ಗುರುದ್ವಾರ ನನಕ್ಸರ್ ನವಾನಶಹರಕ್ಕೆ ಪೂರ್ವ ಭಾಗದಲ್ಲಿ ನೆಲೆಗೊಂಡಿರುವ ಹಕಿಂಪುರ್ ಎಂಬ ಹಳ್ಳಿಯಲ್ಲಿ ನೆಲೆಗೊಂಡಿದೆ. ಇದನ್ನು ಗುರು ಹರಿ ರೈ ಸಾಹಿಬ್ ಜೀಯವರ ನೆನಪಿನಾರ್ಥವಾಗಿ ಮಹಾರಾಜ ರಂಜಿಸ್ ಸಿಂಗ್ರವರು ನಿರ್ಮಿಸಿದರು. ನಂಬಿಕೆಗಳ ಪ್ರಕಾರ ಈ ಗುರುಗಳು ಕಿರಟ್ಪುರ್ ಸಾಹಿಬ್ ಕಡೆಗೆ ತೆರಳುತ್ತಿದ್ದಾಗ, ಇಲ್ಲಿ ಕೆಲ ದಿನಗಳ ಕಾಲ ವಿಶ್ರಾಂತಿಯನ್ನು ಪಡೆದರಂತೆ. ದಂತಕತೆಗಳ ಪ್ರಕಾರ ಈ ಗುರುಗಳು ಇಲ್ಲಿಗೆ ಭೇಟಿ ನೀಡಿದಾಗ ಅವರೊಂದಿಗೆ 2200 ಸೈನಿಕರು ಇದ್ದರಂತೆ. ಆಗ ಅವರು ತಮ್ಮ ಕುದುರೆಗಳನ್ನು ಇಲ್ಲಿನ ಅರಳಿ ಮತ್ತು ಬೇವಿನ ಮರಗಳಿಗೆ ಕಟ್ಟಿ ಹಾಕಿದರಂತೆ. ಈ ವೃಕ್ಷ ಇಂದಿಗು ಈ ಗುರುದ್ವಾರದ ಆವರಣದಲ್ಲಿ ಕಾಣಸಿಗುತ್ತವೆ. ಗುರುದ್ವಾರ ನನಕ್ಸರ್ ಗುರು ತೇಗ್ ಬಹದ್ದೂರ್ ಸಾಹಿಬ್ ಜೀಯವರ ವಿಶ್ರಾಂತಿ ತಾಣವಾಗಿ ಸಹ ಸೇವೆ ಸಲ್ಲಿಸಿತ್ತು. ಇವರು ಶ್ರೀ ಆನಂದ್ಪುರ್ ಸಾಹಿಬ್ ಕಡೆಗೆ ತೆರಳುತ್ತಿದ್ದಾಗ ಇಲ್ಲಿ ವಿಶ್ರಾಂತಿ ಪಡೆದಿದ್ದರಂತೆ. ಇದರ ಜೊತೆಗೆ ನನಕ್ಸರ್ ಗುರುದ್ವಾರವು ಬಂಗ- ಹಕಿಂಪುರ-ಫಗ್ವಾರ ರಸ್ತೆಯಲ್ಲಿ ನೆಲೆಗೊಂಡಿದೆ. ಬಹಿರಮ್ ರೈಲು ನಿಲ್ದಾಣದಿಂದ ಇಲ್ಲಿಗೆ ಕೇವಲ 5 ಕಿ.ಮೀ.ಗಳಷ್ಟು ದೂರವಾಗುತ್ತದೆ.