ಹಾಹಾ ಪಂಚಕುಮಾರಿ ಖರ್ಗಾಪುರ ಅಣೆಕಟ್ಟಿನ ಮೇಲಿರುವ ಸುಂದರವಾದ ಜಲಪಾತ. ಇಲ್ಲಿನ ಸ್ಥಳೀಯ ಐತಿಹ್ಯಗಳ ಪ್ರಕಾರ ಖರ್ಗಾಪುರದ ರಾಜನು ದೆಹಲಿಯ ಬಂಧೀಖಾನೆಯಲ್ಲಿ ಬಂಧಿತನಾಗಿದ್ದನು. ಆಗ ಅವನ ಐವರು ಹೆಣ್ಣುಮಕ್ಕಳು ಖರ್ಗಾಪುರ ಬೆಟ್ಟಗಳಲ್ಲಿ ಆಶ್ರಯ ಪಡೆದಿದ್ದರು. ಅಂದಿನಿಂದ ಈ ಜಲಪಾತವನ್ನು ಪಂಚಕುಮಾರಿ ಎಂದು ಕರೆಯಲಾಗುತ್ತದೆ. ಖರ್ಗಾಪುರದಿಂದ ಪ್ರವಾಸಿಗರು ದೋಣಿಯನ್ನು ಬಾಡಿಗೆಗೆ ಪಡೆದು ಈ ಜಲಪಾತದ ತಂಪನ್ನು ಮತ್ತು ಸೌಂದರ್ಯವನ್ನು ಸವಿಯಬಹುದು.


Click it and Unblock the Notifications