಶೆಗೊಳ್ಳುತ್ತಿಲ್ಲ. ಈ ಹಿಂದೆ, ಹಿಮ ಕರಗಿದ್ದರಿಂದ ಓಂ ಪರ್ವತದ ಜಾಗದಲ್ಲಿ ಕಪ್ಪು ಪರ್ವತ ಕಾಣಿಸಿಕೊಂಡಿದೆ ಎಂಬ ಫೋಟೋವೊಂದು ವೈರಲ್ ಆಗಿತ್ತು. ಈ ಫೋಟೋ ವೈರಲ್ ಆದ ನಂತರ, ಅನೇಕ ಪರಿಸರವಾದಿಗಳು ಮತ್ತು ಜನರು ಓಂ ಪರ್ವತ ಕಣ್ಮರೆಯಾದ ಬಗ್ಗೆ ಮತ್ತು ಎತ್ತರದ ಹಿಮಾಲಯ ಪ್ರದೇಶದ ಪರ್ವತಗಳಲ್ಲಿ ಹಿಮ ಕರಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಓಂ ಪರ್ವತಕ್ಕೆ ಭೇಟಿ ನೀಡುತ್ತಿದ್ದ ಶಿವಭಕ್ತರು ಹಾಗೂ ಪ್ರವಾಸಿಗರಲ್ಲಿ ಗೊಂದಲ ಉಂಟಾಗಿತ್ತು. ಆದರೆ ಇದೀಗ ಮತ್ತೆ ಓಂ ಪರ್ವತ ದರ್ಶನವಾಗಿದ್ದು ಭಕ್ತರಲ್ಲಿ ಹಾಗೂ ಪ್ರವಾಸಿಗರಲ್ಲಿ ಭರವಸೆ ಮೂಡಿಸಿದೆ.

ಹೆಲಿಕಾಪ್ಟರ್ ಸೇವೆಯೂ ಆರಂಭ

ಪೌರಾಣಿಕ ನಂಬಿಕೆಗಳ ಪ್ರಕಾರ, ಆದಿ ಕೈಲಾಸವು ಭಗವಾನ್ ಶಿವನ ಸ್ಥಳವಾಗಿದೆ. ಈ ಸ್ಥಳಕ್ಕೆ ಸಾಕಷ್ಟು ಮನ್ನಣೆ ಇದೆ. ಹೀಗಿರುವಾಗ ಸಮೀಪದಲ್ಲಿರುವ ಓಂ ಪರ್ವತದ ಮೇಲೆ ಓಂ ಸ್ವಾಭಾವಿಕವಾಗಿ ರೂಪುಗೊಂಡಿದೆ. ಇದು ಭಾರತ, ನೇಪಾಳ ಮತ್ತು ಟಿಬೆಟ್ ಗಡಿಯಲ್ಲಿದೆ. ನೈನಿ ಸೈನಿ ವಿಮಾನ ನಿಲ್ದಾಣದಿಂದ ಆದಿ ಕೈಲಾಸ ಮತ್ತು ಓಂ ಪರ್ವತ ಶಿಖರಗಳಿಗೆ ಹೆಲಿಕಾಪ್ಟರ್ ಸೇವೆಯೂ ಆರಂಭವಾಗಿದೆ.

omparvat travel

ಆರಾಮದಾಯಕ ಹೋಂಸ್ಟೇಗಳು

ಆದಿ ಕೈಲಾಸ ಮತ್ತು ಓಂ ಪರ್ವತವು ಪಿಥೋರಗಢ ಜಿಲ್ಲೆಯಲ್ಲಿ ಭಾರತ-ಚೀನಾ ಗಡಿಯಲ್ಲಿದೆ. ಎರಡೂ ಶಿಖರಗಳು ಶಿವನ ಭಕ್ತರಿಗೆ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿವೆ. ಆದಿ ಕೈಲಾಸ ಮತ್ತು ಓಂ ಪರ್ವತದ ಬಳಿ ವ್ಯಾಸ್ ಕಣಿವೆಯಿದೆ. ಈ ಮಾರ್ಗವು ಹಚ್ಚ ಹಸಿರಿನ ಮತ್ತು ಸುಂದರವಾದ ಕಣಿವೆಗಳನ್ನು ಹೊಂದಿದ್ದು, ಗುಂಜಿ, ಕುಟಿ, ನಾಭಿ ಮುಂತಾದ ಸುಂದರ ಹಳ್ಳಿಗಳನ್ನು ಹೊಂದಿದೆ. ಈ ಹಳ್ಳಿಗಳಲ್ಲಿ ಆರಾಮದಾಯಕ ಹೋಂಸ್ಟೇಗಳಿವೆ. ಈ ಸ್ಥಳಗಳಿಗೆ ರಸ್ತೆಯ ಮೂಲಕವೂ ಪ್ರಯಾಣಿಸಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+