ಸಿಖ್ ಧರ್ಮದ 10ನೇ ಗುರುಗಳ 10ನೇ ಪಠಶಾಹಿಯಾದ ಶ್ರೀ ಗುರುದ್ವಾರ ಸಾಹಿಬ್, ಈ ಪ್ರದೇಶದ ಅತ್ಯಂತ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಬಿಯಸ್ ನದಿಯ ದಡದಲ್ಲಿರುವ ಗುರುದ್ವಾರವು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಪಂಜಾಬ್ನ ಶಿರೋಮಣಿ ಗುರುದ್ವಾರ ಮ್ಯಾನೇಜ್ಮೆಂಟ್ ಕಮಿಟಿ ಅಮೃತಸರದಿಂದ ಇದು ನಿರ್ವಹಿಸಲ್ಪಡುತ್ತಿದೆ.
ಯುದ್ಧದಲ್ಲಿ ಮೊಘಲರನ್ನು ಸೋಲಿಸಿದ ನಂತರ ಎಂಟು ದಿನಗಳವರೆಗೆ ಸಿಖ್ಖರ 10ನೇ ಗುರು, ಗುರು ಗೋವಿಂದ ಸಿಂಗ್ ಇಲ್ಲಿ ಉಳಿದುಕೊಂಡಿದ್ದರು. ಇದೇ ಸ್ಥಳದಲ್ಲಿ ಧಾರ್ಮಿಕ ಕೇಂದ್ರವನ್ನು ಸ್ಥಾಪಿಸಲಾಗಿದೆ. ಮೊಘಲ್ ದೊರೆ ಅಲ್ಫಾ ಖಾನ್ ಹುಸೇನ್ ವಿರುದ್ಧ ಇವರು 500 ಸಿಖ್ ಸೈನಿಕರೊಂದಿಗೆ ಯುದ್ಧ ಮಾಡಿದ್ದರು. 1891ರ ಏಪ್ರಿಲ್ 4 ರಂದು ಯುದ್ಧ ನಡೆದಿತ್ತು. ಗುರು ಗೋವಿಂದ್ ಸಿಂಗ್ರು 'ದಸ್ಸಂ ಗ್ರಂಥ'ದ ನಾದೌನ್ ಜಂಗ್ ಎಂಬ ಅಧ್ಯಾಯದಲ್ಲಿ ಈ ಬಗ್ಗೆ ವಿವರಿಸಿದ್ದಾರೆ. ಈ ಗ್ರಂಥವು ಸಿಖ್ಖರಿಗೆ ಅತ್ಯಂತ ಪವಿತ್ರವಾದದ್ದು.