1929ರಲ್ಲಿ ಅಂದಿನ ಅರಸರಾಗಿದ್ದ ರಾವ್ ವಿಜಯರಾಜ್ಜಿಯವರು ನಿರ್ಮಿಸಿದ್ದರು. ನಂತರ ಬ್ರಿಟಿಶರು ಈ ಪ್ರದೇಶವನ್ನು ಆಕ್ರಮಿಸಿಕೊಂಡು ಈ ಅರಮನೆಯನ್ನು ತಮ್ಮ ಬೇಸಿಗೆಯ ವಿಹಾರಧಾಮವನ್ನಾಗಿ ಮಾರ್ಪಾಡಿಸಿದ್ದರು. ಬ್ರಿಟಿಶರ ಹಲವು ಸಮಾಧಿಗಳು ಈ ಸ್ಥಳದಲ್ಲಿರುವ ಕಾರಣ ಅಂದಿನ ದಿನಗಳಲ್ಲಿ ಈ ಅರಮನೆ ಪಡೆದಿದ್ದ ಮಹತ್ವವನ್ನು ಗಮನಿಸಬಹುದು....
ದ ಶ್ಯಾಮಜೀ ಕೃಷ್ಣ ವರ್ಮಾ ಮೆಮೋರಿಯಲ್ ಎಂದೂ ಕರೆಯಲ್ಪಡುವ ಈ ಕಟ್ಟಡ ಸ್ವಾತಂತ್ರ್ಯ ಹೋರಾಟಗಾರ ಶ್ಯಾಮಜೀ ಕೃಷ್ಣ ವರ್ಮಾ ರವರ ಕೊಡುಗೆಯನ್ನು ವಿಶದಪಡಿಸುತ್ತದೆ. ಇಲ್ಲಿರುವ ಕಲಶಗಳಲ್ಲಿ ಶ್ಯಾಮಜೀ ಕೃಷ್ಣ ವರ್ಮಾ ಹಾಗೂ ಅವರ ಪತ್ನಿ ಭಾನುಮತಿಯವರ ಅಸ್ಥಿಗಳನ್ನಿರಿಸಲಾಗಿದೆ. ಅಕ್ಟೋಬರ್ 4,2009ರಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ...
ಮಾಂಡ್ವಿಯ ನಾನೂರು ವರ್ಷ ಹಳೆಯದಾದ ಹಡಗು ನಿರ್ಮಾಣ ಘಟಕ ಇಂದಿಗೂ ಕಾರ್ಯನಿರತವಾಗಿದ್ದು ಪ್ರವಾಸಿಗರ ಕುತೂಹಲವನ್ನು ತಣಿಸುತ್ತದೆ. ಇದೇ ಸ್ಥಳದಲ್ಲಿ ’ ಬಾಜಿಕಟ್ಟುವವರ ಗೋಪುರ' ವೂ ಇದೆ. ಇಲ್ಲಿ ಹಿಂದೆ ಕ್ಷಿತಿಜದಲ್ಲಿ ಚುಕ್ಕೆಯಂತೆ ಕಾಣಿಸುತ್ತಿದ್ದ ಹಡಗುಗಳನ್ನು ನೋಡಿ ಯಾವ ಹೊತ್ತಿನಲ್ಲಿ ಬಂದರು ತಲುಪುತ್ತದೆ ಎಂದು...
ಮಾಂಡ್ವಿಯಿಂದ ಸುಮಾರು ಹತ್ತು ಕಿ.ಮೀ ದೂರವಿರುವ ಕೋಡೆ ಎಂಬ ಊರಿನಲ್ಲಿ ಜೈನರ ಎಪ್ಪತ್ತೆರಡು ದೇಗುಲಗಳ ಸಮುಚ್ಛಯವಿದೆ. ನಮ್ಮ ಮೂಡಬಿದರೆಯಲ್ಲಿರುವ ಬಸದಿಯ ಮಾದರಿಯಂತೆ ಇಲ್ಲೂ ಸಾವಿರಾರು ಕಂಭಗಳೀಳಿವೆ. ಆದರೆ ಪ್ರತಿಯೊಂದು ಕಂಭದಲ್ಲೂ ಅತ್ಯಂತ ಸುಂದರ ಹಾಗೂ ಸೂಕ್ಷ್ಮವಾದ ಕೆತ್ತನೆಯ ಕಾರ್ಯಗಳನ್ನು ನಡೆಸಲಾಗಿದ್ದು ಗಮನ...
ಭಾರತದ ಅತಿದೊಡ್ಡ ಖಾಸಗಿ ಬಂದರು ಆಗಿರುವ ಮುಂಡ್ರಾ ಕಛ್ ಜಿಲ್ಲೆಯ ದಕ್ಷಿಣ ತೀರದಲ್ಲಿದೆ. ಹಿಂದೆ ಉಪ್ಪು ಮತ್ತು ಮಸಾಲೆ ಪದಾರ್ಥಗಳಿಗೆ ಹೆಸರಾಗಿದ್ದ ಈ ರೇವುಪಟ್ಟಣ ಇಂದು ಕೃತಕ ಬಣ್ಣ ಹಾಗೂ ಬಟ್ಟೆಗಳಿಗೆ ವಿನ್ಯಾಸ ನೀಡುವ ಮರದ ಅಚ್ಚುಗಳ ವಹಿವಾಟಿಗೆ ಹೆಸರಾಗಿದೆ.
ಮುಂಡ್ರಾ ತಾಲ್ಲೂಕಿನಿಂದ ಸುಮಾರು 32 ಕಿ.ಮೀ ದೂರವಿರುವ ಭದ್ರೇಶ್ವರದಲ್ಲಿರುವ ಜೈನ್ ಕಾಂಪ್ಲೆ಼ಕ್ಸ್ ಜೈನರ ಪಾಲಿನ ಪವಿತ್ರ ತಾಣವಾಗಿದೆ. ಅಚ್ಚ ಬಿಳಿಯ ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟ ದೇವಾಲಯದಲ್ಲಿ ಐವತ್ತೆರಡು ಕಿರಿಯ ದೇವಾಲಯಗಳಿವೆ. ಇವುಗಳಲ್ಲಿ ಒಂದು ಕ್ರಿ.ಪೂ 500ನೇ ಇಸವಿಯ ಪಾರ್ಶವನಾಥನ ವಿಗ್ರಹ ಎಂದು ತಿಳಿದುಬರುತ್ತದೆ....