ಗುರುದ್ವಾರ ತಹ್ಲಿ ಸಾಹಿಬ್ ನವಾನಶಹರ್ ಅನ್ನು ಶ್ರೀ ಗುರು ನಾನಕ್ ದೇವ್ ಜೀಯವರ ಪುತ್ರನಾದ ಬಾಬಾ ಶ್ರೀ ಚಂದ್ನ ನೆನಪಿಗಾಗಿ ನಿರ್ಮಿಸಲಾಗಿದೆ. ಇದು ರಹೊನ್ ರೈಲು ನಿಲ್ದಾಣದಿಂದ 10 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ನಂಬಿಕೆಗಳ ಪ್ರಕಾರ ಬಾಬಾ ಶೀ ಚಂದ್ ಇಲ್ಲಿ ಸುಮಾರು 40 ದಿನಗಳ ಕಾಲ ಧ್ಯಾನವನ್ನು ಮಾಡಿದರಂತೆ. ಇಲ್ಲಿ...
ಗುರುದ್ವಾರ ಸಿಂಗ್ ಸಭಾ ನವಾನಶಹರ್ ಅನ್ನು 1928ರಲ್ಲಿ ನಿರ್ಮಾಣ ಮಾಡಲಾಯಿತು. ಇದನ್ನು 25 ಮಂದಿ ಇದ್ದ ಒಂದು ಸಮಿತಿಯು, ಭೂಮಿಯನ್ನು ಖರೀದಿಸಿ ನಿರ್ಮಾಣ ಮಾಡಿತು. ಈ ಗುರುದ್ವಾರವನ್ನು ನಿರ್ಮಿಸಿ 23 ವರ್ಷಗಳು ಕಳೆದ ನಂತರ ಐದು ಜನರ ಸಮಿತಿಯು ಇಲ್ಲಿ ಹೆಚ್ಚುವರಿ ಭೂಮಿಯನ್ನು ಖರೀದಿಸಿ, ವಸತಿಗಾಗಿ ಕೆಲವು ಕೋಣೆಗಳನ್ನು, ಕಛೇರಿ,...
ಕಿರ್ಪಾಲ್ ಸಾಗರ್ ರಹೊನ್ಗೆ ಸಮೀಪದ ದರಿಯಪುರ್ ಎಂಬ ಗ್ರಾಮದಲ್ಲಿ ನೆಲೆಗೊಂಡಿದೆ. ಈ ಸ್ಥಳವು ಮನುಜಮತ ತಾನೊಂದೆ ವಲಂ ಎಂಬ ಕವಿವಾಣಿಯನ್ನು ನೆನಪಿಸುವಂತೆ ನಿಂತಿದೆ. ಇಲ್ಲಿ ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರೈಸ್ತ ಧರ್ಮದ ಜನರು ಬಂದು ಪೂಜಾ ಕೈಂಕರ್ಯಗಳನ್ನು ಮಾಡಿಕೊಂಡು ಹೋಗುತ್ತಿರುತ್ತಾರೆ. ಇದನ್ನು ಸಂತ ಕಿರ್ಪಾಲ್...
ಗುರುದ್ವಾರ ನನಕ್ಸರ್ ನವಾನಶಹರಕ್ಕೆ ಪೂರ್ವ ಭಾಗದಲ್ಲಿ ನೆಲೆಗೊಂಡಿರುವ ಹಕಿಂಪುರ್ ಎಂಬ ಹಳ್ಳಿಯಲ್ಲಿ ನೆಲೆಗೊಂಡಿದೆ. ಇದನ್ನು ಗುರು ಹರಿ ರೈ ಸಾಹಿಬ್ ಜೀಯವರ ನೆನಪಿನಾರ್ಥವಾಗಿ ಮಹಾರಾಜ ರಂಜಿಸ್ ಸಿಂಗ್ರವರು ನಿರ್ಮಿಸಿದರು. ನಂಬಿಕೆಗಳ ಪ್ರಕಾರ ಈ ಗುರುಗಳು ಕಿರಟ್ಪುರ್ ಸಾಹಿಬ್ ಕಡೆಗೆ ತೆರಳುತ್ತಿದ್ದಾಗ, ಇಲ್ಲಿ ಕೆಲ ದಿನಗಳ...
ಗುರುದ್ವಾರ ಚರಣ್ ಕವಲ್ (ಜೀನ್ಡೊವಲಿ) ಅನ್ನು ಸಿಖ್ಖರ ಆರನೆಯ ಗುರುವಾದ ಗುರು ಹರ್ ಗೋವಿಂದ್ ಸಿಂಗ್ ಜೀಯವರ ನೆನಪಿನಾರ್ಥವಾಗಿ ನಿರ್ಮಿಸಲಾಗಿದೆ. ನಂಬಿಕೆಗಳ ಪ್ರಕಾರ ಈ ಗುರುಗಳು ಪೆಂಡೆ ಖಾನನನ್ನು ಕೊಂದ ನಂತರ ಇಲ್ಲಿಗೆ ಆಗಮಿಸಿದ್ದರಂತೆ. ಅವರು ಇಲ್ಲಿ ಉಳಿದುಕೊಂಡಿದ್ದಾಗ ಇಲ್ಲಿನ ಸ್ಥಳೀಯ ಜಮೀನ್ದಾರನಾದ ಜೀವನಿಗೆ...
ಗುರುದ್ವಾರ ಗುರ್ಪಲಹ್ (ಸೊಟ್ರನ್) ಎಂಬುದು ಸಿಖ್ಖರ ಆರನೆಯ ಗುರುವಾದ ಗುರು ಹರ್ ಗೋವಿಂದ್ ಸಾಹಿಬ್ ಜೀಯವರ ಗೌರವಾರ್ಥವಾಗಿ ನಿರ್ಮಿಸಲಾದ ಒಂದು ಸುಂದರವಾದ ಗುರುದ್ವಾರವಾಗಿದೆ. ನಂಬಿಕೆಗಳ ಪ್ರಕಾರ ತಾವು ಭಾಗವಹಿಸಿದ ಕೊನೆಯ ಯುದ್ಧವನ್ನು ಮುಗಿಸಿಕೊಂಡು ಕಿರಟ್ಪುರ್ ಸಾಹಿಬ್ ಕಡೆಗೆ ಹೊರಟಾಗ, ಈ ಗುರುಗಳು ಇಲ್ಲಿ ಕೆಲದಿನಗಳು...
ಗುರುದ್ವಾರ್ ಗುರ್ ಪರ್ತಾಪ್ ಎಂಬುದು ಸಿಖ್ಖರ ಒಂಬತ್ತನೆಯ ಗುರುವಾದ ಗುರು ತೇಗ್ ಬಹದ್ದೂರ್ ಸಾಹಿಬ್ ಜೀಯವರ ನೆನಪಿನಾರ್ಥವಾಗಿ ಥಾನ ಬೆಹ್ರಮ್ ಎಂಬ ಹಳ್ಳಿಯಲ್ಲಿ ನಿರ್ಮಿಸಲಾಗಿರುವ ಒಂದು ಗುರುದ್ವಾರವಾಗಿದೆ. ಈ ಗುರುದ್ವಾರವಿರುವ ಸ್ಥಳವನ್ನು "ಪಂಜಾಬಿನ ಕೇಸರಿ" ಎಂದು ಕರೆಯಲ್ಪಡುತ್ತಿದ್ದ ಮಹಾರಾಜ ರಣ್ಜೀತ್...
ಫರಲದಲ್ಲಿರುವ ಗುರುದ್ವಾರ ಹರ್ ರೈ ಡಂಡ ಸಾಹಿಬ್ ಸಂಧ್ವಾನ್ ಅನ್ನು ಸಿಖ್ಖರ ಪ್ರಮುಖ ಗುರುಗಳಲ್ಲಿ ಒಬ್ಬರಾದ ಗುರು ಹರ್ ರೈ ಜೀಯವರ ನೆನಪಿಗಾಗಿ ನಿರ್ಮಾಣ ಮಾಡಲಾಗಿದೆ. ಗುರು ಹರ್ ರೈ ಜೀಯವರು ಮೊಘಲರ ಕಾಲದಲ್ಲಿ ಶ್ರೀ ಆನಂದ್ಪುರ್ ಸಾಹಿಬ್ಗೆ ಹೋಗುವಾಗ ಇಲ್ಲಿ ನಿಂತು ವಿಶ್ರಾಂತಿ ಪಡೆದರಂತೆ. ಈ ಧಾರ್ಮಿಕ ಸ್ಥಳವು ನಗರದ...
ಗುರುದ್ವಾರ ಶಹಿದಾನ್ ಉರಪರ್ ಅನ್ನು ರಹೊನ್ನಲ್ಲಿ ಬಂಡ ಬಹದೂರ್ ವಿರುದ್ಧ ನಡೆದ ಯುದ್ಧದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸೈನಿಕರ ನೆನಪಿಗಾಗಿ ನಿರ್ಮಿಸಲಾಗಿದೆ. 1711ರಲ್ಲಿ ನಿರ್ಮಾಣಗೊಂಡ ಈ ಗುರುದ್ವಾರವು ಮೂಲತಃ ಹುತಾತ್ಮರಾದ ಸಿಖ್ ಸೈನಿಕರ ರುದ್ರಭೂಮಿಯಾಗಿತ್ತು.
ಗುರುದ್ವಾರ ಶಹೀದ್ಗಂಜ್ ತಲ್ವಂಡಿ ಜಟ್ಟನ್ ಅನ್ನು ಸುಬೇದಾರ್ ಶಮಸ್ ಖಾನ್ ವಿರುದ್ಧ ನಡೆದ ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದ ಸೈನಿಕರಿಗೆ ಗೌರವ ಸಲ್ಲಿಸಲು ನಿರ್ಮಿಸಲಾಯಿತು. ಸುಬೇದಾರ್ ಶಮಸ್ ಖಾನ್ ಬೆಹ್ರಾಂನಿಂದ ಒಂದು ಹುಡುಗಿಯನ್ನು ಅಪಹರಿಸಿಕೊಂಡು ಹೋದಾಗ ಗೊಡ್ರಿಯ ಸಿಂಗ್, ಲೊಡ್ರಿಯ ಸಿಂಗ್ ಮತ್ತು ರೂಪ್...
ಗುರುದ್ವಾರ ಮಂಜಿ ಸಾಹಿಬ್ ನವಾನಶಹರ್ ಎಂಬುದು ಈ ನಗರದಲ್ಲಿ ನೆಲೆಗೊಂಡಿರುವ ಅತ್ಯಂತ ಪ್ರಾಚೀನ ಗುರುದ್ವಾರವಾಗಿದೆ. ನಂಬಿಕೆಗಳ ಪ್ರಕಾರ ಇಲ್ಲಿ ಸಿಖ್ಖರ ಒಂಬತ್ತನೆಯ ಗುರು- ಗುರು ತೇಗ್ ಬಹದ್ದೂರ್ ಜೀಯವರು ಬಾಬಾ ಬಕಲ ಸಾಹಿಬ್ನಿಂದ ಕಿರಾತ್ಪುರ್ ಸಾಹಿಬ್ಗೆ ಹೋಗುವ ಹಾದಿಯಲ್ಲಿ ಕೆಲ ಕಾಲ ತಂಗಿದ್ದರಂತೆ. ಇವರ...
ಗುರುದ್ವಾರ ಭಾಯ್ ಸಿಖ್ ಹಿಯಾಲವನ್ನು ಬಾಬಾ ಭಾಯ್ ಸಿಖ್ರವರು ಹಿಂದೆ ನೆಲೆಸಿದ್ದರೆಂದು ನಂಬಲಾದ ನಿವಾಸದಲ್ಲಿ ನಿರ್ಮಾಣ ಮಾಡಲಾಗಿದೆ. ನಂಬಿಕೆಗಳ ಪ್ರಕಾರ ಬಾಬಾಜೀಯವರು ಇಲ್ಲಿ ನೆಲೆಸಿ ಭಕ್ತಾಧಿಗಳಿಗೆ ಆಧ್ಯಾತ್ಮಿಕ ಸಾಕ್ಷಾತ್ಕಾರವನ್ನು ಉಂಟು ಮಾಡುತ್ತಿದ್ದರು ಎಂದು ಭಾವಿಸಲಾಗಿದೆ. ಅವರ ಪ್ರಕಾರ ಯಾರು ಮಾನವೀಯತೆಯಿಂದ ಜನರ...
ನವಾನಶಹರದಲ್ಲಿರುವ ಸನೆಹಿ ದೇವಾಲಯವನ್ನು 1869 ರಿಂದ 1875ರ ಅವಧಿಯಲ್ಲಿ ನಿರ್ಮಾಣ ಮಾಡಲಾಯಿತು. ಆ ಕಾಲದಲ್ಲಿ ಇದನ್ನು ನಿರ್ಮಿಸಲು 18665 ರೂಪಾಯಿಗಳಷ್ಟು ಖರ್ಚಾಗಿತ್ತಂತೆ. ಇದರ ಒಳಗೆ ಜೈಪುರದಿಂದ ತರಲಾದ ಮಾತಾ ಚಿಂತಪೂರ್ಣಿಯ ವಿಗ್ರಹವಿದೆ. ಜನರ ನಂಬಿಕೆಯ ಪ್ರಕಾರ ಈ ದೇವಾಲಯಕ್ಕೆ ಭೇಟಿ ನೀಡುವುದರಿಂದ ಜೀವನದಲ್ಲಿರುವ ಐಹಿಕ...
ಸೂರಜ್ ಕುಂಡ್ ರಹೊನ್ ಎಂಬುದು ಒಂದು ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಇದು ನವಾನಶಹರದ ಕೇಂದ್ರಭಾಗದಿಂದ ಒಂದು ಕಿಲೋ ಮೀಟರಿನಷ್ಟು ದೂರದಲ್ಲಿದೆ. ಈ ಸ್ಥಳದಲ್ಲಿ ಶ್ರೀ ರಾಮಚಂದ್ರನಿಗೆ ಸಂಬಂಧಿಸಿದವು ಎಂದು ಹೇಳಲಾಗುವ ಕುಂಡಗಳು ( ಕೊಳಗಳು) ಇವೆ. ಪಠಾಣರ ಆಡಳಿತಾವಧಿಯಲ್ಲಿ ಬಾವಾ ಔಘರ್ ಈ ಸ್ಥಳವನ್ನು ನಿರ್ಮಿಸಿ, ಅದಕ್ಕೆ ಸೂರಜ್...
ರೋಝಾ ಶರೀಫ್ ಮಂಡಲಿಯನ್ನು ಮುಸಲ್ಮಾನ ಸಂತ ಗೊಸ್ಪಾಲ್ರವರ ಎಂಟು ಜನ ಗಂಡು ಮಕ್ಕಳಲ್ಲಿ ಒಬ್ಬರಾದ ಬಾಬಾ ಅಬ್ದುಲ್ಲಾ ಶಹ್ ಕದ್ರಿಯವರ ಗೌರವಾರ್ಥವಾಗಿ ನಿರ್ಮಿಸಲಾಯಿತು. ಇದು ಮಂಡಲಿ ಎಂಬ ಸ್ಥಳದಲ್ಲಿ ನೆಲೆಗೊಂಡಿದೆ. ಇಲ್ಲಿಗೆ ಹತ್ತಿರದ ರೈಲು ನಿಲ್ದಾಣಕ್ಕೆ ಇವರ ಹೆಸರನ್ನೆ ಇಡಲಾಗಿದ್ದು, "ಬಾಬಾ ಅಬ್ಧುಲ್ಲಾ ಶಾ ಕದ್ರಿ ರೈಲು...